ನಿನ್ನೆ ಮೈಸೂರಿನಲ್ಲಿ (Mysuru) ನಡೆದ ದಲಿತ ಸಚಿವರ ಡಿನ್ನರ್ ಮೀಟಿಂಗ್ (Dinner meeting) ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ ಜಿ ಪರಮೇಶ್ವರ್ (Dr.G.parameshwar) ಮಾತನಾಡಿದ್ದಾರೆ. ಎಚ್.ಸಿ.ಮಹದೇವಪ್ಪ ಜಿಲ್ಲಾ ಮಂತ್ರಿಯಾಗಿದ್ದಾರೆ, ನಾವು ಸಚಿವ ಸಂಪುಟದ ಸಹದ್ಯೋಗಿಗಳು, ಮೈಸೂರಿಗೆ ಬಂದಿದ್ದೇನೆ, ಅದಕ್ಕೆ ಊಟಕ್ಕೆ ಕರೆದಿದ್ದರು ಎಂದಿದ್ದಾರೆ.
ಇನ್ನು ಸತೀಶ್ ಜಾರಕಿಹೊಳಿಯವರು (Satish jarakiholi) ಮೈಸೂರಿಗೆ ಬಂದಿದ್ರು, ಹೀಗಾಗಿ ನಾವು 3 ಜನ ಊಟ ಮಾಡಿದ್ದೇವೆ . ರಾಜಕಾರಣದ ಮಾತುಕತೆಯ ಬಗ್ಗೆ ಏನೂ ಮಾಹಿತಿ ಬಿಟ್ಟುಕೊಡದ ಗೃಹ ಸಚಿವರು, ಊಟಕ್ಕಷ್ಟೇ ಸೇರಿದ್ವಿ, ಊಟ ಮಾಡೋದೆ ಕುತೂಹಲ ಎಂದರೇ, ಯಾರು ಊಟನೇ ಮಾಡಬಾರದು ಎಂದು ನಗೆ ಚಟಾಕಿ ಹಾರಿಸಿದ್ರು.
ಇನ್ನು ಮೈಸೂರಲ್ಲಿ ಅಹಿಂದ ನಾಯಕರ ಸಭೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಪ್ರತಿಕ್ರಿಯಿಸಿದ್ದಾರೆ. ದಸರಾ ಉತ್ಸವಕ್ಕೆ ಹೋಗಿದ್ವಿ, ಹೀಗೆ ಅಲ್ಲಿ ಎಲ್ಲರೂ ಸೇರಿರ್ತಾರೆ, ರಾಜಕಾರಣ ಏನೂ ಇಲ್ಲ, ಸಹಜವಾಗಿ ಎಲ್ಲರೂ ಸೇರಿರ್ತಾರೆ ಅಷ್ಟೆ, ಇದಕ್ಕೆ ವಿಶೇಷ ಅರ್ಥ ಬೇಡ ಅಂತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.