• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನಾನು ಭ್ರಷ್ಟಾಚಾರಿಯೂ ಅಲ್ಲ, ನನ್ನ ಸಿ.ಡಿ ಯಾರ ಬಳಿಯೂ ಇಲ್ಲ ; ಆದ್ರೂ ನನಗೆ ಟಿಕೆಟ್‌ ಕೊಟ್ಟಿಲ್ಲ; ಜಗದೀಶ್​ ಶೆಟ್ಟರ್​..!

ಕೃಷ್ಣ ಮಣಿ by ಕೃಷ್ಣ ಮಣಿ
April 16, 2023
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ನಾನು ಭ್ರಷ್ಟಾಚಾರಿಯೂ ಅಲ್ಲ, ನನ್ನ ಸಿ.ಡಿ ಯಾರ ಬಳಿಯೂ ಇಲ್ಲ ; ಆದ್ರೂ ನನಗೆ ಟಿಕೆಟ್‌ ಕೊಟ್ಟಿಲ್ಲ; ಜಗದೀಶ್​ ಶೆಟ್ಟರ್​..!
Share on WhatsAppShare on FacebookShare on Telegram

ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಬಿಜೆಪಿ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮಧ್ಯಾಹ್ನದ ಬಳಿಕ ಉತ್ತರ ಕನ್ನಡದ ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ಭೇಟಿ ನೀಡಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಪ್ರಕಟ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ಗಡುವಿನ ಮೇಲೆ ಗಡುವು ನೀಡಿದರೂ ಟಿಕೆಟ್​ ನೀಡುವ ಸುಳಿವು ಸಿಗದೆ ಇದ್ದಾಗ ಅಂತಿಮವಾಗಿ ಪಕ್ಷದಿಂದ ಹೊರ ಬರುವ ನಿರ್ಧಾರ ಪ್ರಕಟ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಜಗದೀಶ್​ ಶೆಟ್ಟರ್​ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಮನವೊಲಿಕೆಗೆ ಯತ್ನ ಮಾಡಿದ್ದರು. ಆ ಬಳಿಕ ಕೇಂದ್ರ ನಾಯಕರ ಜೊತೆಗೆ ಮಾತನಾಡಿ, ಸಂಜೆ ಧರ್ಮೇಂದ್ರ ಪ್ರದಾನ್​​ ಜೊತೆಗೆ ಮತ್ತೊಮ್ಮೆ ಬರುವುದಾಗಿ ತಿಳಿಸಿ ಹೋಗಿದ್ದರು. ಇದೇ ಕಾರಣಕ್ಕೆ ಬೆಳಗ್ಗೆ 11 ಗಂಟೆಗೆ ನಿರ್ಧಾರ ತಿಳಿಸುವ ಮಾತುಕೊಟ್ಟಿದ್ದ ಶೆಟ್ಟರ್​ ಸಂಜೆ ಮೇಲೆ ಮತ್ತೊಮ್ಮೆ ಸಭೆ ನಡೆಸ್ತೇನೆ ಎಂದು ಹೇಳಿ, ಕಾಲಾವಕಾಶ ನೀಡಿದ್ದರು. ಅಂತಿಮವಾಗಿ ಧರ್ಮೇಂದ್ರ ಪ್ರದಾನ್​ ಬಂದ ಬಳಿಕವೂ ಹೈಕಮಾಂಡ್​ ಜಗದೀಶ್​ ಶೆಟ್ಟರ್​ಗೆ ಟಿಕೆಟ್​​ ಕೊಡುವ ಭರವಸೆ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಶೆಟ್ಟರ್​ ಶಾಸಕ ಸ್ಥಾನ ಹಾಗು ಭಾರತೀಯ ಜನತಾ ಪಾರ್ಟಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದಾರೆ.

ADVERTISEMENT

ತ್ರಿಮೂರ್ತಿಗಳ ಸಂಧಾನ ಸಂಚು.. ಮೂವರದ್ದು ಒಂದೇ ಮಾತು..!

ಬೆಳಗಾವಿಯಲ್ಲಿ ಟಿಕೆಟ್​ ವಂಚಿತರ ಸಭೆ ನಡೆಸಲು ತೆರಳಿದ್ದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರದಾನ್​​, ಹುಬ್ಬಳ್ಳಿಯ ಜಗದೀಶ್​ ಶೆಟ್ಟರ್​ ನಿವಾಸಕ್ಕೆ ಆಗಮಿಸಿದ್ದರು. ಈ ಭೇಟಿಗೂ ಮೊದಲು ಹೋಟೆಲ್​ನಲ್ಲಿ ಸಭೆ ಸೇರಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಧರ್ಮೇಂದ್ರ ಪ್ರದಾನ್​ ಶೆಟ್ಟರ್​ ಮನವೊಲಿಕೆ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ್ರು. ಹೈಕಮಾಂಡ್​ ನಾಯಕರನ್ನೂ ಸಂಪರ್ಕ ಮಾಡುವ ಪ್ರಯತ್ನ ಮಾಡಿದ ಅವರಿಗೆ ದೆಹಲಿಯಿಂದ ಟಿಕೆಟ್​ ನೀಡಲು ಸಾಧ್ಯವೇ ಇಲ್ಲ ಎನ್ನುವ ಸಂದೇಶ ಸಿಕ್ಕಿತ್ತು. ಇದೇ ಕಾರಣಕ್ಕೆ ಶೆಟ್ಟರ್​ ನಿವಾಸಕ್ಕೆ ಬರುವುದನ್ನು ತಡ ಮಾಡಿದ ತ್ರಿಮೂರ್ತಿಗಳು ರಾತ್ರಿ 9.30ರ ಸುಮಾರಿಗೆ ಶೆಟ್ಟರ್​ ನಿವಾಸಕ್ಕೆ ಬಂದು ಪಕ್ಷ ತೊರೆಯದಂತೆ ಮನವಿ ಮಾಡಿದರು. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಟಿಕೆಟ್​ ಕೊಡಿಸುವ ಬಗ್ಗೆ ಹೈಕಮಾಂಡ್​ ನಾಯಕರ ಜೊತೆಗೆ ಚರ್ಚೆ ನಡೆಸ್ತೇವೆ ಎಂದು ತಿಳಿಸಿದ್ರು. ಯಾವುದಕ್ಕೂ ಶೆಟ್ಟರ್​ ಸೊಪ್ಪು ಹಾಕದಿದ್ದಾಗ ಪೆಚ್ಚು ಮೋರೆ ಹಾಕಿಕೊಂಡು ಹೊರಕ್ಕೆ ನಡೆದಿದ್ದರು. ಅಂತಿಮವಾಗಿ ಶೆಟ್ಟರ್​ ಕೇಸರಿ ಪಕ್ಷದ ಹೊಸ್ತಿಲು ದಾಟುವ ನಿರ್ಧಾರ ಘೋಷಣೆ ಮಾಡಿದರು.

ನಾನು ಭ್ರಷ್ಟಾಚಾರಿಯೂ ಅಲ್ಲ, ನನ್ನ ಸಿ.ಡಿ ಯಾರ ಬಳಿಯೂ ಇಲ್ಲ..!

ಬಿಜೆಪಿ ಪಕ್ಷದಿಂದ ಹೊರಕ್ಕೆ ಬರುವುದಾಗಿ ಘೋಷಣೆ ಮಾಡುವ ಮೊದಲು ಮಾತಿನ ಸುರಿಮಳೆಗರೆದ ಶೆಟ್ಟರ್​, ನನ್ನ ವಿರುದ್ಧ ಕಳೆದ ಮೂರ್ನಾಲ್ಕು ತಿಂಗಳಿಂದ ಕೆಟ್ಟ ವ್ಯವಸ್ಥೆ ಕೆಲಸ ಮಾಡಿದೆ. ನಾನು ಯಾವುದೇ ಹಗರಣ ಮಾಡಿಲ್ಲ, ನನ್ನ ಸಿ.ಡಿಗಳು ಯಾರ ಬಳಿಯೂ ಇಲ್ಲ. ನನ್ನ ಮೇಲೆ ಯಾವುದೇ ಆರೋಪಗಳೂ ಇಲ್ಲ. ಕಪ್ಪು ಚುಕ್ಕೆ ಇಲ್ಲದಂತೆ ರಾಜಕಾರಣ ಮಾಡಿದ್ದೇನೆ. ಪಕ್ಷ ಕಷ್ಟದಲ್ಲಿದ್ದಾಗ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷ ಕೊಟ್ಟ ಯಾವುದೇ ಗೌರವವನ್ನು ಎಂಜಾಯ್​ ಮಾಡಿಲ್ಲ, ಕೆಲಸ ಮಾಡಿದ್ದೀನಿ. ಸೆಕ್ಸ್ ಹಗರಣ, ಸಿ.ಡಿ ಹಗರಣ, ಭ್ರಷ್ಟಾಚಾರ, ರೌಡಿಸಂನಲ್ಲಿ ಇದ್ದವರಿಗೆ ಟಿಕೆಟ್​ ಕೊಡಲಾಗ್ತಿದೆ. 75 ವರ್ಷ ತುಂಬಿದವರಿಗೆ, ಕ್ರಿಮಿನಲ್​ಗಳಿಗೆ ಟಿಕೆಟ್​ ಕೊಟ್ಟಿದ್ದಾರೆ. ಜೈಲಿಗೆ ಹೋಗಿ ಬಂದವ್ರಿಗೆ ಟಿಕೆಟ್​​ ಕೊಟ್ಟಿದ್ದು ನನಗೆ ಕೊಟ್ಟಿಲ್ಲ. ನನಗೆ ಟಿಕೆಟ್​ ಯಾಕೆ ಕೊಡ್ತಿಲ್ಲ ಅಂದ್ರೆ ಪ್ರಹ್ಲಾದ್​ ಜೋಶಿ, ಧರ್ಮೇಂದ್ರ ಪ್ರದಾನ್​, ಬಸವರಾಜ ಬೊಮ್ಮಾಯಿ ಯಾರ ಬಳಿಯೂ ಉತ್ತರವಿಲ್ಲ. ಹೈಕಮಾಂಡ್​ ತೀರ್ಮಾನ ಅಂತಷ್ಟೇ ಹೇಳ್ತಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ನನಗೆ ಹಠ ಬಂದಿದೆ. ಚುನಾವಣೆಗೆ ಸ್ಪರ್ಧೆ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್​-ಜೆಡಿಎಸ್​-ಪಕ್ಷೇತರ ಇನ್ನು ನಿರ್ಧಾರ ಆಗಿಲ್ಲ..!

ನನ್ನನ್ನ ಬಿಜೆಪಿಯವ್ರು ಯೂಸ್​​ ಅಂಡ್​ ಥ್ರೋ ರೀತಿ ಬಳಸಿ ಬಿಸಾಡಿದ್ದಾರೆ. ನನ್ನನ್ನ ಪಕ್ಷ ಕಡೆಗಣಿಸಿದ್ಮೇಲೆ ಹಠ ಹೆಚ್ಚಾಗಿದ್ದು, ನನ್ನ ಮೇಲೆ ಕುತಂತ್ರ, ಷಡ್ಯಂತ್ರ ಮಾಡಿದ ಪಕ್ಷದಲ್ಲಿ ನಾನು ಇರಲ್ಲ. ಈ ಸಲ ಎಲೆಕ್ಷನ್​ಗೆ ನಿಲ್ತೀನಿ, ಯಾರಿಂದ್ಲೂ ತಪ್ಪಿಸಲು ಆಗಲ್ಲ. ಆದರೆ ಪಕ್ಷೇತರನಾಗಿ ಸ್ಪರ್ಧೆ ಮಾಡಬೇಕಾ..? ಕಾಂಗ್ರೆಸ್​ ಅಥವಾ ಜೆಡಿಎಸ್​​ ಪಕ್ಷದಿಂದ ಸ್ಪರ್ಧೆ ಮಾಡುವುದು ಸೂಕ್ತವೇ..? ಅನ್ನೋ ಬಗ್ಗೆ ಪಕ್ಷ ಹಾಗು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಬಲಿಗರ ಸಭೆ ನಡೆಸಿ ಅಂತಿಮ ನಿರ್ಧಾರ ಮಾಡ್ತೇನೆ ಎಂದಿದ್ದಾರೆ. ಈ ನಡುವೆ ಕಾಂಗ್ರೆಸ್​ನಿಂದ ಈಗಾಗಲೇ ಜಗದೀಶ್​ ಶೆಟ್ಟರ್​ಗೆ ಆಹ್ವಾನ ಹೋಗಿದ್ದು, ಅದೇ ಕಾರಣಕ್ಕಾಗಿ ಶೆಟ್ಟರ್​ ಕ್ಷೇತ್ರಕ್ಕೆ ಕಾಂಗ್ರೆಸ್​ ಟಿಕೆಟ್​ ಘೋಷಣೆ ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ಹುಬ್ಬಳ್ಳಿ ಭಾಗದಲ್ಲಿ ಕಾಂಗ್ರೆಸ್​ ಈಗಾಗಲೇ ಬಲಾಡ್ಯವಾಗಿದ್ದು, ಬಂಡಾಯ ಸೃಷ್ಟಿಯಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಶೆಟ್ಟರ್​ ಕಾಂಗ್ರೆಸ್​​ನಿಂದ ಸ್ಪರ್ಧೆ ಮಾಡಿದರೆ ಕಾಂಗ್ರೆಸ್​ ಕಾರ್ಯಕರ್ತರು, ನಾಯಕರು ಜೆಡಿಎಸ್​ ಬಾಗಿಲು ತಟ್ಟಬಹುದು. ಆಗ ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ಹೆಚ್ಚಾಗಿದೆ.

ಕೃಷ್ಣಮಣಿ

Tags: BJPBJP GovernmentbjpkarnatakabsyediyurappacmbommaijadishshettarModi GovernmentPMModiUnion Minister Prahlad Joshiಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಬಿಜೆಪಿಗೆ ಸಾಲು ಸಾಲು ರಾಜೀನಾಮೆ..! ಟಿಕೆಟ್​ ಅಷ್ಟೇ ಅಲ್ಲ.. ಮೈತ್ರಿ ಸರ್ಕಾರ..!

Next Post

ತತ್ವಹೀನ ರಾಜಕಾರಣ ಸತ್ವಹೀನ ಪ್ರಜಾತಂತ್ರ..ಅಧಿಕಾರ ಕೇಂದ್ರಗಳ ಆಮಿಷಗಳಿಗೆ ಬಲಿಯಾಗುತ್ತಲೇ ಇರುವ ತತ್ವಸಿದ್ಧಾಂತದ ನೆಲೆಗಳು

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ತತ್ವಹೀನ ರಾಜಕಾರಣ ಸತ್ವಹೀನ ಪ್ರಜಾತಂತ್ರ..ಅಧಿಕಾರ ಕೇಂದ್ರಗಳ ಆಮಿಷಗಳಿಗೆ ಬಲಿಯಾಗುತ್ತಲೇ ಇರುವ ತತ್ವಸಿದ್ಧಾಂತದ ನೆಲೆಗಳು

ತತ್ವಹೀನ ರಾಜಕಾರಣ ಸತ್ವಹೀನ ಪ್ರಜಾತಂತ್ರ..ಅಧಿಕಾರ ಕೇಂದ್ರಗಳ ಆಮಿಷಗಳಿಗೆ ಬಲಿಯಾಗುತ್ತಲೇ ಇರುವ ತತ್ವಸಿದ್ಧಾಂತದ ನೆಲೆಗಳು

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada