ಮಂಡ್ಯದಲ್ಲಿ ಬಿಸಿಲಿಂದ ಬಳಲಿದ್ದ ಜನರಿಗೆ ತಂಪೆರೆದಿದ್ದಾನೆ ಮಳೆರಾಯ. ಮಳವಳ್ಳಿ, ಕೆ.ಆರ್ ಪೇಟೆಯ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಮಂಡ್ಯ ನಗರದಲ್ಲಿ ವರ್ಷದ ಮೊದಲ ಮಳೆಗೆ ಜನ ಸಂತಸಗೊಂಡಿದ್ದಾರೆ ಜನ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಭಾರಿ ಗಾಳಿ, ಮಳೆ ಆಗಿದೆ. ಭಾರಿ ಗಾಳಿಗೆ ನೆಲಕ್ಕುರುಳಿದ ಕಬ್ಬಿಣದ ಟೆಂಟ್. ಭಾರಿ ಅನಾಹುತ ತಪ್ಪಿದಂತಾಗಿದೆ. ಗದಗ ನಗರದ ಟಿಪ್ಪು ಸುಲ್ತಾನ್ ಸರ್ಕಲ್ನಲ್ಲಿ ಹಾಕಿದ ಟೆಂಟ್ ನೆಲಕ್ಕುರುಳಿದೆ.

ವಿಜಯಪುರದಲ್ಲಿ ಮಳೆಯ ಆರ್ಭಟಕ್ಕೆ ಕುಸಿದು ಬಿದ್ದಿದೆ ಐತಿಹಾಸಿಕ ಕಟ್ಟಡದ ಗೋಪುರದ ಕೆಲವು ಭಾಗ. ಜಾಮೀಯಾ ಮಸೀದಿ ರಸ್ತೆಯ ಮೆಹತರ್ ಮಹಲ್ಗೆ ಹಾನಿ ಆಗಿದೆ.
ಹಾವೇರಿಯ ಹಾನಗಲ್ ಪಟ್ಟಣದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಆಗಿದೆ. ಸಂಜೆ ಒಂದು ಗಂಟೆಗಳ ಕಾಲ ಗುಡುಗು ಸಮೇತ ಸುರಿದ ಮಳೆಯಿಂದ ಕಲ್ಲಭಾವಿ ಸಮೀಪದ ರಸ್ತೆ ಮುಳುಗಡೆ ಆಗಿತ್ತು. ಮಳೆ ಬಂದ ಖುಷಿಯಲ್ಲಿ ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ ವಯೋ ವೃದ್ಧ.
