ಕೊಲ್ಕತ್ತಾ: ಕೊಲ್ಕತ್ತಾದಲ್ಲಿ ನಡೆದ ಟ್ರೈನಿ ವೈದ್ಯೆಯ (Kolkata Doctor Rape and Murder Case) ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕಾವು ಇನ್ನೂ ತಣ್ಣಗಾಗಿಲ್ಲ. ಈತನ್ಮಧ್ಯೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (Mamata Banerjee) ಮಮತಾ ಬ್ಯಾನರ್ಜಿಯವರು ಗುರುವಾರ ‘ಜನರ ಹಿತದೃಷ್ಟಿಯಿಂದ’ ರಾಜೀನಾಮೆ ನೀಡಲು ಸಿದ್ಧ ಎಂದು ಇದೇ ಮೊದಲ ಬಾರಿಗೆ ಹೇಳಿದ್ದರು.ಇದು ಇಡೀ ಪಶ್ಚಿಮ ಬಂಗಾಳದ ಜನತೆಗೆ ಅಚ್ಚರಿಯನ್ನುಂಟು ಮಾಡಿತ್ತು.
ನಿನ್ನೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ‘ಆರ್ಜಿ ಘಟನೆಯ ಕುರಿತು ಧರಣಿಯು ಇಂದು ಕೊನೆಗೊಳ್ಳುತ್ತದೆ ಎಂದು ಭಾವಿಸಿದ್ದೆ. ಆದರೆ ಈಗ ನಾನು ಬಂಗಾಳದ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಅವರು (ಕಿರಿಯ ವೈದ್ಯರು) ನಬನ್ಗೆ ಬಂದರು, ಆದರೆ ಸಭೆಗೆ ಹಾಜರಾಗಲಿಲ್ಲ. ನಾನು ಅವರನ್ನು ಕೆಲಸಕ್ಕೆ ಹಿಂತಿರುಗುವಂತೆ ವಿನಂತಿಸುತ್ತೇನೆ. ಬೇಕೆಂದರೆ ಜನರಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧಳಿದ್ದೇನೆ, ಕಳೆದ ಮೂರು ದಿನಗಳಲ್ಲಿ ನನ್ನ ಉತ್ತಮ ಉದ್ದೇಶ ಮತ್ತು ಪ್ರಯತ್ನಗಳ ಹೊರತಾಗಿಯೂ ವೈದ್ಯರು ಮಾತುಕತೆಗೆ ನಿರಾಕರಿಸಿದರು ಎಂದು ನೋವಿನಿಂದ ಹೇಳಿದ್ದರು.
ಮಮತಾ ವಿಭಿನ್ನ ಶೈಲಿ ಪ್ರಕಟ! ಪಶ್ಚಿಮ ಬಂಗಾಳ ನಿನ್ನೆ ಮಮತಾ ಬ್ಯಾನರ್ಜಿ ಅವರ ವಿಭಿನ್ನ ಮುಖ ಮತ್ತು ಶೈಲಿಯನ್ನು ಕಂಡಿದೆ. ತನ್ನ ಅಬ್ಬರದ ಶೈಲಿಗೆ ಹೆಸರುವಾಸಿಯಾಗಿರುವ ಮಮತಾ ಬ್ಯಾನರ್ಜಿ ನಿನ್ನೆ ತುಂಬಾ ಮೃದುವಾಗಿ, ಭಾವನಾತ್ಮಕವಾಗಿ ಮತ್ತು ಕಟ್ಟಿದ ಕೈಗಳಿಂದ ಕಾಣಿಸಿಕೊಂಡರು. ಈ ಸ್ಟೈಲ್, ಈ ಮುಖ ಮತ್ತು ಈ ದೇಹ ಭಾಷೆ ಕಳೆದ 13 ವರ್ಷಗಳಲ್ಲಿ ಜನರು ಒಂದು ಬಾರಿಯೂ ನೋಡಿರಲಿಲ್ಲ!
ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು! ಈ ಪ್ರಕರಣದಲ್ಲಿ ರಾಜ್ಯಸಭಾ ಸಂಸದ ಜವಾಹರ್ ಸರ್ಕಾರ್ ಅವರಲ್ಲೂ ಆಂತರಿಕ ಭಿನ್ನಾಭಿಪ್ರಾಯ ಶುರುವಾಗಿದೆ. ಮತ್ತೋರ್ವ ಸಂಸದ ಶುಖೇಂದು ಶೇಖರ್ ರಾಯ್ ಬಂಡಾಯವೆದ್ದಿದ್ದು, ಅಭಿಷೇಕ್ ಬ್ಯಾನರ್ಜಿ ಜತೆ ಭಿನ್ನಾಭಿಪ್ರಾಯ ಉಂಟಾಗಿದೆ. ಮಮತಾ ಮೇಲೆ ಪಕ್ಷದೊಳಗೆ ಆಂತರಿಕ ಒತ್ತಡವಿದ್ದರೆ, ರಾಜಕೀಯೇತರ ಸಂಘಟನೆಗಳ ಚಲನವಲನದಿಂದ ಹೊರಗಿನಿಂದ ಒತ್ತಡವಿದೆ. ಈ ಕಾರಣಗಳ ಹೊರತಾಗಿ, ರಾಜೀನಾಮೆ ನೀಡುವ ಹಿಂದಿನ ಕಾರಣವು ಭಾವನಾತ್ಮಕ ಒತ್ತಡವನ್ನು ಉಂಟುಮಾಡುವುದು ಕೂಡ ಆಗಿದೆ, ಇದನ್ನು ಮಮತಾ ಅವರಂತಹ ಪ್ರಬಲ ರಾಜಕಾರಣಿ ಮಾತ್ರ ಮಾಡಬಹುದು.
ನನಗೆ ಸಿಎಂ ಕುರ್ಚಿ ಬೇಡ‘ ಈ ವಿಷಯವು ನ್ಯಾಯಾಲಯದಲ್ಲಿ ಇರುವಾಗ, ಪ್ರಕರಣದ ಸೂಕ್ಷ್ಮ ವಿವರಗಳನ್ನು ನಾವು ಈ ರೀತಿ ಚರ್ಚಿಸಲು ಸಾಧ್ಯವಿಲ್ಲ ಎಂದು ಸಿಎಂ ಮಮತಾ ಹೇಳಿದರು. ಹಾಗಾಗಿ ನಡಾವಳಿಗಳನ್ನು ದಾಖಲಿಸುವ ಸೌಲಭ್ಯ ನಮಗಿತ್ತು. ಇಂದು ನಮ್ಮನ್ನು ಅಗಲಿದ ಸಂತ್ರಸ್ತೆ ಮತ್ತು ಸೀತಾರಾಂ ಯೆಚೂರಿಯವರ ಸ್ಮರಣಾರ್ಥ ನಾವು ನಿರ್ಣಯವನ್ನು ಅಂಗೀಕರಿಸುತ್ತೇವೆ ಎಂದು ನಾನು ನಿರ್ಧರಿಸಿದ್ದೆ. ನಮಗೂ ನ್ಯಾಯ ಬೇಕು, ಆದರೆ ಪ್ರಕರಣ ಈಗ ನಮ್ಮ ಬಳಿ ಇಲ್ಲ ಸಿಬಿಐ ಬಳಿ ಇದೆ. ನಾವು ಮುಕ್ತ ಮನಸ್ಸಿನಿಂದ ಲೈವ್ ಟೆಲಿಕಾಸ್ಟ್ ಬಗ್ಗೆ ಯೋಚಿಸುತ್ತೇವೆ ಆದರೆ ವಿಷಯ ಬಾಕಿಯಿರುವುದರಿಂದ ಕೆಲವು ಕಾನೂನು ನಿರ್ಬಂಧಗಳಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.