ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಈಗಾಗಲೇ ಪರಪ್ಪನ ಅಗ್ರಹಾರದಲ್ಲಿರೋ ನಟ ದರ್ಶನ್ (Actor darshan) ಮನೆಯೂಟಕ್ಕಾಗಿ ಮನವಿ ಮಾಡಿದ್ದ ಅರ್ಜಿಯ ವಿಚಾರಣೆ ಇವತ್ತು ಹೈಕೋರ್ಟ್ನಲ್ಲಿ ನಡೆದಿದೆ. ಹೈಕೋರ್ಟ್ ನ್ಯಾಯಾಮೂರ್ತಿ ಎಂ ನಾಗಪ್ರಸನ್ನ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಗಿದೆ.
ಈ ಬಗ್ಗೆ ದರ್ಶನ್ಗೆ ಮನೆಯೂಟದ ವ್ಯವಸ್ಥೆ ಬೇಡ ಅಂತ ಮನವಿಯನ್ನ ತಿರಸ್ಕರಿಸಿರೋದಾಗಿ ಬಂಧಿಖಾನೆ ಇಲಾಖೆಯ ಎಸ್ಪಿಪಿ ಬೆಳ್ಳಿಯಪ್ಪ ಇದೇ ಅಂದರ್ಭದಲ್ಲಿ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ದರ್ಶನ್ ಪರ ವಕೀಲೆ ಸಂಜೀವಿನಿ ಇಂದು ನ್ಯಾಯಲಯದಲ್ಲಿ ಮನವಿ ಮಾಡಿದ್ರು.
ಈ ಹಿನ್ನಲೆ ದರ್ಶನ್ ಪರ ವಕೀಲೆಯ ಮನವಿ ಪುರಸ್ಕರಿಸಿದ ನ್ಯಾಯಲಯ (Highcourt) ಸದ್ಯ ಈ ಅರ್ಜಿಯ ವಿಚಾರಣೆಯನ್ನ ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಜೈಲಿ ಸೇರಿ ಈಗಾಗಲೇ 55 ದಿನಗಳು ಕಲೆದು ಹೋಗಿದ್ದು, ಮನೆಯೂಟಕ್ಕಾಗಿ ಪ್ರಯತ್ನ ಪಡುತ್ತಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಮುಂದಿನ ವಿಚಾರಣೆ ತನಕ ದರ್ಶನ್ಗೆ ಜೈಲೂಟವೇ ಗಟ್ಟಿಯಾಗಿದೆ