• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾಂಗ್ರೆಸ್​​ ನೇತೃತ್ವದ INDIA ಒಕ್ಕೂಟ 295 ಸ್ಥಾನ ಗೆಲ್ಲುತ್ತೆ, ರಾಹುಲ್​ ವಿಶ್ವಾಸದ ಗುಟ್ಟೇನು..?

ಕೃಷ್ಣ ಮಣಿ by ಕೃಷ್ಣ ಮಣಿ
June 3, 2024
in ಕರ್ನಾಟಕ
0
ಕಾಂಗ್ರೆಸ್​​ ನೇತೃತ್ವದ INDIA ಒಕ್ಕೂಟ 295 ಸ್ಥಾನ ಗೆಲ್ಲುತ್ತೆ, ರಾಹುಲ್​ ವಿಶ್ವಾಸದ ಗುಟ್ಟೇನು..?
Share on WhatsAppShare on FacebookShare on Telegram

ಲೋಕಸಭಾ ಚುನಾವಣಾ(Lokasabha Election) ಫಲಿತಾಂಶ ಜೂನ್​ 4 ಮಂಗಳವಾರ ಹೊರ ಬೀಳಲಿದೆ. ಆದರೆ ಜೂನ್ 1 ರಂದು ಮತದಾನೋತ್ತರ ಸಮೀಕ್ಷೆಗಳ ಮಾಹಿತಿ ಹೊರ ಬಿದ್ದಿದ್ದು ಬಿಜೆಪಿ ನೇತೃತ್ವದ NDA ಸರ್ಕಾರ 3ನೇ ಬಾರಿ ಅಧಿಕಾರದ(Officers) ಗದ್ದುಗೆ ಏರೋದು ಕನ್ಪರ್ಮ್ ಎನ್ನುತ್ತಿದೆ. ಬಿಜೆಪಿ(BJP) ನಾಯಕರ ಮೊಗದಲ್ಲಿ ಮಂದಹಾಸ ಮೂಡಿದ್ರೆ ಕಾಂಗ್ರೆಸ್​​(Congress) ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ ವಿಶ್ವಾಸ ಮಾತ್ರ ಕಡಿಮೆ ಆಗಿಲ್ಲ. ನಾವು 295 ಸ್ಥಾನಗಳನ್ನು ಗೆದ್ದೇ ಗೆಲ್ತೇವೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Karge) ಸೇರಿದಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ(Rahul Gandhi) ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ಈಗ ಬಂದಿರುವುದು ಮೋದಿ(Modi) ಮೀಡಿಯಾದ ಸರ್ವೇ(Survey) ಎನ್ನುವ ಮೂಲಕ ಅಣಕ ಮಾಡಿದ್ದಾರೆ. ಆದರೆ ಈ ರೀತಿಯ ಅಚಲ ವಿಶ್ವಾಸಕ್ಕೆ ಕಾರಣ ಏನಿರಬಹುದು ಎನ್ನುವ ಪ್ರಶ್ನೆ ಕಾಂಗ್ರೆಸ್​ ಕಾರ್ಯಕರ್ತರನ್ನೇ ಕಾಡುತ್ತಿದೆ.

ADVERTISEMENT

ಇತ್ತೀಚಿಗಿನ ವರ್ಷಗಳಲ್ಲಿ ಬಹುತೇಕ ಸರ್ವೇಗಳು ಮೋದಿ ನೇತೃತ್ವದ ಬಿಜೆಪಿ ಪರವಾಗಿ ಬರುವುದು ಕಂಡು ಬರುತ್ತಿದೆ. ಅದರಲ್ಲಿ ಕೆಲವು ಬಾರಿ ಕಾಂಗ್ರೆಸ್​​ ಕೂಡ ಗೆದ್ದು ಬೀಗಿದೆ. ಅಂದರೆ ಮೋದಿಯನ್ನು(Modi) ಮೆಚ್ಚಿಸಲು ಟಿವಿ ಮಾಧ್ಯಮದವರು ಬೇಕಾಬಿಟ್ಟಿ ಸರ್ವೇ ಮಾಡುತ್ತಾರೆ ಅನ್ನೋದು ಕಾಂಗ್ರೆಸ್​ನ ನಂಬಿಕೆ. ಕಳೆದ ಬಾರಿ ವಿಧಾನಸಭಾ ಚುನಾವಣೆ (Vidanasabha Election) ವೇಳೆ ಸರ್ವೇಗಳಲ್ಲಿ ಬಿಜೆಪಿಗೆ 95 ಸ್ಥಾನ ನೀಡಿದ್ದವು. ಕಾಂಗ್ರೆಸ್​ ಪಕ್ಷ ಹಾಗು ಬಿಜೆಪಿ ಪಕ್ಷ ಸಮಬಲ ಸಾಧಿಸಲಿವೆ ಎನ್ನಲಾಗಿತ್ತು. ಆದರೆ ಕಾಂಗ್ರೆಸ್​ ಪಕ್ಷ(Congress Party) ಮ್ಯಾಜಿಕ್​ ನಂಬರ್(Magic Number)​ 113 ಅಂಕಿಯನ್ನು ದಾಟಿ, 135 ಸ್ಥಾನಗಳಲ್ಲಿ ಗೆದ್ದು ಬೀಗಿತ್ತು. ಅಂದರೆ ಸರ್ವೇಗಳ ಲೆಕ್ಕಾಚಾರ ಹಳಿ ತಪ್ಪಿದೆ ಎನ್ನುವುದು ಬಟಾಬಯಲಾಗಿತ್ತು.

ಕರ್ನಾಟಕದಲ್ಲಿ(Karnataka) ಕಳೆದ ವರ್ಷ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಚುನಾವಣೋತ್ತರ ಸಮೀಕ್ಷೆಗಳನ್ನು ಮೀರಿ ಕಾಂಗ್ರೆಸ್​​ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇದೇ ಕಾರಣದಿಂದ ಲೋಕಸಭಾ ಚುನಾವಣೆ ವೇಳೆ ಮೋದಿ ಮೀಡಿಯಾಗಳ ಫ್ಯಾಂಟಸಿ ಸಮೀಕ್ಷೆ ಎಂದಿದ್ದಾರೆ ರಾಹುಲ್​ ಗಾಂಧಿ(Rahul Gandhi). ಚಾರ್‌ಸೋ ಪಾರ್‌‌ ಅನ್ನೋ ಘೋಷಣೆ(Announcement) ಜೊತೆಗೆ ಚುನಾವಣೆ ಮಾಡಿದ್ದ ಬಿಜೆಪಿಯನ್ನು ಮೆಚ್ಚಿಸಲು ಈ ರೀತಿಯ ಸರ್ವೇ ಕೊಡಲಾಗಿದೆ. ಆದರೆ ಈ ಸಲ ಮೋದಿ ಪ್ರಧಾನಿ ಆಗಲ್ಲ, ಇಂಡಿಯಾ(India) ಕೂಟವೇ ಅಧಿಕಾರಕ್ಕೆ ಬರೋದು ನಿಶ್ಚಿತ ಅನ್ನೋ ನಂಬಿಕೆ ಕಾಂಗ್ರೆಸ್‌ ಪಕ್ಷದ್ದು. ಆದ್ರೆ ಎಲ್ಲಾ ಸರ್ವೇಗಳಲ್ಲೂ ಮೋದಿ ಸರ್ಕಾರವೇ ನಿಶ್ಚಿತ ಎನ್ನುತ್ತಿವೆ.

ನ್ಯೂಯಾರ್ಕ್ ಟೈಮ್ಸ್‌(New York Teams), ಅಲ್ ಝಜೀರಾ ಸೇರಿದಂತೆ ಇಂಟರ್​ನ್ಯಾಷನಲ್(International)​ ಮೀಡಿಯಾಗಳಲ್ಲೂ ಮೋದಿಗೆ ಬಹುಪರಾಕ್​ ಎನ್ನುತ್ತಿವೆ. ಆದರೆ ಯಾವುದೇ ರಾಜಕೀಯ ಪಕ್ಷ ಮತದಾನ ನಡೆದ ದಿನ ಮತಗಳ ಎಣಿಕೆ ಜೊತೆಗೆ ಬೂತ್​ ಮಟ್ಟದಲ್ಲಿ ಎಷ್ಟೆಷ್ಟು ಮತಗಳಿಕೆ ಆಗಿದೆ ಅನ್ನೋ ಲೆಕ್ಕಚಾರ ಸಂಗ್ರಹ ಮಾಡುವುದು ರೂಢಿ. ಅದರಂತೆ ಕಾಂಗ್ರೆಸ್​ ಸೇರಿದಂತೆ ಎಲ್ಲರೂ ಮಾಹಿತಿ ಸಂಗ್ರಹ ಮಾಡಿರುತ್ತಾರೆ. ಅದೇ ಲೆಕ್ಕಾಚಾರದಲ್ಲಿ ಕಾಂಗ್ರೆಸ್​ ನೇತೃತ್ವದ INDIA ಒಕ್ಕೂಟ 295 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುತ್ತಿದೆ. ರಾಹುಲ್​ ಗಾಂಧಿ ಕೂಡ ಇದು ಎಕ್ಸಿಟ್ ಪೋಲ್ ಅಲ್ಲ, ಮೋದಿ ಮೀಡಿಯಾ ಸಮೀಕ್ಷೆ. ಇದು ಮೋದಿಯವರ ಫ್ಯಾಂಟಸಿ ಸಮೀಕ್ಷೆ. ಸಿಧು ಮೂಸೆವಾಲಾರ 295 ಹಾಡು ಕೇಳಿದ್ದೀರಾ..? ಕಾಂಗ್ರೆಸ್‌ಗೆ ಈಸಲ 295 ಸೀಟು ಪಕ್ಕಾ ಎಂದಿದ್ದಾರೆ. ಸರ್ವೇ ಬಹುತೇಕ ಸಮಯದಲ್ಲಿ ಸತ್ಯವಾಗಿರುವುದು ನಿಜ. ಕೆಲವೊಮ್ಮೆ ಸರ್ವೇ ಲೆಕ್ಕಾಚಾರ(Calculate) ಉಲ್ಟಾ ಆಗಿರುವುದೂ ಕೂಡ ಅಷ್ಟೇ ಸತ್ಯ. ಕಾಂಗ್ರೆಸ್(Congress)​ ವಿಶ್ವಾಸಕ್ಕೆ ಉತ್ತರ ನಾಳೆ ಮಧ್ಯಾಹ್ನದ ವೇಳೆಗೆ ಸಿಗಲಿದೆ.

ಕೃಷ್ಣಮಣಿ

Tags: BJPCongress PartyLokSabhaServeyಚುನಾವಣೆನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಲೋಕಸಭಾಸಮೀಕ್ಷೆಸಿದ್ದರಾಮಯ್ಯ
Previous Post

ಭೀಕರ ಅಪಘಾತ; ಇಬ್ಬರು ಬಲಿ, 7 ಸ್ಥಿತಿ ಚಿಂತಾಜನಕ

Next Post

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
Next Post
ಸಿಲಿಕಾನ್ ಸಿಟಿಯಲ್ಲಿ ಶುರುವಾದ ವರುಣನ ಆರ್ಭಟ

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada