• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಜೆಡಿಎಸ್‌ಗೆ ಗುರಿಯಿಟ್ಟುಕೊಂಡೇ ಬೊಮ್ಮಾಯಿ ಆಯ್ಕೆ ನಡೆಯಿತೇ?

ಕರ್ಣ by ಕರ್ಣ
August 2, 2021
in ಅಭಿಮತ
0
ಜೆಡಿಎಸ್‌ಗೆ ಗುರಿಯಿಟ್ಟುಕೊಂಡೇ ಬೊಮ್ಮಾಯಿ ಆಯ್ಕೆ ನಡೆಯಿತೇ?
Share on WhatsAppShare on FacebookShare on Telegram

ಬಹಳ ಕುತೂಹಲ ಕೆರಳಿಸಿ, ತಣ್ಣಗೆ ತೆರೆ ಬಿದ್ದ ರಾಜ್ಯ ರಾಜಕೀಯ ಪಲ್ಲಟಗಳಿಂದ ಗೃಹಮಂತ್ರಿಯಾಗಿದ್ದ ಬಸವರಾಜ್‌ ಬೊಮ್ಮಾಯಿಗೆ ಮುಖ್ಯಮಂತ್ರಿ ಅವಕಾಶ ಸಿಕ್ಕಿತು. ಈ ಮೂಲಕ ಬಿಎಸ್‌ ಯಡಿಯೂರಪ್ಪನ ಉತ್ತರಾಧಿಕಾರಿಯಾಗಿ ಬೊಮ್ಮಾಯಿ ಸಿಎಂ ಆದರು. ಆದರೆ ಇದರ ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಹೀಗೆ ಕೆಲವೊಂದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೊಮ್ಮಾಯಿ ಸಿಎಂ ಆದರೂ ಯಡಿಯೂರಪ್ಪನವರ ಕೈಯಲ್ಲೇ ಚುಕ್ಕಾಣಿ ಇದೆ ಎಂಬುವುದು ಇಲ್ಲಿಯ ಮಾತು. ಈ ಮಾತನ್ನು ಸುಳ್ಳು ಎಂದು ಹಾಗೆ ತಳ್ಳಿ ಹಾಕುವಂತಿಲ್ಲ. ರಾಜೀನಾಮೆ ಕೊಡುವಾಗ ಹೈಕಮಾಂಡ್‌ ಮುಂದೆ ಬೊಮ್ಮಾಯಿ ಹೆಸರು ಮುಂದಿಟ್ಟು ಸಿಎಂ ಖುರ್ಚಿ ಕೊಡಿ ಎಂದು ಬಿಎಸ್‌ವೈ ಕೇಳಿಕೊಂಡಿದ್ದೇ ಇದಕ್ಕೆ ಜ್ವಲಂತ ಸಾಕ್ಷಿ.

ADVERTISEMENT

ಇದರಾಚೆಗೂ ಕೆಲವೊಂದು ಲೆಕ್ಕಾಚಾರಗಳು ಇದ್ದೇ ಇದೆ. ಅಚಾನಕ್‌ ಆಗಿ ನಡೆಯುವ ಘನಟೆಗಳ ಲಾಭ ಪಡೆಯುವಲ್ಲಿ ಬಿಜೆಪಿ ನಾಯಕರು ನಿಸ್ಸೀಮರು. ಅಂಥದ್ದೇ ಒಂದು ರಾಜಕೀಯ ಲೆಕ್ಕಾಚರವೇ ಆಗಿದೆ ಸಿಎಂ ಖುರ್ಚಿಯಲ್ಲಿ ಬಸವರಾಜ್‌ ಬೊಮ್ಮಾಯಿ ಬಂದು ಕೂರಲು ಪ್ರಮುಖ ಕಾರಣ. ಯಡಿಯೂರಪ್ಪ ತನ್ನ ಆಪ್ತರೊಬ್ಬರ ಕೈಯಲ್ಲಿ ಅಧಿಕಾರವಿರಲಿ ಎಂಬ ಕಾರಣಕ್ಕೆ ಬೊಮ್ಮಾಯಿ ಹೆಸರು ಮುಂದಿಟ್ಟರಾದರೂ, ಕೇಂದ್ರ ಬಿಜೆಪಿ ನಾಯಕರು ಸುಖಾಸುಮ್ಮನೆ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಲು ಒಪ್ಪಲಿಲ್ಲವಂತೆ. ಹೈಕಮಾಂಡ್‌ನ ಈ ಒಪ್ಪಿಗೆಯೇ ಹಿಂದೆ ಬೇರೆಯೇ ರಾಜಕೀಯ ಲೆಕ್ಕಾಚಾರಗಳಿವೆ ಎನ್ನಲಾಗಿದೆ.

ಮುಂದಿನ ವಿಧಾನಸಭಾ ಚುನಾವಣೆ 2023ರಲ್ಲಿ. ಹೆಚ್ಚು ಕಮ್ಮಿ ಎರಡು ವರ್ಷ. ನೇರವಾಗಿ ಸಿಗದಿದ್ದರೂ ವಾಮಮಾರ್ಗದ ಮೂಲಕವಾದರೂ ಅಧಿಕಾರದಲ್ಲಿರುವುದು ಬಿಜೆಪಿಯ ಅಜೆಂಡ. ಅದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಜೊತೆಗೆ ಮಧ್ಯಪ್ರದೇಶದಲ್ಲೂ ಭಾಜಪ ಅಧಿಕಾರಕ್ಕೆ ಬಂದ ಪರಿ ಇದಕ್ಕೆ ಸಾಕ್ಷಿ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಅಂಥದ್ದೇ ಒಂದು ಸಾಧ್ಯತೆ ತಳ್ಳಿಹಾಕುವಂತಿಲ್ಲ. ಅದರ ಪೂರ್ವ ತಯಾರಿಯೇ ಬಸವರಾಜ್‌ ಬೊಮ್ಮಾಯಿ ಅವರ ಈ ಸಿಎಂ ಪದಗ್ರಹಣ.

Best wishes to former Karnataka Chief Minister Shri @hd_kumaraswamy Ji on his birthday. May Almighty bless him with a long life, filled with the best health.

— Narendra Modi (@narendramodi) December 16, 2020

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ರಚಿಸಿತ್ತು. ಆದರೆ ದೀರ್ಘಕಾಲ ಉಳಿದಿಲ್ಲ ಎನ್ನುವುದು ಈಗ ಇತಿಹಾಸ. ಇದಾದ ಬಳಿಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಪರಸ್ಪರ ನಡೆಸಿದ ಕೆಸರೆರಚಾಟ ರಾಜ್ಯದ ಜನರಲ್ಲಿ ಅಸಹ್ಯ ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಇಂಥಾ ಬೆಳವಣಿಗೆಗಳ ಲಾಭ ಪಡೆಯುವ ಬುದ್ದಿವಂತಿಕೆ ಬಿಜೆಪಿಗೆ ಕರಗತ. ಅದ್ಯಾವಾಗ ಮೈತ್ರಿ ಸರ್ಕಾರ ಪತನಗೊಂಡಿತೋ ಅಂದಿನಿಂದಲೂ ಬಿಜೆಪಿ ನಾಯಕರಿಗೆ ಜೆಡಿಎಸ್‌ ಮೇಲೆ ವಿಪರೀತ ಒಲವು ಮೂಡಿದೆ.

ಕಳೆದ ವರ್ಷ ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಟ್ಟುಹಬ್ಬದ ದಿನ ಖುದ್ದಾಗಿ ಮೋದಿಯೇ ಟ್ವೀಟ್‌ ಮಾಡಿ ಶುಭಾಶಯ ತಿಳಿಸಿದ್ದರು. ಅಲ್ಲದೆ ಮುಖ್ಯಮಂತ್ರಿಯಾಗಿದ್ದಾದ ಅವರ ಕಾರ್ಯವೈಖರಿಯ ಬಗ್ಗೆ ಪ್ರಧಾನಿ ಮೋದಿ ಹಾಡಿಹೊಗಳಿದ್ದರು. ನಂತರ ಮಾಜಿ ಪ್ರಧಾನಿ ದೇವೇಗೌಡರ ಸರದಿ. ಇದೇ ವರ್ಷ ಮೇ ತಿಂಗಳಿನಲ್ಲಿ ಮುಗಿದು ಹೋದ ದೇವೇಗೌಡರ ಹುಟ್ಟುಹಬ್ಬದ ದಿನದಂದು ಪ್ರಧಾನಿ  ಮೋದಿಯವರು ಖುದ್ದಾಗಿ ಕರೆ ಮಾಡಿ ಶುಭಾಶಯಗಳು ತಿಳಿಸಿದ್ದರು ಎಂದು ದೇವೇಗೌಡರು ಟ್ವೀಟ್‌ ಮಾಡಿ, ಪ್ರಧಾನಿ ಮೋದಿಯ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನು ಆಡಿದ್ದರು. ಹೀಗೆ ಜೆಡಿಎಸ್‌ ಅನ್ನು ತಮ್ಮ ಸಂಪರ್ಕದಲ್ಲಿಟ್ಟುಕೊಳ್ಳಲು ಭಾಜಪ  ಕೇಂದ್ರ ನಾಯಕರು ಪ್ರಯತ್ನಿಸಿದ್ದಾರೆ. ಈಗಲೂ ಪ್ರಯತ್ನಿಸುತ್ತಲಿದ್ದಾರೆ. ಇಂಥಾ ಹಲವು Hijacking Attitudeಗಳು ಬಿಜೆಪಿ ಕಡೆಯಿಂದ ತೋರಿಕೆಯಾಗಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಬಂದಿರುವ ಬಿಜೆಪಿ ಕೇಂದ್ರ ನಾಯಕರು ಬೊಮ್ಮಾಯಿಯನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಗೆಳೆತನಕ್ಕೆ ಇಳಿದಿದ್ದಾರೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುವ ಮಾತು.

I am grateful to Prime Minister @narendramodi for calling and enquiring after my health. I am also deeply moved by his offer to get me treated in any hospital of my choice in any city. I assured him that I am being looked after well in Bangalore, but will keep him informed.

— H D Deve Gowda (@H_D_Devegowda) March 31, 2021

ಈಗ ರೋಗಿ ಇಚ್ಛಿಸಿದ್ದು, ವೈದ್ಯ ಕಲ್ಪಿಸಿದ್ದು ಹಾಲು ಎಂಬಂತೆ ಯಡಿಯೂರಪ್ಪನವರ ಅಭಿಪ್ರಾಯಕ್ಕೆ ಮಹೋನ್ನತ ಬೆಲೆ ಕೊಟ್ಟ ಹಾಗೆಯೂ ಇತ್ತ ಜೆಡಿಎಸ್‌ ಅನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವುದು ಭಾಜಪದ ಲೆಕ್ಕಾಚಾರ ಎನ್ನಲಾಗಿದೆ. ಮೂಲತಃ ಜನತಾ ಪರಿವಾರದಿಂದಲೇ ಬಂದಿರುವ ಬಸವರಾಜ್‌ ಬೊಮ್ಮಾಯಿಗೆ ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಸಮನ್ವಯದ ಕೊಂಡಿಯಾಗಿ ಕೆಲಸ ಮಾಡುವುದು ಅಷ್ಟು ಕಷ್ಟದ ಕೆಲಸವಲ್ಲ. ಸಿಎಂ ಆದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಓಡೋಡಿ ಜೆಡಿಎಸ್‌ ವರಿಷ್ಠ ದೇವೇಗೌಡರ ಬಳಿ ಬಂದಿದ್ದರು. ಸುದೀರ್ಘ ಚರ್ಚೆ ನಡಿಸಿ ಅನಾಯಾಸ ಅಧಿಕಾರ ನಡೆಸಲು ಬೆಂಬಲವನ್ನೂ ಕೋರಿದ್ದರು. ಈ ವೇಳೆ ಬೊಮ್ಮಾಯಿ ಸಿಎಂ ಆಗಿದ್ದರೆ ನಮಗೆ ಯಾವ ತಕರಾರು ಇಲ್ಲ ಎಂಬರ್ಥದಲ್ಲಿ ದೇವೇಗೌಡರು ಆಶೀರ್ವಾದ ಕೊಟ್ಟು ಕಳುಹಿಸಿದ್ದರು.

ಇದೊಂದು ಆರಂಭವೆಂದೇ ಅಂದುಕೊಳ್ಳೋಣ. ರಾಜ್ಯದಲ್ಲಿ ಮುಂದಿನ ಚುನಾವಣೆಯೂ ಅತಂತ್ರ ಸ್ಥಿತಿ ತಲುಪಿದರೆ ಇಂಥಾ ಭೇಟಿ, ಸೌಹಾರ್ದ ಮಾತುಕತೆಗಳು ಬಿಜೆಪಿ ಪಾಳಯಕ್ಕೆ ದೊಡ್ಡಮಟ್ಟದ ಲಾಭ ತಂದುಕೊಡಲಿದೆ. ಅದನ್ನು ಮೂಲತಃ ಆರ್‌ಎಸ್‌ಎಸ್‌ ಪ್ರತಿನಿಧಿಯೋ, ಅಥವಾ ಇನ್ನಿತರ ಪಕ್ಷದಿಂದ ಬಂದ ವಲಸಿಗರೋ ಬಿಜೆಪಿಯಲ್ಲಿ ಮಾಡಲು ಸಾಧ್ಯವಿಲ್ಲ. ಅದಕ್ಕೆ ದೇವೇಗೌಡರ ಗರಡಿಯಲ್ಲೇ ಪಳಗಿದ ಬಸವರಾಜ್‌ ಬೊಮ್ಮಾಯಿಂತವರೇ ಆಗಬೇಕು ವಿನಃ ಮತ್ತೊಬ್ಬರಿಂದ ಅದು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಭಾಜಪ ಕೇಂದ್ರ ನಾಯಕರು ಬಸವರಾಜ್‌ ಬೊಮ್ಮಾಯಿಗೆ ಸಿಎಂ ಪಟ್ಟ ಕಟ್ಟುವ ನಿರ್ಧಾರಕ್ಕೆ ಬಂದಿದ್ದು ಕೇವಲ ಯಡಿಯೂರಪ್ಪನವರ ಮಾತಿಗೆ ಬಗ್ಗುವುದು ಮಾತ್ರವಲ್ಲ ಎನ್ನುವುದು ಮಾತ್ರ ಸತ್ಯ. ಅದರಾಚೆಗೂ ಹೀಗೆ ಮೋದಿ, ಅಮಿತ್‌ ಶಾ, ಜೆಪಿ ನಡ್ಡಾ ಸೇರಿದಂತೆ ಆರ್‌ಎಸ್‌ಎಸ್‌ ಒಂದೇ ಕಲ್ಲಿಗೆ ಎರಡು ಹಕ್ಕಿಗಳಿಗೆ ಗುರಿ ಇಟ್ಟುಕೊಂಡಿವೆ ಎಂದು ರಾಜಕೀಯ ಪಡಸಾಲೆ ಮಾತನಾಡಿಕೊಳ್ಳುತ್ತಿದೆ.

Tags: Basavaraj BommaiBJPಎಚ್ ಡಿ ಕುಮಾರಸ್ವಾಮಿಜೆಡಿಎಸ್‌ನರೇಂದ್ರ ಮೋದಿಬಸವರಾಜ ಬೊಮ್ಮಾಯಿಬಿಜೆಪಿ
Previous Post

ಸಚಿವ ಸಂಪುಟ ಕಸರತ್ತು ಅಂತಿಮ ಹಂತಕ್ಕೆ: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

Next Post

3ನೇ ಅಲೆ ನಮ್ಮ ರಾಜ್ಯಕ್ಕೆ ಬರದಂತೆ ತಡೆಯುವುದು ರಾಜ್ಯ ಸರ್ಕಾರದ ಪ್ರಾಥಮಿಕ ಕೆಲಸ: ಸಿದ್ದರಾಮಯ್ಯ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಸಂವಿಧಾನ ವಿರೋಧಿಸುವವರು ಮನುಷ್ಯತ್ವ ಇಲ್ಲದವರು: ಸಿದ್ದರಾಮಯ್ಯ

3ನೇ ಅಲೆ ನಮ್ಮ ರಾಜ್ಯಕ್ಕೆ ಬರದಂತೆ ತಡೆಯುವುದು ರಾಜ್ಯ ಸರ್ಕಾರದ ಪ್ರಾಥಮಿಕ ಕೆಲಸ: ಸಿದ್ದರಾಮಯ್ಯ

Please login to join discussion

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada