ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಮೂಡ ಹಗರಣಕ್ಕೆ (MUDA SCAM) ಸಂಬಂಧಪಟ್ಟಂತೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲಾ ಸೃಷ್ಟಿಯಾಗಿದ್ದು, ಇದೀಗ ಸಿಎಂ ಸಿದ್ದರಾಮಯ್ಯ (Cm Siddaramiah) ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಿರಿಯ ವಕೀಲರ ಮೂಲಕ ಹೈಕೋರ್ಟ್ಗೆ (high ourt) ಸಿಎಂ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಇದಾದ ಬಳಿಕ, ಇದೇ ಆಗಸ್ಟ್ 23ರಂದು ಸಿಎಂ ಸಿದ್ದು ದೆಹಲಿಗೆ ತೆರಳಲಿದ್ದಾರೆ. ಪ್ರಾಸಿಕ್ಯೂಷನ್ (Prosecution) ಅನುಮತಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ (Congress Highcommand) ಬಳಿ ಚರ್ಚಿಸಲಿದ್ದಾರೆ. ರಾಹುಲ್ ಗಾಂಧಿ (Rahul gandhi), ಸೋನಿಯಾ ಗಾಂಧಿ (Sonia gandhi), ವೇಣುಗೋಪಾಲ್ (Venugopal) ಭೇಟಿಯಾಗಿ ಪ್ರಾಶಿಕ್ಯೂಷನ್ ವಿಚಾರದ ಬಗ್ಗೆ ಸಿಎಂ ಮಾತ್ನಾಡಲಿದ್ದಾರೆ.
ಇದಕ್ಕೂ ಮುನ್ನ,ಆಗಸ್ಟ್ 22ರಂದು ಸಿಎಂ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಬಳಿಕ 23ರಂದು ಕಾಂಗ್ರೆಸ್ ವರಿಷ್ಠರ ಭೇಟಿಯಾಗಿ ಚರ್ಚಿಸಲಿದ್ದಾರೆ. ಈ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಹೈಕಮ್ಯಾಮಡ್ನಿಮದ ಸಿದ್ದುಗೆ ಯಾವ ಸಂದೇಶ ರವಾನೆಯಾಗಲಿದೆ ಎಂಬುದು ಕಾದುನೋಡಬೇಕಿದೆ.