
ಬೆಂಗಳೂರು: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ಒಂದೆಡೆ ಬಿಜೆಪಿ-ಜೆಡಿಎಸ್ ನಾಯಕರು ಪ್ರತಿಭಟನೆ ಮಾಡುತ್ತಿದ್ದಾರೆ.ಆದರೆ ಕಾಂಗ್ರೆಸ್ ಪ್ರತಿಭಟನೆಗೆ ಒತ್ತಾಯದಿಂದ ಕೆಲ ಜನರನ್ನು ಸೇರಿಸುತ್ತಿದ್ದು, ಪ್ರತಿಭಟನೆಗೆ ಬಾರದಿದ್ದಲ್ಲಿ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ ಎಂದು ವ್ಯಕ್ತಿಯೋರ್ವ ಹೇಳುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಗ್ಯಾರಂಟಿ ಯೋಜನೆಗಳು ಕೇವಲ ವೋಟು ಪಡೆಯುವುದಕ್ಕೆ ಹೊರತು ಜನರ ಅಭ್ಯುದಯಕ್ಕೆ, ಕಲ್ಯಾಣಕ್ಕಲ್ಲ ಎಂದು ಈ ವಿಡಿಯೋ ಮೂಲಕ ಜನ ತಿಳಿದುಕೊಳ್ಳಬೇಕು. ಮುಗ್ಧ ಗ್ರಾಮಸ್ಥರನ್ನು ಹೆದರಿಸಿ, ಬೆದರಿಸಿ ಪ್ರತಿಭಟನೆಗೆ ಕರೆಯುತ್ತಿರುವುದು ಹೇಯ ಹಾಗೂ ಖಂಡನೀಯ. ಕಾಂಗ್ರೆಸ್ ಪಕ್ಷದ ನೈತಿಕತೆ ಪಾತಾಳಕ್ಕೆ ಕುಸಿದಿದೆ. ಕಾಂಗ್ರೆಸ್ ಚುನಾವಣೆ ಗೆದ್ದಿರುವುದು ಈ ರೀತಿ… pic.twitter.com/Il63OTj69f
— Basanagouda R Patil (Yatnal) (@BasanagoudaBJP) August 19, 2024
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ತಮ್ಮ ‘X’ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, ಗ್ಯಾರಂಟಿ ಯೋಜನೆಗಳು ಕೇವಲ ವೋಟು ಪಡೆಯುವುದಕ್ಕೆ ಹೊರತು ಜನರ ಅಭ್ಯುದಯಕ್ಕೆ, ಕಲ್ಯಾಣಕ್ಕಲ್ಲ ಎಂದು ವಿಡಿಯೋ ಮೂಲಕ ಜನ ತಿಳಿದುಕೊಳ್ಳಬೇಕು ಅಂತಾ ಕುಟುಕಿದ್ದಾರೆ.
ಮುಗ್ಧ ಗ್ರಾಮಸ್ಥರನ್ನು ಹೆದರಿಸಿ, ಬೆದರಿಸಿ ಪ್ರತಿಭಟನೆಗೆ ಕರೆಯುತ್ತಿರುವುದು ಹೇಯ ಹಾಗೂ ಖಂಡನೀಯ. ಕಾಂಗ್ರೆಸ್ ಪಕ್ಷದ ನೈತಿಕತೆ ಪಾತಾಳಕ್ಕೆ ಕುಸಿದಿದೆ. ಕಾಂಗ್ರೆಸ್ ಚುನಾವಣೆ ಗೆದ್ದಿರುವುದು ಈ ರೀತಿ ಸುಳ್ಳುಗಳಿಂದ ಎಂದು ಬಿಡಿಸಿ ಹೇಳಬೇಕಾಗಿಲ್ಲ ಎಂದು ಯತ್ನಾಳ್ ಟೀಕಿಸಿ ಬರೆದುಕೊಂಡಿದ್ದಾರೆ.