ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು
ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಸೌಜನ್ಯ ತಾಯಿ ಕುಸುಮಾವತಿ ಪ್ರಾರ್ಥನೆಯನ್ನು ಮಾಡಿದ್ದಾರೆ.
![](https://pratidhvani.com/wp-content/uploads/2023/08/1000267129-1024x552.jpg)
ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಸೌಜನ್ಯ ತಾಯಿ ಕುಸುಮಾವತಿ ಕಣ್ಣೀರಿಟ್ಟರಿಟ್ಟಿದ್ದಾರೆ.ಆ ಬಳಿಕ ಅಣ್ಣಪ್ಪ ಸ್ವಾಮಿಗೆ ನಾಣ್ಯ ಕಾಣಿಕೆ ಹಾಕಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ನೈಜ ಆರೋಪಿಗಳ ಪತ್ತಗೆಗಾಗಿ ಈ ಸಂದರ್ಭ ಪ್ರಾರ್ಥಿಸಿದ್ದಾರೆ. ವಿಹಿಂಪ,ಬಜರಂಗಳ ಮುಖಂಡರ ಜೊತೆಗೂಡಿ ಸೌಜನ್ಯ ತಾಯಿ ಪ್ರಾರ್ಥಿಸಿದ್ದಾರೆ.
![](https://pratidhvani.com/wp-content/uploads/2023/08/1000267018.jpg)
*ಪ್ರಾರ್ಥನೆ ಆದ ಬಳಿಕ ಸೌಜನ್ಯ ತಾಯಿ ಆರೋಪಿಸಿದವರಿಂದಲೂ ಪ್ರಾರ್ಥನೆ*
ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ ನಮ್ಮ ಹೆಸರನ್ನು ಅನಾವಶ್ಯಕ ವಾಗಿ ಎಳೆದು ತರಲಾಗಿದೆ ಎಂದು ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಮಲ್ಲಿಕ್ ಜೈನ್,ಉದಯ್ ಜೈನ್,ಧೀರಜ್ ಪ್ರಾರ್ಥನೆಯನ್ನು ಮಾಡಿದ್ದಾರೆ.
ಸಾವಿರಾರು ಜನರ ನಡೆವೆ ಎರಡೂ ಕಡೆಯವರೂ ಪ್ರಾರ್ಥನೆಯನ್ನು ಮಾಡಿದ್ದು ಈ ಸಂದರ್ಭ ಬಿಗ್ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು.