ಟಿಬಿ ಡ್ಯಾಂನ (TB dam) 19ನೇ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾದ ಬೆನ್ನಲ್ಲೇ, ತಮ್ಮ ಪ್ರಾಣ ಪಣಕ್ಕಿಟ್ಟು ಗೇಟ್ ಅಳವಡಿಸಲು ಕಷ್ಟ ಪಟ್ಟ ಕಾರ್ಮಿಕರಿಗೆ ಸನ್ಮಾನಿಸಲಾಗಿದೆ. ಕಾರ್ಯಾಚರಣೆ ಮೊದಲ ದಿನ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರಿಗೆ ಧೈರ್ಯ ತುಂಬಿದ್ದ ಸಚಿವ ಜಮೀರ್ (jameer ahemad khan), ಎಲ್ಲ ಕಾರ್ಮಿಕರಿಗೂ ವೈಯಕ್ತಿಕವಾಗಿ ಬಹುಮಾನ ನೀಡೇನೆ ಎಂದು ಘೋಷಿಸಿದ್ರು.
ಇದೀಗ ಕೊಟ್ಟ ಮಾತಿನಂತೆ ಸಚಿವ ಜಮೀರ್ ಅಹಮದ್, ಟಿಬಿ ಡ್ಯಾಂ ಆವರಣದಲ್ಲಿ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ರು. ಕಂಪ್ಲಿ ಶಾಸಕ ಜೆ.ಎನ್. ಗಣೇಶ್ (MLA J N ganesh) ನೇತೃತ್ವದಲ್ಲಿ ಕಾರ್ಯಚರನೆಯಲ್ಲಿ ಭಾಗಿಯಾಗಿದ್ದ ತಂತ್ರಜ್ಞರು, ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ತಲಾ 50 ಸಾವಿರ ಬಹುಮಾನ ನೀಡಿ ಸನ್ಮಾನಿಸಲಾಗಿದೆ.
ಆ ಮೂಲಕ ಕಾರ್ಯಾಚರಣೆಯಲ್ಲಿ ಭಾಗಿಯಾದ 10 ವಿಂಗ್ ಗಳಿಗೆ, ಒಬ್ಬರಿಗೆ 50 ಸಾವಿರದಂತೆ ಒಟ್ಟು 10 ಲಕ್ಷ ರೂಪಾಯಿ ಹಣವನ್ನ ಸಚಿವ ಜಮೀರ್ ಬಹುಮಾನವಾಗಿ ವಿತರಣೆ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಶ್ರಮ ಗುರುತಿಸಿ ಸಚಿವರು ಗೌರವಿಸಿದ್ದಕ್ಕೆ ಕಾರ್ಮಿಕರೂ ಸಂತಸ ವ್ಯಕ್ತಪಡಿಸಿದ್ದಾರೆ.