ತಮ್ಮ ಮೇಲೆ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ .ಐ.ಟಿ (SIT) ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ (Notie) ನೀಡಿದ್ದು, ರೇವಣ್ಣಗೆ (Revanna) ಕಾನೂನು ಸಂಕಷ್ಟ ಎದುರಾಗಿದೆ. ಹೀಗಾಗಿ ರೇವಣ್ಣ ಮತ್ತು ಕುಟುಂಬ ದೇವರ ಮೊರೆಹೋಗಿದ್ದಾರೆ.
ಹೊಳೆನರಸಿಪುರದ (Hole narasipura) ಅವರ ಚನ್ನಾಂಬಿಕ ನಿವಾಸದಲ್ಲಿ ಇಂದು ಬೆಳಿಗ್ಗೆಯಿಂದಲೇ ರೇವಣ್ಣ ಮತ್ತು ಅವರ ಕುಟುಂಬ ವಿಷೇಶ ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಡೀ ಮನೆ ಮತ್ತು ಅಂಗಳವನ್ನ ಶುಚಿಗೊಳಿಸಿ ವಿಷೇಶ ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮತ್ತೊಂಡೆ ಎಸ್.ಐ.ಟಿ (SIT) ಟೀಂ ಇಂದು ತನಿಖೆಯನ್ನ (Investegation)ಮತ್ತಷ್ಟು ಚುರುಕುಗೊಳಿಸಲಿದ್ದು, ಸಂತ್ರಸ್ತ ಮಹಿಳೆಯರ ಸಮ್ಮುಖದಲ್ಲಿ ಇದೇ ನಿವಾಸಕ್ಕೆ ತೆರಳಿ ಸ್ಥಳ ಮಹಜರಿಗೆ ಮುಂದಾಗಲಿದ್ದಾರೆ. ಈಗಾಗಲೇ ಒಟ್ಟು 10 ಮಹಿಳೆಯರು ತಮ್ಮ ಹೇಳಿಕೆ ದಾಖಲಿಸಿದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ.