೨೦೨೮ ಕ್ಕೆ ಜೆಡಿಎಸ್ ಬಿಜೆಪಿ ಸರ್ಕಾರ (jds – Bjp) ಅಧಿಕಾರಕ್ಕೆ ಬಂದರೆ ನಾನೇ ಬಟ್ಟೆ ಹೊಲಿಸಿಕೋಡ್ತೀನಿ ಎಂದು ಡಿಕೆಶಿ (Dk Shivakumar) ವ್ಯಂಗ್ಯವಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದಾರೆ.ನೋಡಿ..ಡಿಕೆ ಶಿವಕುಮಾರ್ ಅವರ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನನಗೆ ಬಂದಿಲ್ಲ.ಡಿಕೆಶಿಯಿಂದ ಬಟ್ಟೆ ಹೊಲಸಿಕೊಳ್ಳುವಷ್ಟು ದಾರಿದ್ರ್ಯ ಈ ನಾಡಿನ ಜನತೆ ನನಗೆ ಕೊಟ್ಟಿಲ್ಲ ಎಂದಿದ್ದಾರೆ.
ಈ ರೀತಿಯ ದಾರಿದ್ರ್ಯ ಇರೋದು ಅವರಿಗೆ,ದುಡ್ಡಿನ ದಾರಿದ್ರ್ಯ.. ಆ ಪಾಪದ ಹಣದಿಂದ ಅವನಿಂದ ನಾನು ಬಟ್ಟೆ ತರಿಸಬೇಕಾ?ನನಗೆ ಬಟ್ಟೆ ಬೇಕಾದ್ರೆ ಈ ನಾಡಿನ ಜನ ಇದ್ದಾರೆ ಅಲ್ವ..? ಇಲ್ಲಿಯವರೆಗೂ ಬೆಳೆಸಿರುವ ಜನ ತಂದುಕೋಡ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇಂತಹ ಪಾಪದ ಹಣ..ಲೂಟಿ ಹೊಡೆದಿರುವ ಹಣದಿಂದ ತರಸಿಕೊಳ್ಳಬೇಕಾ ಎಂದು ಡಿಸಿಎಂ ಡಿಕೆಶಿವಕುಮಾರ್ ವಿರುದ್ಧ ಹೆಚ್ ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ತಮ್ಮ ಡಿಕೆ ಸುರೇಶ್ ರನ್ನ ಕೆಎಂಎಫ್ ಅಧ್ಯಕ್ಷ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ, ಈಗ ಅವರ ಸರ್ಕಾರ ಇದೆ ಮಾಡಿಕೊಳ್ತಾರೆ.ಅದೆಲ್ಲ ಬೇಡ ಬನ್ನಿ..ಸಮಯ ಬರುತ್ತೆ ಅದಕ್ಕೆ ಉತ್ತರ ಕೋಡೋಣ ಎಂದು ಹೆಚ್ಡಿಕೆ ಹೇಳಿದ್ದಾರೆ.