• Home
  • About Us
  • ಕರ್ನಾಟಕ
Wednesday, July 30, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಇಂದಿರಾ ಗಾಂಧಿ ಸರ್ಕಾರ ಮತ್ತು ಎಸ್ ಆರ್ ಹಿರೇಮಠ ಬಿಡುಗಡೆ ಆಯ್ತು The Conscience Network ಪುಸ್ತಕ

ಪ್ರತಿಧ್ವನಿ by ಪ್ರತಿಧ್ವನಿ
June 9, 2025
in Top Story, ಕರ್ನಾಟಕ, ರಾಜಕೀಯ
0
ಇಂದಿರಾ ಗಾಂಧಿ ಸರ್ಕಾರ ಮತ್ತು ಎಸ್ ಆರ್ ಹಿರೇಮಠ ಬಿಡುಗಡೆ ಆಯ್ತು The Conscience Network ಪುಸ್ತಕ
Share on WhatsAppShare on FacebookShare on Telegram

ADVERTISEMENT

ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ಪ್ರಜಾಪ್ರಭುತ್ವವನ್ನು ರದ್ದು ಮಾಡಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದಾಗ ಅಮೆರಿಕದಲ್ಲಿದ್ದ ಕೆಲವು ಭಾರತೀಯರು, ಬಹುತೇಕರು ಯುವಕರು, ಅಲ್ಲಿ Indians for Democracy ಸಂಘಟನೆಯ ಹೆಸರಿನಲ್ಲಿ ಇಂದಿರಾ ಗಾಂಧಿಯವರ ಪ್ರಜಾಪ್ರಭುತ್ವವಿರೋಧಿ ಅತಿರೇಕಗಳ ವಿರುದ್ಧ ಅಲ್ಲಿಂದಲೇ ಧ್ವನಿಯೆತ್ತುತ್ತಾರೆ. ನೂರಾರು ಕಿಲೋಮೀಟರ್ ಪಾದಯಾತ್ರೆ ಮಾಡುತ್ತಾರೆ. ಭಾರತೀಯ ರಾಯಭಾರ ಕಚೇರಿ ಎದುರು ಧರಣಿ ಕೂರುತ್ತಾರೆ. ಅಲ್ಲಿಯ ಮಾಧ್ಯಮಗಳ ಮೂಲಕ ತುರ್ತುಪರಿಸ್ಥಿತಿ ವಿರುದ್ಧ ಜನಾಭಿಪ್ರಾಯ ರೂಪಿಸಲು ಯತ್ನಿಸುತ್ತಾರೆ. ಆ ಪ್ರತಿರೋಧದಲ್ಲಿ ಒಬ್ಬ ಪ್ರಮುಖರೆಂದರೆ ನಮ್ಮವರೇ ಆದ ಎಸ್.ಆರ್. ಹಿರೇಮಠರು. ಆಗ ವಿದೇಶದಲ್ಲಿ ಇವರ ಚಟುವಟಿಕೆಗಳನ್ನು ದೇಶದ್ರೋಹ ಎಂದು ಭಾವಿಸಿದ ಇಂದಿರಾ ಗಾಂಧಿ ಸರ್ಕಾರ, ಹಿರೇಮಠರೂ ಸೇರಿದಂತೆ ಅವರ ನಾಲ್ವರು ಸಂಗಡಿಗರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಮತ್ತು ಅಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ PhD ವ್ಯಾಸಂಗ ಮಾಡುತ್ತಿದ್ದ ಆನಂದ್ ಕುಮಾರ್ ಎನ್ನುವ ಉತ್ತರ ಪ್ರದೇಶದ ಯುವಕನ ವಿದ್ಯಾರ್ಥಿವೇತನವನ್ನು ತಡೆಹಿಡಿಯುತ್ತದೆ.

Prathap simha : ಏನ್ರೀ ಸಿದ್ದರಾಮಯ್ಯ ನೀವು...! #pratidhvani #prathapsimha #siddaramaiah #dkshivakumar

ಆದರೆ ಅಲ್ಲಿ ಈ ಗುಂಪಿನ ಚಟುವಟಿಕೆಗಳು ಮತ್ತು ಇಂದಿರಾ ಗಾಂಧಿ ವಿರೋಧಿ ಹೋರಾಟ ಹೆಚ್ಚುತ್ತಾ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಇವರ ಹೋರಾಟವೂ ಒಂದು ಅಧ್ಯಾಯ.

ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಭಾರತೀಯರು ದೊಡ್ಡ ಹೋರಾಟವನ್ನೇ ನಡೆಸಿ, ಕೊನೆಗೂ ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯನ್ನು ತೆರವು ಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯರು ಇಂದಿರಾ ಗಾಂಧಿಯನ್ನು ನಿರ್ದಾಕ್ಷಿಣ್ಯವಾಗಿ ಸೋಲಿಸಿ ಭಾರತದ ಪ್ರಜಾಪ್ರಭುತ್ವದ ಘನತೆಯನ್ನು ಮರುಸ್ಥಾಪಿಸುತ್ತಾರೆ.

ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಆಗಿನ ವಿದ್ಯಾರ್ಥಿ ಆನಂದ್ ಕುಮಾರ್ ಮುಂದೆ PhD ಮುಗಿಸಿಕೊಂಡು ಭಾರತಕ್ಕೆ ವಾಪಸಾಗಿ ತಮ್ಮೂರಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕೆಲವು ಕಾಲ ಪಾಠ ಮಾಡಿ ನಂತರ ದೆಹಲಿಯ ಪ್ರತಿಷ್ಠಿತ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (JNU) ಪ್ರೊಫೆಸರ್ ಆಗಿ ನಿವೃತ್ತಿಯ ತನಕ ಕೆಲಸ ಮಾಡುತ್ತಾರೆ. ಇದೆಲ್ಲದರ ಮಧ್ಯೆ ಸಾಮಾಜಿಕ ಹೋರಾಟಗಾರರಾಗಿಯೂ ಕ್ರಿಯಾಶೀಲರಾಗಿರುತ್ತಾರೆ. ಮುಂದಕ್ಕೆ ಭ್ರಷ್ಟಾಚಾರದ ವಿರುದ್ಧ ಭಾರತ (IAC) ಚಳವಳಿಯಲ್ಲಿಯೂ ಪಾಲ್ಗೊಂಡು ಆಮ್ ಆದ್ಮಿ ಪಕ್ಷದ ನಾಯಕರಾಗಿಯೂ ಕೆಲಸ ಮಾಡುತ್ತಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಲೋಕಸಭಾ ಕ್ಷೇತ್ರವೊಂದರಿಂದ ಸ್ಪರ್ಧಿಸಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಪಡೆಯುತ್ತಾರೆ. ಮುಂದಕ್ಕೆ ಇವರಂತೆಯೇ ಆಮ್ ಆದ್ಮಿ ಸೇರಿದ್ದ ಅನೇಕ ಪ್ರಾಮಾಣಿಕ ಹೊರಾಟಗಾರರಂತೆ ಆಮ್ ಆದ್ಮಿ ಪಕ್ಷ ಬಿಟ್ಟು ಹೊರಬರುತ್ತಾರೆ. ಆರೋಗ್ಯದ ಕಾರಣಕ್ಕೆ ಈಗ ಅವರು ಗೋವಾದಲ್ಲಿ ವಾಸಿಸುತ್ತಿದ್ದು, ಸಾಮಾಜಿಕ /ರಾಜಕೀಯ ಹೋರಾಟಗಳಲ್ಲಿ ಭಾಗವಹಿಸಲು ಈಗಲೂ ದೇಶಾದ್ಯಂತ ಪ್ರವಾಸ ಮಾಡುತ್ತಾರೆ.

ತುರ್ತುಪರಿಸ್ಥಿತಿಯ ಪೂರ್ವದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣರು ಸ್ಥಾಪಿಸಿದ್ದ Citizens for Democracy ಸಂಘಟನೆಯ ಅಧ್ಯಕ್ಷರಾಗಿ ಕಳೆದ ಹತ್ತು ವರ್ಷಗಳಿಂದ ಹಿರೇಮಠರು ಕಾರ್ಯ ನಿರ್ವಹಿಸುತ್ತಿದ್ದರು. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅದರ ಅಧ್ಯಕ್ಷರಾಗಿ ಪ್ರೊ. ಆನಂದ್ ಕುಮಾರ್ ನೇಮಕವಾಗಿದ್ದಾರೆ.

ನೆನ್ನೆ ಮತ್ತು ಇಂದು ಅವರೊಂದಿಗೆ ಕೆಲವು ವಿಚಾರಗಳನ್ನು ಮಾತನಾಡಲು ಹಿರೇಮಠರ ಜೊತೆಗೆ ದೀಪಕ್ ಮತ್ತು ನಾನು ಗೋವಾಗೆ ಬಂದಿದ್ದೆವು. ಒಳ್ಳೆಯ ಚರ್ಚೆ ಮತ್ತು ಕೆಲವು ಕಾರ್ಯಕ್ರಮಗಳ ರೂಪುರೇಷೆ ಆಯಿತು. ಫಲಪ್ರದ ಭೇಟಿ.

Energy Minister KJ George: ನಮ್ಮ ಸರ್ಕಾರ ಬಂದ್ಮೇಲೆ ರೈತರಿಗೆ ನಿರಂತರ ವಿದ್ಯತ್‌: ಸಚಿವ ಕೆಜೆ ಜಾರ್ಜ್‌ #kusumc

ಅಂದಹಾಗೆ, ಭಾರತದ ಪ್ರಜಾಪ್ರಭುತ್ವ ಪುನರ್‌ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಅಮೆರಿಕದಲ್ಲಿದ್ದ ಭಾರತೀಯರೂ ಸೇರಿದಂತೆ ಅನಿವಾಸಿ ಭಾರತೀಯರ ಪ್ರತಿರೋಧದ ಕುರಿತು ನಮ್ಮವರೇ ಆದ ಸುಗತ ಶ್ರೀನಿವಾಸರಾಜು “The Conscience Network” ಎನ್ನುವ ಪುಸ್ತಕ ಬರೆದಿದ್ದು, ಅದು ಇಷ್ಟರಲ್ಲಿಯೇ ಬಿಡುಗಡೆ ಆಗಲಿದೆ. ಮುಂದಿನ ತಿಂಗಳು ಬಹುಶಃ ಬೆಂಗಳೂರಿನಲ್ಲಿಯೂ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು ಪ್ರೊ. ಆನಂದ್ ಕುಮಾರ್ ಆಗ ಬೆಂಗಳೂರಿಗೂ ಬರಲಿದ್ದಾರೆ. (ಈ ಪುಸ್ತಕದ ಲಭ್ಯತೆ ಮತ್ತು ಇನ್ನಿತರ ವಿವರಗಳನ್ನು ಕಾಮೆಂಟ್ ವಿಭಾಗದಲ್ಲಿ ನೀಡಿರುತ್ತೇನೆ.)

ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಲ್ಲಿಯವರೆಗೆ ಲಕ್ಷಾಂತರ ಭಾರತೀಯರ ಶ್ರಮ ಮತ್ತು ಹೋರಾಟದ ಕಾರಣದಿಂದ ನಾವಿಂದು ಒಂದಷ್ಟು ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಅನುಭವಿಸುತ್ತಿದ್ದೇವೆ. ಆದರೆ ಅದರ ಹಿಂದೆ ಯಾರೆಲ್ಲರ ಎಷ್ಟೆಲ್ಲಾ ತ್ಯಾಗ, ಪರಿಶ್ರಮ, ಬದ್ಧತೆ, ಚಿಂತನೆ, ಸಂಕಷ್ಟಗಳು ಇದ್ದವು ಎನ್ನುವುದು ಇಂದಿನ ಬಹುತೇಕರಿಗೆ ಗೊತ್ತಿಲ್ಲ. ಹಾಗಾಗಿಯೇ ಈಗಿನ ಸಮಾಜ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. Eternal vigilance is the price of liberty. ಎಚ್ಚರ ತಪ್ಪಿದಿರೋ, ಯಾವಾಗ ಬೇಕಾದರೂ ನಾವು ಮತ್ತು ನಮ್ಮ ಮುಂದಿನ ತಲೆಮಾರುಗಳು ಗುಲಾಮಗಿರಿಗೆ, ಸರ್ವಾಧಿಕಾರಕ್ಕೆ, ದಬ್ಬಾಳಿಕೆಗೆ ಬಲಿಯಾಗಬಹುದು. Don’t take liberty/freedom/democracy for granted. Nothing is granted, everything is earned.

Tags: #vishwanathshettyactivist ravikrishna reddyajith hanumakkanavarGirish Karnadgirish karnad moviegirish karnad no morehr ranganathmarathi songmarathi songsmareyadhiru ni kannadavamareyadhiru ni kannadava promomareyadhiru ni kannadava video songRavi krishna reddyrti activist sr hiremathS R Hiremathshree swami samarthshri swami samarthsm krishna's son in lawsriramaulu
Previous Post

RCB Stampede: ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಮನವಿ

Next Post

ಕಾಲ್ತುಳಿತ ದುರಂತದ ವರದಿ ಹಿಡಿದು ದೆಹಲಿ ಪ್ರಯಾಣ – ರಾಹುಲ್ ಗಾಂಧಿ ಭೇಟಿಯಾಗಲಿರುವ ಸಿಎಂ & ಡಿಸಿಎಂ 

Related Posts

Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
0

ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕರೆ “ನಮ್ಮ ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು...

Read moreDetails

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

July 30, 2025

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

July 30, 2025

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

July 30, 2025
Next Post
ಮೊದಲು ಡಿಸಿಎಂ, ಗೃಹ ಸಚಿವರ ರಾಜೀನಾಮೆ ಪಡೆಯಿರಿ – ಕಾಲ್ತುಳಿತ ಪ್ರಕರಣದ ಬಗ್ಗೆ ನಿಖಿಲ್ ಆಕ್ರೋಶ ! 

ಕಾಲ್ತುಳಿತ ದುರಂತದ ವರದಿ ಹಿಡಿದು ದೆಹಲಿ ಪ್ರಯಾಣ - ರಾಹುಲ್ ಗಾಂಧಿ ಭೇಟಿಯಾಗಲಿರುವ ಸಿಎಂ & ಡಿಸಿಎಂ 

Recent News

Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
Top Story

Lakshmi Hebbalkar: ಗೃಹಲಕ್ಷ್ಮೀ ಯೋಜನೆಯ ಜಂಟಿ ಹೊಣೆಗಾರಿಕೆ ಗುಂಪುಗಳ ಕುರಿತು ಸಭೆ

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada