• Home
  • About Us
  • ಕರ್ನಾಟಕ
Wednesday, September 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಒಂದೇ ಸಮಯದಲ್ಲಿ ವಿಜ್ಞಾನ ಮತ್ತು ಧರ್ಮ ಎರಡನ್ನು ನಂಬುವುದು ಹೇಗೆ ಸಾಧ್ಯ?

ಪ್ರತಿಧ್ವನಿ by ಪ್ರತಿಧ್ವನಿ
July 26, 2025
in Top Story, ಜೀವನದ ಶೈಲಿ
0
ಒಂದೇ ಸಮಯದಲ್ಲಿ ವಿಜ್ಞಾನ ಮತ್ತು ಧರ್ಮ ಎರಡನ್ನು ನಂಬುವುದು ಹೇಗೆ ಸಾಧ್ಯ?
Share on WhatsAppShare on FacebookShare on Telegram

ADVERTISEMENT

ಧರ್ಮ ಎಂದರೆ, ಆಂಗ್ಲದ ‘Religion’ ಎಂದು ಭಾವಿಸಿದ್ದೇನೆ. ನನ್ನ ಉತ್ತರವು ಈ ಭಾವದ ಆಧಾರದ ಮೇಲೆ ಕಟ್ತಿರಲಾಗುತ್ತದೆ.

ಮೊದಲನೆಯದಾಗಿ, ಧರ್ಮ ಎಂದರೇನು ಎಂದು ನಾವು ಯೋಚಿಸಬೇಕು. ಧರ್ಮ ಎಂದರೆ ಗತಕಾಲದ ಯಾವುದೋ ಪುಸ್ತಕದಲ್ಲಿರುವ ನಿಬಂಧನೆಗಳೋ? ಅಥವ ನಾವು ಮಾಡಿಕೊಂಡಿರುವ ಕಟ್ಟುಪಾಡುಗಳೋ? ಧರ್ಮಗುರುಗಳು, ಪುರೋಹಿತರು ಹೇಳುವ ಶಾಸ್ತ್ರವೋ? ಇಲ್ಲವೇ ಆ ಧರ್ಮದ ದೇವತೆಗಳನ್ನು ಪೂಜಿಸುವುದೋ?

ನನ್ನ ಪ್ರಕಾರ ಧರ್ಮ ಎಂಬುದು ಅವರವರು ಇಟ್ಟುಕೊಂಡಿರುವ ನಂಬಿಕೆಗಳಷ್ಟೇ. ಪ್ರತಿಯೊಬ್ಬರ ನಂಬಿಕೆಗಳು ಅವರದ್ದೇ. ನಾನು ಹಿಂದು ಧರ್ಮ ಪಾಲಿಸುತ್ತೇನೆ ಎಂದರೆ ಹಿಂದೂ ಧರ್ಮಗುರುಗಳು, ಗ್ರಂಥಗಳು ಹೇಳಿರುವುದನ್ನು ಪಾಲಿಸಬೇಕೆಂದಲ್ಲ. ಆದರೆ ಆ ಧರ್ಮದ ಸಿದ್ಧಾಂತಗಳನ್ನು ಒಪ್ಪಿರುತ್ತೇನೆ ಎಂದು.

ಬೌದ್ಧ ಧರ್ಮಿಗಳು ದೇವರ ಅಸ್ತಿತ್ವವನ್ನು ಒಪ್ಪುವುದಿಲ್ಲ. ಹಿಂದೂ ಧರ್ಮಿಗಳು ದೇವರ ಅಸ್ತಿತ್ವವನ್ನು ಒಪ್ಪಿ, ಅವರಿಗೆ ಪೂಜೆ ಸಲ್ಲಿಸುತ್ತಾರೆ. ಕೆಲವರು ಪೂಜೆಯನ್ನು ಮೂರ್ತಿಯೊಂದಕ್ಕೆ ಸಲ್ಲಿಸಬಹುದು. ಇನ್ನು ಕೆಲವರು ಪ್ರಾಣಿಗಳನ್ನೇ ದೇವರೆಂದು ನಂಬುತ್ತಾರೆ. ಹೀಗೆ ಧರ್ಮ ಎಂಬುದು ಅವರವರ ನಂಬಿಕೆಗಳಿಂದ ರೂಪಿಸಿಕೊಂಡಿರುತ್ತದೆ. ನಂಬಿಕೆಯಿಂದ ಧರ್ಮವೇ ಹೊರೆತು, ಧರ್ಮದಿಂದ ನಂಬಿಕೆಯಲ್ಲ.

ನೀವು ಅವೈಜ್ಞಾನಿಕ ನಂಬಿಕೆಗಳ್ಳನ್ನು ಇಟ್ಟುಕೊಂಡಿದ್ದರೆ, ಧರ್ಮ ಹಾಗೂ ವಿಜ್ಞಾನ ಎರಡನ್ನೂ ಒಪ್ಪುವುದು ಸಾಧ್ಯವಿಲ್ಲ. ಎರಡರ ನಡುವೆ ನಿಮ್ಮ ಮನಸ್ಸಿನಲ್ಲಿ ಸದಾಕಾಲ ಗೊಂದಲವಿರುತ್ತದೆ. ಆದರೆ ನೀವು ನಿಮ್ಮ ನಂಬಿಕೆಗಳನ್ನು, ವಿಜ್ಞಾನದ ಅಡಿಪಾಯದ ಮೇಲೆ ಕಟ್ಟಿಕೊಂಡರೆ, ಧರ್ಮ ಹಾಗೂ ವಿಜ್ಞಾನವೆರಡನ್ನೂ ಒಪ್ಪಬಹುದು. ಎರಡರ ಸವಿಯನ್ನೂ ಸವಿಯಬಹುದು.

ಈಗ ಇನ್ನೊಂದು ಸೂಕ್ಷ್ಮ ವಿಚಾರದ ಕಡೆ ನಾವು ನಮ್ಮ ಗಮನ ಹರಿಸೋಣ. ವಿಜ್ಞಾನದ ಪುಸ್ತಕದಲ್ಲಿ ಹೇಳಿದ್ದೆಲ್ಲವೂ ಸತ್ಯ ಎಂದು ತಿಳಿಯಬೇಡಿ. ಅದನ್ನು ಪ್ರಶ್ನಿಸಿ, ಪರೀಕ್ಷಿಸಿ. ಹೇಗೆ ನಾವು ವಿಜ್ಞಾನವನ್ನು ಪ್ರಶ್ನಿಸಿ ಪರೀಕ್ಷಿಸುತ್ತೇವೋ, ಹಾಗೆಯೆ ನಾವು ನಮ್ಮ ಧರ್ಮಗ್ರಂಥಗಳು, ಧರ್ಮಗುರುಗಳು, ಧರ್ಮಗಳು, ನಂಬಿಕೆಗಳನ್ನೂ ಪ್ರಶ್ನಿಸಬೇಕು, ಪರೀಕ್ಷಿಸಬೇಕು.

ನಮ್ಮ ದೇಶದ ಇತಿಹಾಸದಲ್ಲಿ ಧರ್ಮವನ್ನು ನಾವು ಹಲವಾರು ಬಾರಿ ಪ್ರಶ್ನಿಸಿದ್ದೇವೆ. ಶಂಕರರು, ಮಂಡನ ಮಿಶ್ರರ ನಡುವಿನ ತರ್ಕ ನಮಗೆ ತಿಳಿದಿರುತ್ತದೆ. ಆಗ ಅವರಿಗಿದ್ದ ವಿವೇಕ ಈಗ ನಮಗೇಕಿಲ್ಲ?

ಧರ್ಮಗ್ರಂಥಗಳನ್ನು ಆಗಿನ ಚಿಂತಕರು, ತತ್ವಜ್ಞಾನಿಗಳು ತಮ್ಮ ಕಾಲ, ವಾಸಸ್ಥಳ, ಜೀವನಶೈಲಿ, ಹಾಗೂ ಅವರ ನಂಬಿಕೆಗಳ ಮೇಲೆ ರಚಿಸಿರುತ್ತರೆ. ನಾವು ಅದರಲ್ಲಿರುವ ಎಲ್ಲ ಸಿದ್ಧಾಂತಗಳನ್ನು ಈಗ ಒಪ್ಪಲೇ ಬೇಕೆಂದಲ್ಲ. ಅವನ್ನು ಪ್ರಶ್ನಿಸಿ, ಬದಲಾಯಿಸುವ ಎಲ್ಲ ಹಕ್ಕು ನಮಗಿದೆ.

ಕೊನೆಯದಾಗಿ, ದಯೆಯಿಲ್ಲದ ಧರ್ಮವಾವುದಯ್ಯ? ದಯೆಯೇ ಧರ್ಮದ ಮೂಲವಯ್ಯ.

ನವೀನ ಹೆಚ್ ಎ
ಹನುಮನಹಳ್ಳಿ
ಕೆ ಆರ್ ನಗರ

Tags: belief in sciencebelieving in god and science.do science and religion agree on timedoes science believe religionhow to read the biblehow to study the bibleit's time to wake up - alan watts on religionlargest religion in the worldreligion and sciencereligion is the same as spiritualityreligion vs sciencereligion vs science debatereligion x sciencescience & religionscience and religionscience and religion are not compatiblescience as religion
Previous Post

ಅಭಿವೃದ್ಧಿ ಕಾರ್ಯ ತ್ವರಿತಗೊಳಿಸಲು ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್ ಸೂಚನೆ

Next Post

ಪ್ರಧಾನಿ ಮೋದಿ ಕೇವಲ ಶೋ ಮ್ಯಾನ್ ಅಷ್ಟೇ..! – ಅವರ ಬಳಿ ಕಿಂಚಿತ್ತೂ ದಮ್ ಇಲ್ಲ : ರಾಹುಲ್ ಗಾಂಧಿ 

Related Posts

Top Story

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

by ಪ್ರತಿಧ್ವನಿ
September 2, 2025
0

ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೌಶಲ್ಯ ತರಬೇತಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವರು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ...

Read moreDetails

ಬೆಂಗಳೂರಿನಲ್ಲಿ ಮಿರಾಯ್ ಸಿನಿಮಾ ಪ್ರಚಾರ ಮಾಡಿದ ತೇಜ ಸಜ್ಜಾ..!!

September 2, 2025

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ -‌ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

September 2, 2025

ಬಿಡುಗಡೆಗೆ ಸಿದ್ಧವಾಗುತ್ತಿದೆ ಡಾರ್ಲಿಂಗ್ ಕೃಷ್ಣ ಅಭಿನಯದ “ಬ್ರ್ಯಾಟ್” ಚಿತ್ರ..!!

September 2, 2025

ಈ ವಾರ ತೆರೆಗೆ “ಜಾಲಿಡೇಸ್” ಖ್ಯಾತಿಯ ನಿರಂಜನ್ ಶೆಟ್ಟಿ ಅಭಿನಯದ “31 ಡೇಸ್”

September 2, 2025
Next Post
ಪ್ರಧಾನಿ ಮೋದಿ ಕೇವಲ ಶೋ ಮ್ಯಾನ್ ಅಷ್ಟೇ..! – ಅವರ ಬಳಿ ಕಿಂಚಿತ್ತೂ ದಮ್ ಇಲ್ಲ : ರಾಹುಲ್ ಗಾಂಧಿ 

ಪ್ರಧಾನಿ ಮೋದಿ ಕೇವಲ ಶೋ ಮ್ಯಾನ್ ಅಷ್ಟೇ..! - ಅವರ ಬಳಿ ಕಿಂಚಿತ್ತೂ ದಮ್ ಇಲ್ಲ : ರಾಹುಲ್ ಗಾಂಧಿ 

Recent News

Top Story

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

by ಪ್ರತಿಧ್ವನಿ
September 2, 2025
Top Story

ಬೆಂಗಳೂರಿನಲ್ಲಿ ಮಿರಾಯ್ ಸಿನಿಮಾ ಪ್ರಚಾರ ಮಾಡಿದ ತೇಜ ಸಜ್ಜಾ..!!

by ಪ್ರತಿಧ್ವನಿ
September 2, 2025
Top Story

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ -‌ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ

by ಪ್ರತಿಧ್ವನಿ
September 2, 2025
Top Story

ಬಿಡುಗಡೆಗೆ ಸಿದ್ಧವಾಗುತ್ತಿದೆ ಡಾರ್ಲಿಂಗ್ ಕೃಷ್ಣ ಅಭಿನಯದ “ಬ್ರ್ಯಾಟ್” ಚಿತ್ರ..!!

by ಪ್ರತಿಧ್ವನಿ
September 2, 2025
Top Story

ಈ ವಾರ ತೆರೆಗೆ “ಜಾಲಿಡೇಸ್” ಖ್ಯಾತಿಯ ನಿರಂಜನ್ ಶೆಟ್ಟಿ ಅಭಿನಯದ “31 ಡೇಸ್”

by ಪ್ರತಿಧ್ವನಿ
September 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

September 2, 2025

ಬೆಂಗಳೂರಿನಲ್ಲಿ ಮಿರಾಯ್ ಸಿನಿಮಾ ಪ್ರಚಾರ ಮಾಡಿದ ತೇಜ ಸಜ್ಜಾ..!!

September 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada