ದರ್ಶನ್ ಜೈಲು ಸೇರಿ 72 ದಿನಗಳು ಕಳೆದಿವೆ. ಇಡೀ ಕುಟುಂಬಸ್ಥರು ಜೈಲಿಗೆ ಭೇಟಿ ನೀಡಿ ಸಮಾಧಾನ ಹೇಳಿದ್ದಾರೆ. ಅಮ್ಮ ಮೀನಾ ತೂಗುದೀಪ ಕೂಡ ಒಮ್ಮೆ ಜೈಲಿಗೆ ಬಂದು ತಾನು ಹೆತ್ತ ಮಗನ ದುಸ್ಥಿತಿ ನೋಡಿಕೊಂಡು ಹೋಗಿದ್ದಾರೆ. ಆದರೆ ಇಲ್ಲೀವರೆಗೂ ದರ್ಶನ್ ಅಕ್ಕ ಜೈಲು ಕಡೆಗೆ ಬಂದಿಲ್ಲ.
ಸೋಮವಾರ ರಕ್ಷಾ ಬಂಧನ ಕಾರ್ಯಕ್ರಮ ನಡೆದಿದ್ದು, ರಕ್ಷಾ ದಿನವಾದರೂ ದರ್ಶನ್ ಅಕ್ಕ ಜೈಲಿಗೆ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿ ದರ್ಶನ್, ಬೇಸರಿಸಿಕೊಂಡಿದ್ದರು. ಆದರೆ ಜೈಲಿಗೆ ವಿಜಯಲಕ್ಷ್ಮಿ ಹಾಗು ಮಗ ವಿನೀಶ್ ಜೊತೆಗೆ ಸಹೋದರ ದಿನಕರ್ ಭೇಟಿ ನೀಡಿದಾಗ, ಅಕ್ಕ ಬರಲಿಲ್ವಾ ಅಂತಾ ದರ್ಶನ್ ಕೇಳಿದ್ದು, ನೀನು ಹೊರಗಿನ ವಿಚಾರದ ಬಗ್ಗೆ ತಲೆಕಡಿಸಿಕೊಳ್ಳಬೇಡ. ಅಕ್ಕ ಇನ್ನೂ ಬೇಸರದಲ್ಲಿ ಇದ್ದಾರೆ ಎಂದು ಸಮಾಧಾನ ಮಾಡಿದ್ದಾರೆ.
ಇನ್ನು ರಕ್ಷಾ ಬಂಧನ ಪ್ರಯುಕ್ತ ಕೆಲವು ಮಹಿಳಾ ಸಂಘಟನೆಯವರು ಜೈಲುವಾಸಿಗಳನ್ನು ಭೇಟಿ ಮಾಡಿ ಜೊತೆಗೆ ರಕ್ಷಾ ಬಂಧನ ಹಬ್ಬ ಆಚರಣೆ ಮಾಡಿದ್ದಾರೆ. ಎಲ್ಲಾ ಮಹಿಳಾ ಜೈಲು ವಾಸಿಗಳಿಗೆ ರಾಕಿ ಕಟ್ಟಿ ಸಿಹಿ ಹಂಚಿದ್ದಾರೆ. ಈ ವೇಳೆ ಜೈಲಿನ ಮಹಿಳಾ ಕೈದಿಗಳು ರಾಖಿ ಕಟ್ಟಿಸಿಕೊಂಡಿದ್ದು, ಪವಿತ್ರಾ ಗೌಡ ಮಾತ್ರ ಜೈಲು ಬ್ಯಾರಕ್ ಬಿಟ್ಟು ಹೊರ ಬರಲಿಲ್ಲ ಎನ್ನಲಾಗಿದೆ. ಆದ್ರೆ, ಜೈಲಿನಲ್ಲೇ ಇದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ, ರಾಖಿ ಕಟ್ಟಿಸಿಕೊಂಡಿದ್ದಾರೆ.. ದರ್ಶನ್ ಮಗ ಕೂಡಾ ರಾಖಿ ಕಟ್ಟಿಸಿಕೊಂಡು ಶುಭ ಕೋರಿದ್ರು ಎಂದಿದ್ದಾರೆ.