ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದರ್ಶನ್ ಅಂಡ್ ಗ್ಯಾಂಗ್ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಚಿಂತಾಕ್ರಾಂತವಾಗಿದೆ. ಈ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ತಲೆಗೆ ಬಳಸುವ ವಿಗ್ ನಿರ್ವಹಣೆ ಮಾಡಲು ಸಾಧ್ಯವಾಗದೆ ಸಂಪೂರ್ಣವಾಗಿ ತಲೆಯನ್ನು ಬೋಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇವತ್ತು ನಟ ದರ್ಶನ್ ಭೇಟಿ ಮಾಡಿದ್ದ ಸ್ನೇಹಿತೆ ನಟಿ ರಕ್ಷಿತಾ, ದರ್ಶನ್ ವೇಷ ಕಂಡು ಗಳಗಳನೆ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಸಂಜೆ 4.30ಕ್ಕೆ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲು ಬಳಿಗೆ ಆಗಮಿಸಿದ್ದ ನಟಿ ರಕ್ಷಿತಾ ಹಾಗು ಪ್ರೇಮ್ ಜೈಲಿನ ನಿಯಮಗಳಂತೆ 15 ನಿಮಿಷಗಳ ಕಾಲ ದರ್ಶನ್ ಜೊತೆಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ದರ್ಶನ್ಗೆ ಈ ವಿಚಾರ ತಿಳಿಸಿ ಹೊರಬಂದಿದ್ದಾರೆ.
ಅಪ್ಪ ದರ್ಶನ್ ಜೈಲಿನಲ್ಲಿ ದಿನನಿತ್ಯ ವಿಗ್ ನಿರ್ವಹಣೆ ಮಾಡುವುದು ಕಷ್ಟ ಆಗಿರೋದ್ರಿಂದ ವಿಗ್ ಬಿಚ್ಚಿಟ್ಟಿದ್ದಾರೆ.ಈ ವಿಚಾರ ಮೊನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗು ದರ್ಶನ್ ಪುತ್ರ ಭೇಟಿ ವೇಳೆಯಲ್ಲೇ ಗೊತ್ತಾಗಿತ್ತು. ಅಪ್ಪನನ್ನು ಆ ರೂಪದಲ್ಲಿ ಕಂಡಿದ್ದ ಮಗ ಬೇಸರಗೊಂಡಿದ್ದು, ಅಪ್ಪನಂತೆ ದರ್ಶನ್ ಪುತ್ರ ಕೂಡ ತಲೆಯನ್ನು ಬೋಳಿಸಿಕೊಂಡಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ನಟಿ ರಕ್ಷಿತಾ ದರ್ಶನ್ಗೆ ತಿಳಿಸಿದ್ದಾರಂತೆ.
ನಿನಗೆ ಈ ರೀತಿ ಆಗಬಾರದಿತ್ತು ಕಣೋ ಎಂದಿರುವ ನಟಿ ರಕ್ಷಿತಾ, ನಿನ್ನ ಮಗ ಕೂಡ ನೊಂದು ತಾನೂ ತಲೆ ಬೋಳಿಸಿಕೊಂಡಿದ್ದಾನೆ. ಈ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿರುವ ನಟಿ ರಕ್ಷಿತಾ, ನಿನಗೆ ಈ ಪರಿಸ್ಥಿತಿ ಬೇಕಿತ್ತಾ ಎಂದು ಕೋಪದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.