• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ನನ್ನನ್ನು ಕ್ಷಮಿಸಿ ತಪ್ಪಾಯ್ತು.. ಜನರ ಎದುರು ತಪ್ಪನ್ನು ಒಪ್ಪಿಕೊಂಡ ಕುಮಾರಣ್ಣ..

Krishna Mani by Krishna Mani
April 18, 2024
in ರಾಜಕೀಯ
0
ಕೇಸರಿ ಶಾಲು, ಹನುಮ ಧ್ವಜ ಹಿಡಿದು ದಳಪತಿ ಮತಬೇಟೆ ! ಕೆರಗೋಡು ಗ್ರಾಮದಲ್ಲಿ ರಾಮ ಜಪ ಮಾಡಿದ ಹೆಚ್.ಡಿ.ಕೆ
Share on WhatsAppShare on FacebookShare on Telegram

ಡಿಕೆ ಶಿವಕುಮಾರ್​ ಸ್ವಕ್ಷೇತ್ರ ಕನಕಪುರದಲ್ಲಿ ಜೆಡಿಎಸ್​ ಬಿಜೆಪಿ ಮೈತ್ರಿ ಸಮಾವೇಶ ನಡೆಸಿದ್ದು, ಬುಧವಾರ ರಾತ್ರಿ ಸಮಾವೇಶ ಉದ್ದೇಶಿಸಿ ಮಾಜಿ ಸಿಎಂ ಕುಮಾರಸ್ವಾಮಿ ಭಾಷಣ ಮಾಡಿದ್ದಾರೆ. 1996 ರಿಂದ ಇಲ್ಲಿಗೆ 28 ವರ್ಷ ಗಳು ಕಳೆದಿವೆ. ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ ಕನಕಪುರ ಲೋಕಸಭಾ ಕ್ಷೇತ್ರ. ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದ ಕ್ಷೇತ್ರ ಇದು. ದೇವೇಗೌಡರ ಕಷ್ಟದ ದಿನಗಳಲ್ಲಿ ಆಶೀರ್ವಾದ ಮಾಡಿದ್ದು ಇದೇ ಕ್ಷೇತ್ರದ ಜನರು. ಕನಕಪುರ ವಿಧಾನಸಭಾ ಕ್ಷೇತ್ರ ಜನತಾದಳದ ಭದ್ರಕೋಟೆ. ಈ ಕ್ಷೇತ್ರವನ್ನ ಈ ತಾಲೂಕಿನ ಜನತೆ ಬೆಳೆಸಿದ್ರು, ಇಲ್ಲಿ ನಮಗೆ ಹಿನ್ನಡೆ ಆಗಿದ್ದು, ಕಾರ್ಯಕರ್ತರು, ಜನರಿಂದ ಅಲ್ಲ. ನನ್ನನ್ನೂ ಸೇರಿದಂತೆ ಕೆಲವು ಮುಖಂಡರಿಂದ ಎಂದಿದ್ದಾರೆ.

ADVERTISEMENT

ಚನ್ನಪಟ್ಟಣದಲ್ಲೂ ಕಾರ್ಯಕರ್ತರನ್ನ ಕೊಂಡುಕೊಳ್ತಿದ್ದಾರೆ. ದೇವೇಗೌಡರು, ನನ್ನ ಬಗ್ಗೆಯೂ ಹಗುರವಾಗಿ ಮಾತನಾಡ್ತಿದ್ದಾರೆ. ಕನಕಪುರದ ನಮ್ಮ ಕಾರ್ಯಕರ್ತರಿಗೆ ನಮ್ಮಿಂದಲೇ ಅನ್ಯಾಯ ಆಗಿದೆ. ಅದಕ್ಕಾಗಿ ನಾನು ಎಲ್ಲರನ್ನೂ ಕ್ಷಮೆ ಕೇಳ್ತಿನಿ. ನಾನೂ ಎಂದೂ ಸಹ ಈ ಕ್ಷೇತ್ರದಲ್ಲಿ ರಾಜಿಗೆ ಒಳಗಾಗಿಲ್ಲ. ಈ ಮಹಾನುಭಾವರ ಜೊತೆ ನಾವು ರಾಜಿ ಮಾಡಿಕೊಂಡಿಲ್ಲ. ದೆಹಲಿಯ ಕರ್ನಾಟಕ ಭವನದಲ್ಲಿ ಆತ ಬಂದು ಕನಕಪುರಕ್ಕೆ ಕೈ ಹಾಕಬೇಡಿ ಅಂತ ಕೂತಿದ್ದ. ನಾನು ಹಿಂದೆ ಇದೇ ಸಾತನೂರು ಕ್ಷೇತ್ರದಿಂದ ಸೋತಿದ್ದೆ. ನಾನು ಎಲ್ಲೂ ಈ ಕ್ಷೇತ್ರದ ಜನತೆಗೆ ದ್ರೋಹ ಮಾಡಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

ಕನಕಪುರದ ಜನತೆ ಮುಂದೆ ದಯಾನಿಯವಾಗಿ ಬೇಡಿಕೊಂಡಿರುವ ಕುಮಾರಸ್ವಾಮಿ, ದಯಮಾಡಿ ನನ್ನ ಮೇಲೆ ಸಂಶಯಪಡಬೇಡಿ, ನೀವು ಇಲ್ಲಿ ಬಂದು ಸೇರಿರೋದ್ರಿಂದ ನಿಮಗೂ ಧಮ್ಕಿ ಹಾಕ್ತಾರೆ. ಮಧ್ಯರಾತ್ರಿ ಹೋಗಿ ನಿಮ್ಮ ಮನೆ ಬಾಗಿಲು ತಟ್ತಾರೆ. ಹಣ ಕೊಟ್ಟು ನಿಮ್ಮ ಮನೆ ಬಾಗಿಲ ಬಳಿ ಕೂರ್ತಾರೆ ಎಂದು ಡಿ.ಕೆ ಶಿವಕುಮಾರ್​ ಹಾಗು ಡಿ.ಕೆ ಸುರೇಶ್​ ಹೆಸರನ್ನು ಹೇಳದೆ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. 2018ರಲ್ಲಿ ಕಾಂಗ್ರೆಸ್ ಜೊತೆ ನನಗೆ ಸರ್ಕಾರ ಮಾಡಲು ಇಷ್ಟ ಇರಲಿಲ್ಲ ಎಂದು ಜನರ ಎದುರು ಹೇಳಿಕೊಂಡಿದ್ದಾರೆ.

ದೇವೇಗೌಡರು ಹಿಂದೆ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಅವರ ರಾಜಕೀಯ ಜೀವನ ಹಾಳು ಮಾಡಿಕೊಂಡರು. ಅವರು ಸತತ 62 ವರ್ಷಗಳ ಕಾಲ ಜನರ ಸೇವೆ ಮಾಡಿದ್ದಾರೆ. ಅಂತವರ ಬಗ್ಗೆ ಸಿಎಂ, ಡಿಸಿಎಂ ಹೇಳ್ತಾರೆ. ದೇವೇಗೌಡ ರನ್ನ ಪ್ರಧಾನ ಮಂತ್ರಿ ಮಾಡಿದ್ದು ಕಾಂಗ್ರೆಸ್ ಅಂತ. ಆದರೆ ದೇವೇಗೌಡರನ್ನ ಪ್ರಧಾನಿ ಮಾಡಿದ್ದು ನೀವಲ್ಲ, ಅವರನ್ನ 10 ತಿಂಗಳಿಗೆ ಪ್ರಧಾನಿ ಸ್ಥಾನದಿಂದ ಇಳಿಸಿದ್ದು ನೀವು. ಮೈತ್ರಿ ಅವಧಿಯಲ್ಲಿ ನನ್ನನ್ನು ಯಾವ ರೀತಿ ನಡೆಸಿಕೊಂಡ್ರಿ ಅನ್ನೋದು ಗೊತ್ತಿದೆ. ನನ್ನನ್ನು ಹೋಟೆಲ್ ಕಾರಿಡಾರ್​ನಲ್ಲಿ ನಿಲ್ಲಿಸಿದ್ರು. ನಮ್ಮ ಶಾಸಕರು ಪಕ್ಷಬಿಟ್ಟು ಹೋಗಿದ್ದು ಯಾಕೆ..? ಇದೇ ಸಿದ್ದರಾಮಯ್ಯ ಪಾರ್ಲಿಮೆಂಟ್ ಚುನಾವಣೆ ಆಗುವವರೆಗೂ ಮಾತ್ರ ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂದಿದ್ರು. ಆಮೇಲೆ ಕಿತ್ತು ಹಾಕ್ತೀವಿ ಅಂದ್ರು. ಇದು ಇವರು ನನ್ನ ನಡೆಸಿಕೊಂಡ ರೀತಿ ಎಂದು ತನಗಾದ ನೋವನ್ನು ಬಿಚ್ಚಿಟ್ಟಿದ್ದಾರೆ.

ಸಂಗಮದಿಂದ ಪಾದಯಾತ್ರೆ ಮಾಡಿದ್ರಲ್ಲ ಏನಾಯ್ತು..? ನಮ್ಮ ನೀರು, ನಮ್ಮ ಹಕ್ಕು ಅಂದ್ರಲ್ಲ ಏನಾಯ್ತು..? ಮೇಕೆದಾಟು ಕಟ್ಟಿದ್ರಾ.? ಮೋದಿ ಹತ್ರ ಚೆನ್ನಾಗಿದ್ದಾರೆ ಕುಮಾರಸ್ವಾಮಿ, ಅನುಮತಿ ಕೊಡಿಸಲಿ ಅಂತೀರಲ್ಲ, ನೀವ್ಯಾಕೆ ಪಾದಯಾತ್ರೆ ಮಾಡಿದ್ರಿ, ಜಾತ್ರೆ ಮಾಡಿದ್ರಿ..? ಪಾದಯಾತ್ರೆ ವೇಳೆ ಊರಿಗೆಲ್ಲ ಲೈಟ್ ಹಾಕಿದ್ಯಲ್ಲ..? ನನ್ನ ಒಳ್ಳೆ ಸ್ನೇಹಿತ ಅಂತೆ. ಪಾಪ ಒಳ್ಳೆಯ ಸ್ನೇಹಿತ ಆಗಿದ್ರೆ ಬೆನ್ನಿಗೆ ಚೂರಿ ಹಾಕ್ತಿದ್ರಾ..? ನಿಖಿಲ್ ಕುಮಾರಸ್ವಾಮಿ ಸೋಲಿಸಿದ್ದು ಯಾರು. ನಮ್ಮ ಭದ್ರಕೋಟೆಗೆ ಬಿಲ ತೋಡಿದ್ದು ಯಾರು..? ನನ್ನ ಮಗನಿಗೆ ನೀವು ಬೆನ್ನಿಗೆ ಚೂರಿ ಹಾಕಿದ್ರಿ.. ಆ ಕೆಲಸ ನಾನು ಮಾಡಿದ್ರೆ 2019ರಲ್ಲಿ ಡಿ.ಕೆ.ಸುರೇಶ್ ಎಂಪಿ ಅಗ್ತಿರಲಿಲ್ಲ. ನಿಮ್ಮ ಪಾಪದ ಕೊಡ ತುಂಬಿದೆ. ಕಾಲಚಕ್ರ ಉರುಳುತ್ತಿದೆ ಎಂದು ಸ್ವಕ್ಷೇತ್ರದಿಂದ ಸಂದೇಶ ರವಾನಿಸಿದ್ದಾರೆ.

ಕೃಷ್ಣಮಣಿ

Tags: Congress PartyKanakapuraಎಚ್ ಡಿ ಕುಮಾರಸ್ವಾಮಿಕ್ಷಮೆ ಕೇಳ್ತೀನಿಜೆಡಿಎಸ್ಡಿ ಕೆ ಶಿಬಿಜೆಪಿಮೈತ್ರಿ ಸಮಾವೇಶ
Previous Post

Challenging Star Darshan: ಮಂಡ್ಯ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ ನಾಳೆ…

Next Post

ಶ್ರೀರಾಮ ಘೋಷಣೆ ಘರ್ಷಣೆ.. ಓಲೈಕೆ ಆರೋಪಕ್ಕೆ ಸರ್ಕಾರ ಶಾಕ್..

Related Posts

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
0

----ನಾ ದಿವಾಕರ---- ಬಹುತೇಕ ಚಳುವಳಿ-ಹೋರಾಟಗಳು ತಾರ್ಕಿಕ ಅಂತ್ಯ ತಲುಪದಿರಲು ಕಾರಣ ಶೋಧಿಸಬೇಕಿದೆ  ಇತಿಹಾಸದ ಯಾವುದೇ ಕಾಲಘಟ್ಟದಲ್ಲಾದರೂ, ಜಗತ್ತಿನ ಯಾವುದೇ ಸಮಾಜದಲ್ಲಾದರೂ ತಳಸಮಾಜ ಮತ್ತು ಪ್ರಭುತ್ವಗಳ ವಿರುದ್ಧ ಸಂಘರ್ಷ...

Read moreDetails

ನವೆಂಬರ್‌ ನಲ್ಲಿ ಡಿಕೆಶಿ ಸಿಎಂ ಸ್ಥಾನಕ್ಕೆ ಅಪಶಕುನನಾ..?

June 17, 2025
HDK ಎಂ.ಪಿ ಆಗಿ ಕೇಂದ್ರದಲ್ಲೇ ಇರಲಿ – 2028 ಕ್ಕೂ ನಾವೆ ಅಧಿಕಾರಕ್ಕೆ ಬರ್ತೀವಿ : ಲಕ್ಷ್ಮಣ ಸವದಿ 

HDK ಎಂ.ಪಿ ಆಗಿ ಕೇಂದ್ರದಲ್ಲೇ ಇರಲಿ – 2028 ಕ್ಕೂ ನಾವೆ ಅಧಿಕಾರಕ್ಕೆ ಬರ್ತೀವಿ : ಲಕ್ಷ್ಮಣ ಸವದಿ 

June 17, 2025
ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿ ಹಾಗೂ ಜೆಡಿಎಸ್ ಕೆಲಸ: ಡಿಸಿಎಂ ಡಿ.ಕೆ. ಶಿವಕುಮಾರ್ ತರಾಟೆ

ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿ ಹಾಗೂ ಜೆಡಿಎಸ್ ಕೆಲಸ: ಡಿಸಿಎಂ ಡಿ.ಕೆ. ಶಿವಕುಮಾರ್ ತರಾಟೆ

June 16, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ತುಮಕೂರು.

June 16, 2025
Next Post
ಜೈ ಶ್ರೀರಾಮ್ ಎನ್ನುವಂತಿಲ್ಲ ! ಓನ್ಲಿ ಅಲ್ಲಾ-ಹು-ಅಕ್ಬರ್ ಎನ್ನಬೇಕಂತೆ ! ವಿದ್ಯಾರಣ್ಯಪುರದಲ್ಲಿ ಪುಂಡರ ಹಾವಳಿ !

ಶ್ರೀರಾಮ ಘೋಷಣೆ ಘರ್ಷಣೆ.. ಓಲೈಕೆ ಆರೋಪಕ್ಕೆ ಸರ್ಕಾರ ಶಾಕ್..

Please login to join discussion

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada