

ಜೆಡಿಎಸ್ ಎಂಎಲ್ಸಿ ಶರವಣಗೆ ಸೇರಿದ್ದ ಚಿನ್ನ ಕಳವು ಮಾಡಿದ್ದ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಮೌನೇಶ್, ಮಹಾವೀರ್ ಎಂಬ ಇಬ್ಬರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧನ ಮಾಡಿದ್ದಾರೆ. ಚಿನ್ನ ಕದ್ದು ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಸುಮಾರು ಅರ್ಧ ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ.

ಚಿನ್ನಕ್ಕೆ ಅಲ್ಮಾರ್ಕ್ ಹಾಕಲು ಕಳಿಸಿದ್ದಾಗ ಕಳ್ಳತನ ನಡೆದಿತ್ತು. ಒಂದೂವರೆ ಕೆಜಿ ಗಟ್ಟಿ ಚಿನ್ನದೊಂದಿಗೆ ಆರೋಪಿ ಮೌನೇಶ್ ಎಸ್ಕೇಪ್ ಆಗಿದ್ದ. ಕಳವು ಮಾಡಿದ ಚಿನ್ನ ಮಾರಾಟ ಮಾಡಲಾಗದೇ ಮಹಾವೀರ್ ಎಂಬಾತನ ಮನೆಯಲ್ಲಿ ಚಿನ್ನ ಇಟ್ಟಿದ್ದ. ಪೊಲೀಸರು ರೇಡ್ ಮಾಡಿ ಚಿನ್ನ ತಗೆದುಕೊಂಡು ಹೋಗಿದ್ದಾರೆ ಅಂತಾ ಕಥೆ ಕಟ್ಟಿದ್ದ ಆರೋಪಿ ಮಹಾವೀರ್. ರಾಜಸ್ಥಾನದಲ್ಲಿ ಆರೋಪಿ ಮೌನೇಶ್ನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು. ವಿಚಾರಣೆ ವೇಳೆ ಕದ್ದ ಚಿನ್ನವನ್ನು ಮಹಾವೀರ್ಗೆ ಕೊಟ್ಟಿರೋದಾಗಿ ಆರೋಪಿಯಿಂದ ಮಾಹಿತಿ. ಬಳಿಕ ಮಹಾವೀರ್ ಬಂಧಿಸಿ ವಿಚಾರಣೆ ಮಾಡಿದ ಪೊಲೀಸರು.

ಚಿನ್ನ ಕಳವು ಮಾಡಿದ್ದ ಆರೋಪಿ ಮೌನೇಶ್ಗೆ ಗೊತ್ತಾಗದಂತೆ ಬೇರೆ ಕಡೆ ಚಿನ್ನ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟ ಆರೋಪಿ ಮಹಾವೀರ್. ಚಿನ್ನ ಮಾರಾಟ ಮಾಡಿ ಬೇರೆ ಕಡೆ ಬಂಡವಾಳ ಹಾಕಿದ್ದ ಆರೋಪಿ ಮಹಾವೀರ್. ಸದ್ಯ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಉಳಿದ ಚಿನ್ನ ಪತ್ತೆಗಾಗಿ ಪೊಲೀಸರ ಶೋಧ ಮುಂದುವರಿಕೆ.