ಆಕ್ರಮ ಮರಳು ಮಾಫಿಯಾ (Sand mafia) ತಡೆಯಲು ರಾತ್ರಿ ವೇಳೆ ದಾಳಿ ನಡೆಸಿದ ಮಹಿಳಾ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ ಪ್ರಕರಣದಲ್ಲಿ ಈಗಾಗಲೇ ಅಧಿಕಾರಿ ಜ್ಯೋತಿಯವರು (Officer jyothi) ದೂರು ನೀಡಿದ್ದು ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಆದ್ರೆ ಈ ಪ್ರಕರಣದಲ್ಲಿ ಮಹಿಳಾ ಅಧಿಕಾರಿಯನ್ನು ಹೀನ ಭಾಷೆ ಬಳಸಿ ಹಿಯ್ಯಾಳಿಸಿದ ಶಾಸಕ ಸಂಗಮೇಶ್ (MLA sangamesh) ಪುತ್ರ ಬಸವೇಶ್ ಹೆಸರನ್ನು FIR ನಿಂದ ಕೈ ಬಿಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಈ ಬಗ್ಗೆ ಗೃಹ ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ.

ಎಫ್ಐಆರ್ನಲ್ಲಿ (FIR) ಸಂಗಮೇಶ್ ಪುತ್ರನ ಹೆಸರನ್ನ ಕೈ ಬಿಟ್ಟಿರೋ ವಿಚಾರಕ್ಕೆ ಸಂಬಂಧಪಟ್ಟಂತೆ ಏನಾಗಿದೆ ಎಂಬುದನ್ನು ಪೊಲೀಸರು ಫೈಂಡ್ ಔಟ್ ಮಾಡ್ತಾರೆ. ಅವರು ಇದ್ದಾರೆ ಎಂದರೆ ಎಫ್ಐಆರ್ ನಲ್ಲಿ ಸೇರಿಸಿಕೊಳ್ತಾರೆ,ತನಿಖೆ ಮಾಡ್ತಾರೆ.ಅವರಿದ್ದಾರೆ ಎನ್ನೋದು ಗೊತ್ತಾದ್ರೆ ಸೇರಿಸ್ಕೋಳ್ತಾರೆ ಎಂದಿದ್ದಾರೆ.
ಈ ಬಗ್ಗೆ ಈಗಾಗಲೇ ಡಿವೈಎಸ್ಪಿಗೆ (DYSP) ನಾವು ಸೂಚನೆ ಕೊಟ್ಟಿದ್ದೇವೆ.ಇದು ಗಂಭೀರವಾದ ಪ್ರಕರಣವಾಗಿರುವುದರಿಂದ ತುರ್ತಾಗಿ ವರದಿ ನೀಡಲು ಹೇಳಿದ್ದೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.