
ವಿಜಯಪುರ: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಕಲಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ಮನೆಗೆ ಮುತ್ತಿಗೆ ಹಾಕುವ ಪ್ರತಿಭಟನೆಯಲ್ಲಿ ವಿಜಯೇಂದ್ರ ಭಾಗಿಯಾಗದ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ವಿಜಯೇಂದ್ರ ನೇತೃತ್ವದಲ್ಲಿ ಮುತ್ತಿಗೆ ಅಂತಾ ಎಲ್ಲಾ ಕಡೆ ಹಾಕಿಕೊಂಡಿದ್ದರು. ಭಾರಿ ಪ್ರತಿಭಟನೆ ಅಂತಾನೂ ಹೇಳಿದ್ರು. ಪಾಪಾ ವಿಜಯೇಂದ್ರ ಅವರಿಗೆ ಏನು ಕೆಲಸ ಇತ್ತು ಗೊತ್ತಿಲ್ಲ. ನಿನ್ನೆ ಮೂರು ಕಡೆ ಹೋರಾಟ ಆಗಿದೆ. ಒಂದು ವಕ್ಫ್ ವಿರುದ್ಧ ನಾವು ಹೋರಾಟ ಮಾಡಿದ್ದು,. ಇನ್ನೊಂದು ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ ಕಲಬುರಗಿಯಲ್ಲಿ ನಡೆದ ಹೋರಾಟ. ಇನ್ನೊಂದು ಬಾಣಂತಿಯರ ಸಾವು ಖಂಡಿಸಿ ಹೋರಾಟ ಎಂದಿದ್ದಾರೆ.

ವಿಜಯೇಂದ್ರ ಬಾಣಂತಿಯರ ಸಾವಿನ ವಿರುದ್ಧದ ಹೋರಾಟದಲ್ಲಿ ಭಾಗಿ ಆಗಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ನಮ್ಮಲ್ಲಿ ಸಾಮೂಹಿಕ ನಾಯಕತ್ವ ಇದೆ ಎಂದು. ಅವರಲ್ಲಿ ಶಿವಮೊಗ್ಗದಲ್ಲಿ ಹೋರಾಟ ಮಾಡಿದ್ದಾರೆ, ನಾವು ಇಲ್ಲಿ ಬಲ್ಳಾರಿಯಲ್ಲಿ ಮಾಡಿದ್ದೇವೆ ಅಷ್ಟೆ ಎಂದು ವಿಜಯೇಂದ್ರ ವಿರುದ್ಧ ವ್ಯಂಗ್ಯವಾಗಿಯೇ ಚಾಟಿ ಬೀಸಿದ್ದಾರೆ ಎನಿಸುತ್ತದೆ.
ಆರ್ ಅಶೋಕ್, ವಿಜಯೇಂದ್ರ ಮಧ್ಯೆ ಹೊಂದಾಣಿಕೆ ಕೊರತೆ ಇದೆಯಾ ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಆರ್ ಅಶೋಕ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗ್ತಾರೆ. ಬೆಳಗಾವಿ ಅಧಿವೇಶನದ ವೇಳೆ ನಮ್ಮ ಹಿರಿಯರ ಸಲಹೆ ಪಡೆದು ಚರ್ಚೆ ಮಾಡಿದ್ದಾರೆ. ಎಲ್ಲರಿಗೂ ಅವಕಾಶ ಕೊಟ್ಟಿದ್ದಾರೆ. ಅವರ ಬಗ್ಗೆ ನಮ್ಮದೇನು ಆರೋಪಗಳಿಲ್ಲ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ವಿಚಾರವಾಗಿ ಚುನಾವಣೆ ಪ್ರಕ್ರಿಯೆ ಇದ್ದೇ ಇರುತ್ತದೆ.ಪ್ರಲ್ಹಾದ ಜೋಶಿ ಅವರು ಹೇಳಿದ್ದು ಸರಿಯಿದೆ.ಅವರು ಹೇಳಿದ್ರಲ್ಲಿ ತಪ್ಪೇನಿಲ್ಲ.ಈಗ ಇದು ಅಡ್ಡಾಳ ಸಮಿತಿ ಇದೆ, ಮುಂದೆ ಬರೋದು ರೆಗ್ಯುಲರ್ ಚುನಾಯಿತ ಅಧ್ಯಕ್ಷರು.ಅದು ಯಾರು ಆಗ್ತಾರೆ, ಯಾರು ಆಗಬೇಕು ಅಂತಾ ಹೈಕಮಾಂಡ್ಗೆ ಅಧಿಕಾರ ಕೊಟ್ಟಿದೆ.ಕೇಂದ್ರದ ಹೈಕಮಾಂಡ್ ನಾಯಕರು ಯಾರಿಗೆ ಅಧ್ಯಕ್ಷರನ್ನ ಮಾಡಬೇಕು ಅಂತಾ ಇಚ್ಛಿಸುತ್ತೆ ಅವರನ್ನ ಮಾಡ್ತಾರೆ. ಚುನಾವಣೆ ಆಗೋದಿಲ್ಲ, ಸಹಮತ ಮಾಡಿಕೊಂಡು ರಾಜ್ಯಾಧ್ಯಕ್ಷ ಆಯ್ಕೆ ಮಾಡ್ತಾರೆ ಎಂದಿದ್ದಾರೆ.