“ಜಾತಿ ಮೊದಲು. ಅಭಿವೃದ್ಧಿ ನಂತರ” ಆದರೆ ನಂತರ ಅಭಿವೃದ್ಧಿ ಅನ್ನೋ ಮಾತೆ ಇಲ್ಲ. ಯಾಕೆಂದ್ರೆ ಪಕ್ಷಗಳಿಗೆ ಅಭಿವೃದ್ಧಿ ಬೇಕಾಗಿರಲಿಲ್ಲ. ಕೆಲಸ ಬೇಕಾಗಿರಲಿಲ್ಲ. ಮತದಾರರ ಹೆಸರಿನ ಕೊನೆಯ ಪದ ಸಾಕಾಗಿತ್ತು.
ಯಾದವ ಮತ, ಕುರ್ಮಿ ಮತ, ಕೋರಿ ಮತ, ಪಾಸ್ವಾನ್ ಮತ, ಮುಸ್ಲಿಂ ಮತ ಹೀಗೆ ಚುನಾವಣೆಯ ಉದ್ದಕ್ಕೂ “ಜಾತಿಗಳ ಅಂಕಗಣಿತ” ಮಾತ್ರ ಅಷ್ಟೇ.

ಆದ್ರೆ BJP ಹೊಸ ಪ್ರಶ್ನೆ ಕೇಳಿತು:
ಯಾವ ಸ್ಕೀಮ್ ನಿನ್ನ ಮನೆಗೆ ತಲುಪಿದೆ? ನೋಡಿ ಈ ಸ್ಕೀಮ್ ಗಳಲ್ಲಿ ಜಾತಿ ಪ್ರಶ್ನೆಯೇ ಇರೋದಿಲ್ಲ. ಜನತೆಗಳ ಅಭಿವೃದ್ಧಿ ಮಾತ್ರ.ಹಾಗಾಗಿ ಉಜ್ವಲಾ ಗ್ಯಾಸ್, ಆವಾಸ್ ಮನೆ, ಉಚಿತ ಅನ್ನ, ವಿದ್ಯುತ್, ಆಯುಷ್ಮಾನ್, ಶೌಚಾಲಯ, ರಸ್ತೆಗಳು ಬಂತಾ..?? ಬಿಹಾರದ ಜನತೆಗೆ ಮೊಟ್ಟ ಮೊದಲ ಬಾರಿಗೆ ಬಿಜೆಪಿಯ ಪ್ರಶ್ನೆ ಬಗ್ಗೆ ಹೊಸ ಯೋಚನೆ ಬಂತು. ಈ ಒಂದು ಹೊಸ ಯೋಚನೆಯು 30 ವರ್ಷಗಳ ಜಾತಿ ಸಮೀಕರಣವನ್ನು ಒಡೆಯಿತು.
RJD–JDU ಬರೀ ಜಾತಿಗಳಲ್ಲಿ ತೊಡಗಿದ್ದಾಗ “ಬಿಜೆಪಿಯು ದಶಕಗಳ ಕಾಲ ಯಾರೂ ಗಮನ ಕೊಡದ, ನಿರ್ಲಕ್ಷಕ್ಕೆ ಒಳಗಾದ ಸಮುದಾಯಗಳಾದ ನಿಶಾದ್, ತೆಲಿ, ಮಾಳ್ಳಾ ಚೌರಾಸಿಯಾ, ಕುಂಭಾರ, ನೊನಿಯಾ, ಪಾರ್ಸಿ, EBC ಗಳು, ಮಹಾದಲಿತರು” ಹೀಗೆ ಅವರನ್ನೆಲ್ಲ ಸೇರಿಸಿ ಒಂದು ಸೇನೆಯನ್ನು ಕಟ್ಟಿತು.
ಬಿಜೆಪಿ ಅವರಿಗೆ ಪ್ರತಿನಿಧಿತ್ವ, ಟಿಕೆಟ್, ಅಧಿಕಾರದ ಸೇರ್ಪಡೆ ಕೊಟ್ಟಿತು. ಈ ಮೌನ ಮತದಾರರು ಒಂದು ದೊಡ್ಡ ಸ್ಫೋಟ ಮಾಡಿದರು. ಹಳೆಯ ಜಾತಿ ಕೋಟೆಗಳು ಕುಸಿದವು. ಆಗ ಬಿಹಾರದ ಯುವಕರು:

“ಜಂಗಲ್ ರಾಜ್ ಸಾಕಾಗಿದೆ.ನಮಗೆ ಬಸ್ಸು ಬೇಕು, ನಮಗೆ ಜಾಬ್ ಬೇಕು,ನಮಗೆ ಕಾನೂನು ಬೇಕು, ನಮಗೆ ಅಭಿವೃದ್ಧಿ ಬೇಕು,ನಮಗೆ ಜಾತಿ ರಾಜಕಾರಣ ಬೇಡ” ಸಾಕು ಅಂದ್ರು.
ಬಿಜೆಪಿ ಚುನಾವಣೆಯಲ್ಲಿ ಕೇವಲ ಗೆಲ್ಲಲಿಲ್ಲ.ಜಾತಿ ಆಧಾರಿತ ರಾಜಕೀಯ ಸಂಸ್ಕೃತಿಯನ್ನೇ ಮುರಿದುಬಿಟ್ಟಿತು.
ಯಾವಾಗ ಮತದಾರರು ಜಾತಿ ಬಿಟ್ಟು ಅಭಿವೃದ್ಧಿ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೋ ಆಗ ಮಾತ್ರ ಹಳೆಯ ರಾಜಕೀಯ ಸಾಮ್ರಾಜ್ಯಗಳು ರಾತ್ರೋ ರಾತ್ರಿ ಕುಸಿದುಹೋಗುತ್ತವೆ.
ವಿಶೇಷ ಬರಹ: ನವೀನ ಹೆಚ್ ಎ
ಹನುಮನಹಳ್ಳಿ





