ಬೆಂಗಳೂರು: ಭಾರತ ದೇಶದಲ್ಲಿ ವಿವಿಧ ಧರ್ಮದವರು ನೆಲೆಸಿರುವುದರಿಂದ ಇದು ಹಿಂದೂ ದೇಶವಲ್ಲ. ನಾವೆಲ್ಲ ಭಾರತೀಯರೇ ಹೊರತು ಹಿಂದೂಗಳಲ್ಲ ಎಂದು ಸಾಹಿತಿ ಕಮಲಾ ಹಂಪನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಜನಶಕ್ತಿ ಕೇಂದ್ರ ಹಾಗೂ ಕಲಬುರಗಿಯ ಸಬರದ ಬಸಪ್ಪ ಸ್ಮಾರಕ ಪ್ರತಿಷ್ಠಾನ ಜಂಟಿಯಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಬಸವರಾಜ ಸಬರದ ಅವರ 12 ಪುಸ್ತಕಗಳು ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು
ದೇಶದಲ್ಲಿಇಸ್ಲಾಂ, ಕ್ರೈಸ್ತ, ಸಿಖ್, ಬೌದ್ಧ, ಜೈನ ಸೇರಿ ವಿವಿಧ ಧರ್ಮದವರು ನೆಲೆಸಿದ್ದು, ಇವರಾರೂ ಹಿಂದೂಗಳಲ್ಲ. ಆದರೂ ಹಿಂದೂ ದೇಶ ಎಂದು ಕರೆದುಕೊಂಡರೆ ಏನು ಅರ್ಥ? ಇದನ್ನು ಒಪ್ಪಲು ಅಸಾಧ್ಯ. ಹಾಗಾಗಿ, ಪ್ರಮಾಣಪತ್ರಗಳಲ್ಲಿ ಹಿಂದೂ ಧರ್ಮ ಎಂದು ನಮೂದಿಸದೆ, ಭಾರತೀಯರು ಎಂದು ಬರೆಸಬೇಕು ಎಂದು ಕರೆ ನೀಡಿದರು.

ಅಮೃತವು ಅತಿಯಾದರೆ ವಿಷವಾಗುತ್ತದೆ. ಧರ್ಮದ ಬಗೆಗಿನ ಪ್ರೀತಿ, ಪ್ರೇಮ ಹಾಗೂ ಅಭಿಮಾನ ಒಂದು ಪರಿಧಿಯಲ್ಲಿಇರಬೇಕು. ಅದನ್ನು ದಾಟಿದರೆ ಉಗ್ರವಾದಿಗಳಾಗುತ್ತಾರೆ. ನಮ್ಮ ಧರ್ಮವೇ ಶ್ರೇಷ್ಠ ಎಂದು ತೋರಿಸಲು ಹೋಗುವವರು ರಾಷ್ಟ್ರದ ಉಗ್ರವಾದಿಗಳು ಎಂದು ಕಿಡಿಕಾರಿದರು.
ಸಾಹಿತಿ ಕಮಲಾ ಹಂಪನ ಅವರ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪರ ವಿರೋಧ ಚರ್ಚೆಗಳಾಗುತ್ತಿವೆ.