ರಾಜ್ಯದ ಬೀದರ್ (Bidar) ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ (CET Exams) ಬರೆಯಲು ಬಂದ ವಿದ್ಯಾರ್ಥಿ ಜನಿವಾರ ತೆಗೆಯಲಿಲ್ಲ ಎಂಬ ಕಾರಣಕ್ಕೆ ಪರೀಕ್ಷೆಯಿಂದ ವಂಚಿತನಾದ ಕೇಸ್ ಗೆ ಸಂಬದಪಟ್ಟಂತೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದಾರೆ.

ಈ ರೀತಿಯಾಗಿ ವಿದ್ಯಾರ್ಥಿಗೆ ಜನಿವಾರ ತೆಗೆಸಿದ್ದು ತಪ್ಪು, ಈ ಸಂಪ್ರದಾಯ ಸರಿಯಲ್ಲ.ಕೆಲವರು ಜನಿವಾರ ಹಾಕ್ತಾರೆ,ಕೆಲವರು ಲಿಂಗ ಹಾಕ್ತಾರೆ. ಅದು ಅವರವರ ನಂಬಿಕೆ.ಆದ್ರೆ ಇದನ್ನು ತೆಗೆಸುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಪರೀಕ್ಷೆ ವೇಳೆ ಎಲೆಟ್ರಾನಿಕ್ಸ್ ಉಪಕರಣ ಹಾಕಿರುತ್ತಾರೆ.ಹಾಗಾಗಿ ಪೊಲೀಸರು ತಪಾಸಣೆ ಮಾಡ್ತಾರೆ.ಆದರೆ, ಜನಿವಾರ, ಲಿಂಗ ತೆಗೆಸಿದ್ದು ತಪ್ಪು.ಮಾಂಗಲ್ಯ ಸರ ಕೂಡ ಮಹಿಳೆಯರು ಹಾಕಿರುತ್ತಾರೆ.ಇದನ್ನೆಲ್ಲ ತೆಗೆಸುವುದು ತಪ್ಪು ಎಂದು ಡಿಸಿಎಂ ಡಿಕೆಶಿ ಶಿವಕುಮಾರ್ ಹಿಂದುಗಳ ಭಾವನೆಗಳ ಪರವಾಗಿ ಮಾತನಾಡಿದ್ದಾರೆ.