ಮೈಸೂರಿನಲ್ಲಿ (Mysore) ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದ ಕೇಂದ್ರ ಸಚಿವ ಹೆಚ್ಡಿಕೆ (HD Kumaraswamy) ಇಂದು ಕೂಲ್ ಮೂಡ್ಗೆ ಜಾರಿದ್ದಾರೆ. ಇಂದು ಮಂಡ್ಯಗೆ ಭೇಟಿ ಕೊಟ್ಟು ರೈತರ ಜೊತೆಗೆ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ್ದಾರೆ.

ಮಂಡ್ಯದ ಸೀತಾಪುರ (Mandya, sitapura) ಗ್ರಾಮದ ಜಮೀನಿನಲ್ಲಿ ಹೆಚ್ಡಿಕೆ ರೈತರೊಟ್ಟಿಗೆ ನಾಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಇದಾದ ನಂತರ ನಾಟಿ ಕಾರ್ಯ ಮುಗಿದ ಬಳಿಕ ರೈತರೊಂದಿಗೆ ಮತ್ತಷ್ಟು ಸಮಯ ಕಳೆಯಲಿರುವ ಕುಮಾರಸ್ವಾಮಿ, ಅನ್ನದಾತರೊಂದಿಗೆ ಊಟ ಮಾಡಲಿದ್ದಾರೆ.
ಈ ಮಧ್ಯೆ ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ (River cauvery) ಹೆಚ್ ಡಿ ಕುಮಾರಸ್ವಾಮಿ ಪೂಜೆ ಸಲ್ಲಿಸಿ ಬಾಗೀನ ಕೂಡ ಅರ್ಪಿಸಿದ್ರು. ನಿನ್ನೆಯವರೆಗೂ ಪಾದಯಾತ್ರೆ ಸಮಾವೇಷ ಎಂದು ಬ್ಯುಸಿಯಾಗಿದ್ದ ಕುಮಾರಸ್ವಾಮಿ ಇಂದು ಮಂಡ್ಯ ಕ್ಷೇತ್ರಕ್ಕೆ ಸಮಯ ಮೀಸಲಿಟ್ಟಿದ್ದಾರೆ.