ಜೋಹಾನ್ಸ್ಬರ್ಗ್: ತಾಂತ್ರಿಕ ದೋಷದಿಂದ ಖಾಸಗಿ ವಿಮಾನವೊಂದು ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ಪತನಗೊಂಡಿದೆ. ಇದರಲ್ಲಿ ಭಾರತೀಯ ಗಣಿ ಉದ್ಯಮಿ ಹರ್ಪಾಲ್ ರಾಂಧವಾ ಮತ್ತು ಅವರ ಮಗ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.
ಮಶಾವಾದ ಜವಾಮಹಂಡೆ ಪ್ರದೇಶದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗಣಿ ಕಂಪನಿ ‘ರಿಯೋಜಿಮ್’ ಮಾಲೀಕ ಹರ್ಪಾಲ್ ರಾಂಧವಾ, ಅವರ ಮಗ 22 ವರ್ಷದ ಅಮೆರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ವೆಬ್ಸೈಟ್ ವರದಿ ಮಾಡಿದೆ. ‘ರಿಯೋಜಿಮ್’ ಚಿನ್ನ ಮತ್ತು ಕಲ್ಲಿದ್ದಲು ಉತ್ಪಾದಿಸುವ ಜೊತೆಗೆ ತಾಮ್ರವನ್ನು ಸಂಸ್ಕರಿಸುವ ಪ್ರಮುಖ ಗಣಿಗಾರಿಕೆ ಕಂಪನಿಯಾಗಿದೆ.
‘ರಿಯೋಜಿಮ್’ ಒಡೆತನದ ಸೆಸ್ನಾ 206 ವಿಮಾನವು ಶುಕ್ರವಾರ ಹರಾರೆಯಿಂದ ಮುರೋವಾ ವಜ್ರದ ಗಣಿಗೆ ತೆರಳುತ್ತಿದ್ದಾಗ ಈ ದುರಂತ ಅಪಘಾತ ಸಂಭವಿಸಿದೆ. ರಿಯೋಜಿಮ್ ಸಹ-ಮಾಲೀಕತ್ವದ ಮುರೋವಾ ಡೈಮಂಡ್ ಗಣಿ ಬಳಿ ಸಿಂಗಲ್ ಇಂಜಿನ್ ವಿಮಾನವು ಪತನಗೊಂಡಿದೆ. ಜವಾಮಹಂಡೆಯ ಪೀಟರ್ ಫಾರ್ಮ್ನಲ್ಲಿ ಬೀಳುವ ಮೊದಲು, ವಿಮಾನವು ತಾಂತ್ರಿಕ ದೋಷವನ್ನು ಅನುಭವಿಸಿತು. ಈ ಕಾರಣದಿಂದಾಗಿ ಅದು ಬಹುಶಃ ಗಾಳಿಯಲ್ಲಿ ಸ್ಫೋಟಗೊಂಡಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.