ಸದ್ಯ ರಾಜ್ಯ ಬಿಜೆಪಿಯಲ್ಲಿ (bjp) ಬಂಡಾಯದ ಬಿರುಗಾಳಿ ಬೀಸೋ ಸಣ್ಣ ಸುಳಿವು ಸಿಕ್ಕಂತಿದೆ. ಕಾರಣ ಲೋಕಸಭೆಗೆ ಟಿಕೆಟ್ (mp ticket) ಮಿಸ್ ಆದ ಪರಿಣಾಮ ಹಲವು ನಾಯಕರು ನೇರವಾಗಿ ಬಿಎಸ್ವೈ (Bsy)ವಿರುದ್ಧ ಅಸಮಾಧಾಗೊಂಡಂತಿದೆ. ನಮಗೆ ಟಿಕೆಟ್ ತಪ್ಪಿಸಿದ್ದೇ ಬಿಎಸ್ವೈ ಕಾರಣದಿಂದ ಅಂತ ಬುಸುಗುಟ್ಟುತ್ತಿದ್ದಾರೆ.ಈಗಾಗಲೇ ರಾಜ್ಯದ 20 (20 constituency) ಕ್ಷೇತ್ರಗಳಿಗೆ ಕೇಂದ್ರ ಬಿಜೆಪಿ ನಾಯಕರು ಟಿಕೆಟ್ ಘೋಷಿಸಿದ್ದು ಆ ಪೈಕಿ 8 ಕ್ಷೇತ್ರಗಳಲ್ಲಿ ತಳಮಳ ಉಂಟಾಗಿದೆ. ತುಮಕೂರು, ದಾವಣಗೆರೆ, ಹಾವೇರಿ, ಕೊಪ್ಪಳ, ಮೈಸೂರು, ಬೀದರ್, ಬೆಂಗಳೂರು ಉತ್ತರ, ಶಿವಮೊಗ್ಗ ಕ್ಷೇತ್ರಗಳಲ್ಲಿ ಈಗಾಗಲೇ ಅಸಮಾಧಾನ ಮತ್ತು ಗೊಂದಲಗಳು ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಅಭರ್ಥಿ ಆಯ್ಕೆಯ ವಿಚಾರ.

ರಾಜ್ಯದಲ್ಲಿ ಲೋಕಸಮರಕ್ಕೆ ಯಾವುದೇ ಕ್ಷೇತ್ರದ ಅಭ್ಯರ್ಥಿಯನ್ನ ಅಂತಿಮಗೊಳಿಸಬೇಕಾದ್ರೂ ಹೈಕಮ್ಯಾಂಡ್(Highcommand) ಒಮ್ಮೆ ಬಿಎಸ್ವೈ (Bsy)ಅಭಿಪ್ರಾಯ ಪಡೆದು ನಂತರ ಮುನ್ನಡೆಯುತ್ತಿದೆ. ಇದೇ ಕಾರಣಕ್ಕೆ ಇದೀಗ ಬಿಎಸ್ವೈ (Bsy) ಮೇಲೆ ಸ್ವಪಕ್ಷದ ಸಾಕಷ್ಟು ಹಿರಿಯ ನಾಯಕರೇ ಅಸಮಾಧಾಗೊಂಡಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ(BS yediyurappa) ಮೇಲೆ ಮುನಿಸಿಕೊಂಡಿರುವ ಬಿಜೆಪಿ ನಾಯಕರುಗಳ ಹೆಸರು ಹೇಳ್ತಾ ಹೋದ್ರೆ ದೊಡ್ಡ ಪಟ್ಟಿಯೇ ಮಾಡಬೇಕಾಗುತ್ತೆ. ಕೆ.ಎಸ್.ಈಶ್ವರಪ್ಪ, ಬಸನ ಗೌಡ ಪಾಟೀಲ್ ಯತ್ನಾಳ್, ಸದಾನಂದ ಗೌಡ, ಸಿ.ಟಿ ರವಿ, ಪ್ರತಾಪ್ ಸಿಂಹ ಹೀಗೆ. ಬಹಳಷ್ಟು ನಾಯಕರಿಗೆ ತಮ್ಮ ಟಿಕೆಟ್ (ticket) ಕೈ ತಪ್ಪಿದ್ದಕ್ಕೆ ಬಿ.ಎಸ್.ವೈ ನೇರ ಕಾರಣ ಎಂಬ ಅಭಿಪ್ರಾಯವಿದೆ.

ಆ ಪೈಕಿ ಈಗಾಗಲೇ ಈಶ್ವರಪ್ಪ (eshwarappa) ಮತ್ತು ಯತ್ನಾಳ್ (yatnal) ಬಹಿರಂಗವಾಗಿ ತಮ್ಮ ಬೇಸರ ಹೊರಹಾಕಿದ್ದು, ಈಶ್ವರಪ್ಪ ಬಿಎಸ್ವೈ (Bsy) ಪುತ್ರನ ವಿರುದ್ಧ ಸ್ವತಂತ್ರವಾಘಿ ಸ್ಪರ್ಧೆಗೆ ನಿಲ್ಲುವ ಘೋಷಣೆ ಮಾಡಿದ್ದಾರೆ. ಹೀಗೆ ಬಳ್ಳಾರಿಯಲ್ಲಿ ಆಕಾಂಕ್ಷಿಯಾಗಿದ್ದ ತಿಪ್ಪೇಶ್(Tippesh) ಕೂಡ ಇಂಡಿಪೆಂಡೆಂಟ್ ಆಗಿ ಸ್ಪರ್ಧಿಸೋ ನಿರ್ಧಾಯ ಮಾಡಿದ್ದಾರೆ. ದಿನದಿಂದ ದಿನಕ್ಕೆ ಪಕ್ಷದ ಒಳಗಿನ ಅಸಮಾಧಾನಗಳು ಹೆಚ್ಚಾಗ್ತಿದ್ದು ಬಿಎಸ್ವೈ(Bsy) ಮೇಲಿನ ಮುನಿಸಿಗೆ ಪಕ್ಷ ಒಳೇಟು ತಿನ್ನಬೇಕಾಗುತ್ತಾ ಎಂಬಾ ಆತಂಕ ಪಕ್ಷದ ಕೆಲ ನಾಯಕರಲ್ಲಿದೆ.

ರಾಜ್ಯ ಬಿಜೆಪಿ ನಾಯಕತ್ವದ ಜವಾಬ್ದಾರಿಯನ್ನ ಪುತ್ರ ವಿಜಯೇಂದ್ರಗೆ(vijayendra) ಕೊಡಿಸಿರುವ ಬಿಎಸ್ವೈ, ಇಷ್ಟೆಲ್ಲಾ ಅಸಮಾಧಾನ ಮತ್ತು ಒಳೇಟಿನ ಭೀತಿಯ ಮಧ್ಯೆ, ಚುನಾವಣೆಯ ಜೊತೆಜೊತೆಗೆ ತಮ್ಮ ಹಾಗೂ ಪುತ್ರನ ರಾಜಕೀಯ ತಾಕತ್ತು ಮತ್ತು ನಾಯಕತ್ವದ ಯಶಸನ್ನು ಸಾಭೀತುಪಡಿಸುವ ದೊಡ್ಡ ಸವಾಲನ್ನು ಎದುರಿಲಿದ್ದಾರೆ.






