ಮೈಸೂರು (Mysuru) ಜಿಲ್ಲೆ ತಿ.ನರಸೀಪುರ (T narasipura) ತಾಲ್ಲೂಕಿನ ಕೆಂಪಯ್ಯನಹುಂಡಿ ಗೇಟ್ ಸಮೀಪ ಕವರ್ ಒಂದರಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು, ಆತಂಕ್ಕೆ ಕಾರಣವಾಗಿದೆ. ಇಲ್ಲಿನ ಹೋಟೆಲ್ ಒಂದರ ಬಳಿ ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ನಲ್ಲಿ ಅಪರಿಚಿತರು ಇಟ್ಟು ಹೋಗಿದ್ದಾರೆ.
ಈ ಹೋಟೆಲ್ ನ ಸಿಬ್ಬಂದಿ, ಅನುಮಾನಗೊಂಡು ಈ ಪ್ಲಾಸ್ಟಿಕ್ ಕವರ್ ನಲ್ಲಿ ಏನಿದೆ ಎಂದು ತೆಗೆದು ನೋಡಿದ್ದಾರೆ. ಕವರ್ನಲ್ಲಿ ಇದ್ದ ಸ್ಪೋಟಕಗಳನ್ನ ಕಂಡು ಗಾಬರಿಗೊಂಡು, ತಕ್ಷಣವೇ ಆ ಕವರ್ನ ಪಕ್ಕದಲ್ಲಿದ್ದ ಮರಕ್ಕೆ ನೇತು ಹಾಕಿ, ಸ್ಥಳೀಯ ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ.
ಈ ರೀತಿ ಗ್ರಾಮಸ್ಥರಿಂದ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಬಾಂಬ್ ತಜ್ಞರು (Bomb experts) ಭೇಟಿ ನೀಡಿ ಸ್ಪೋಟಕ ವಸ್ತುಗಳ ಪರಿಶೀಲನೆ ನಡೆಸಿದ್ರು. ಸದ್ಯ ಟ್ಯೂಬ್ ಆಕಾರದಲ್ಲಿರುವ 9 ಸ್ಪೋಟಕ ವಸ್ತುಗಳು ಮತ್ತು ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಯಾಗಿದೆ. ಇಲ್ಲಿ ಸಿಕ್ಕ ಸ್ಪೋಟಕ ವಸ್ತುಗಳನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗ್ತಿದೆ.






