• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

10 ವರ್ಷದ ಹಿಂದೆ ನಿಂಬೆ ಶರಬತ್ತು ಮಾರುತ್ತಿದ್ದ ಅದೇ ಊರಿಗೆ ಎಸ್ಐ ಆಗಿ ನೇಮಕಗೊಂಡ ಮಹಿಳೆ!

ಪ್ರತಿಧ್ವನಿ by ಪ್ರತಿಧ್ವನಿ
June 28, 2021
in ದೇಶ
0
10 ವರ್ಷದ ಹಿಂದೆ ನಿಂಬೆ ಶರಬತ್ತು ಮಾರುತ್ತಿದ್ದ ಅದೇ ಊರಿಗೆ ಎಸ್ಐ ಆಗಿ ನೇಮಕಗೊಂಡ ಮಹಿಳೆ!
Share on WhatsAppShare on FacebookShare on Telegram

18ನೇ ವಯಸ್ಸಿಗೆ ತನ್ನ ಕುಟುಂಬಸ್ಥರಿಂದ ಹಾಗೂ ಬಳಿಕ ತನ್ನ ಗಂಡನಿಂದ ತ್ಯಜಿಸಲ್ಪಟ್ಟ ಮಹಿಳೆಯೋರ್ವಳು ಸ್ವಂತ ಪರಿಶ್ರಮದಿಂದ ಕೇರಳ ಪೊಲೀಸ್ ಪರೀಕ್ಷೆ ಬರೆದು ಇದೀಗ ಠಾಣಾ ಉಪನಿರೀಕ್ಷಕಿ ಹುದ್ದೆ ಪಡೆದುಕೊಂಡಿದ್ದಾಳೆ.

ADVERTISEMENT

ಕುಟುಂಬಸ್ಥರಿಂದ ತ್ಯಜಿಸಲ್ಪಟ್ಟ ಬಳಿಕ ವರ್ಕಳದಲ್ಲಿ ಐಸ್ ಕ್ರೀಂ ಹಾಗೂ ನಿಂಬೆ ಶರಬತ್ತು ಮಾರಾಟ ಮಾಡುತ್ತಾ ಬದುಕಿನ ದಾರಿ ಕಂಡುಕೊಂಡ ಆ್ಯನಿ ಶಿವ ಎಸ್ಐ ಹುದ್ದೆ ಪಡೆದುಕೊಂಡವರು. ತಾನು ಜೀವನ ನಿರ್ವಹಣೆಗೆ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಅದೇ ಊರಿನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಗೊಂಡ ಕೀರ್ತಿ ಕೇರಳದ ತಿರುವನಂತಪುರಂ ಜಿಲ್ಲೆಯ 31 ವರ್ಷದ ಆ್ಯನಿ ಬೇರೆ ಊರಿಗೆ ವರ್ಗಾವಣೆ ಮಾಡುವಂತೆ ಕೋರಿಕೊಂಡಿದ್ದಾರೆ. ಕೋರಿಕೆಯಂತೆ ಸದ್ಯ ಆಕೆಯನ್ನು ಎರ್ನಾಕುಲಂನ ಸೆಂಟ್ರಲ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದೆ ಎಂದು ಮರುನಾಡನ್ ವಾಹಿನಿ ವರದಿ ಮಾಡಿದೆ.

ಆರು ತಿಂಗಳ ತನ್ನ ಸಣ್ಣ ಮಗುವಿನೊಂದಿಗೆ ಕುಟುಂಬಸ್ಥರಿಂದ ಹಾಗೂ ತನ್ನ ಗಂಡನಿಂದ ನಿರಾಕರಿಸಲ್ಪಟ್ಟ ಮಹಿಳೆ ಇಂದು ವರ್ಕಳ ಠಾಣೆಗೆ ಉಪನಿರೀಕ್ಷಕರಾಗಿ ನೇಮಕಗೊಂಡಿದ್ದಾರೆ.  ಛಲ, ದೃಢನಿರ್ಧಾರ ಮತ್ತು ಆತ್ಮವಿಶ್ವಾಸದ ಗುರಿಗೆ ಈಕೆ ಒಂದು ಉತ್ತಮ ಮಾದರಿ” ಎಂದು ಕೇರಳ ಪೊಲೀಸ್ ಟ್ವೀಟ್ ಮಾಡಿ ಅಭಿನಂದಿಸಿದೆ.

18 yr old Annie Siva left on streets with her 6month old baby, abandoned by husband, sold lemonade has become sub-inspector in Varkala,Kerala. 👍 👏#MondayMotivation #womenempowerment #salute pic.twitter.com/0uvp6rD7VD

— Urmila Matondkar (@UrmilaMatondkar) June 28, 2021

“ಯಾರೂ ನನ್ನ ಸಹಾಯಕ್ಕೆ ಧಾವಿಸದೆ, ಇದೇ ಊರಿನಲ್ಲಿ ನನ್ನ ಪುಟ್ಟ ಮಗುವಿನೊಂದಿಗೆ ಹಲವಾರು ದಿನಗಳು ಕಣ್ಣೀರಿನಿಂದ ಕಳೆದಿದ್ದೇನೆ. ನನಗೆ ವರ್ಕಳ ಪೋಲಿಸ್ ಠಾಣೆಯ ಉಪನಿರೀಕ್ಷಕ ಹುದ್ದೆ ಒದಗಿದ ಸುದ್ದಿ ಕೇಳಿ ತುಂಬಾ ಖುಷಿಯಾಯಿತು” ಎಂದು ಆ್ಯನಿ ಮಾಧ್ಯಮದೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

“ ವರ್ಕಳದ ಶಿವಗಿರಿ ಆಶ್ರಮದ ಮುಂದೆ , ನಿಂಬೆ ಹಣ್ಣಿನ ರಸ ಮತ್ತು ಐಸ್ ಕ್ರೀಂ ಮಾರುವ ಸಣ್ಣ ವ್ಯಾಪಾರವನ್ನು ಮಾಡುತ್ತಿದ್ದೆ. ಹಲವು ದಿನಗಳ ನಂತರ ಈ ವ್ಯಾಪಾರವು ನಷ್ಟವನ್ನು ಕಂಡಿತು. ನಾನು ಐಪಿಎಸ್ ಅಧಿಕಾರಿಯಾಗಬೇಕೆಂಬ ಗುರಿಯನ್ನು ಹೊಂದಿದ್ದೆ. ನನ್ನ ವ್ಯಾಪಾರದ ನಷ್ಟದ ಬಳಿಕ ಒಬ್ಬರು ನನಗೆ ಉಪನಿರೀಕ್ಷಕ ಹುದ್ದೆಯ ಪರೀಕ್ಷೆಯ ಮಾಹಿತಿ ಹಾಗೂ ಧನಸಹಾಯ ಮಾಡುವ ಮೂಲಕ ಉತ್ತೇಜನ ನೀಡಿದರು” ಎಂದು ತಿಳಿಸಿದ್ದಾರೆ.

ಆ್ಯನಿ ಪ್ರಥಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಕುಟುಂಬದವರ ಒಪ್ಪಿಗೆಯಿಲ್ಲದೆ ಮದುವೆಯಾದರು. ಒಂದು ಮಗುವನ್ನು ಹೆತ್ತ ನಂತರ ಕ್ಷುಲ್ಲಕ ಕಾರಣಕ್ಕೆ ಆಕೆಯ ಗಂಡ ತ್ಯಜಿಸಿ ಬಿಟ್ಟು ಹೋಗಿದ್ದಾನೆ. ಆ ಬಳಿಕ ತನ್ನ ತವರು ಮನೆಗೆ ಹಿಂತಿರುಗಿದಾಗಲೂ ಆಕೆ ನಿರಾಕರಣೆಯನ್ನೇ ಎದುರಿಸಬೇಕಾಯಿತು. ತನ್ನ ಅಜ್ಜಿಯ ಮನೆಯ ಸಣ್ಣ ಗುಡಿಸಲಿನಲ್ಲಿ ಪುಟ್ಟ ಮಗು ಶಿವಸೂರ್ಯನೊಂದಿಗೆ ತನ್ನ ಮುಂದಿನ ಜೀವನವನ್ನು ಸಾಗಿಸಿದರು.

ಅವರ ದೃಢ ನಿರ್ಧಾರ ಹಾಗೂ ಪ್ರಯತ್ನದಿಂದ ಇಂದು ಪೋಲಿಸ್ ಅಧಿಕಾರಿಯಾಗಿ ನೇಮಕಗೊಂಡಿದ್ದು ನಿಜಕ್ಕೂ ಪ್ರೇರಣೀಯ ಹಾಗೂ ಶ್ಲಾಘನೀಯ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Previous Post

ಲಸಿಕಾ ಅಭಿಯಾನ: ಒಂದು ವಾರದಲ್ಲಿ 3.91 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ

Next Post

ಜೀವನಶೈಲಿ ಖಾಯಿಲೆಗಳಿಂದ ಬಳಲುವ ದೊಡ್ಡ ಜನಸಂಖ್ಯೆ ಭಾರತದಲ್ಲಿದೆ: ಸಾಂಕ್ರಾಮಿಕವಲ್ಲದ ಖಾಯಿಲೆ ಜಾಗೃತಿಯೂ ಅವಶ್ಯಕ – ಅಭಿಜಿತ್ ಬ್ಯಾನರ್ಜಿ

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ಜೀವನಶೈಲಿ ಖಾಯಿಲೆಗಳಿಂದ ಬಳಲುವ ದೊಡ್ಡ ಜನಸಂಖ್ಯೆ ಭಾರತದಲ್ಲಿದೆ: ಸಾಂಕ್ರಾಮಿಕವಲ್ಲದ ಖಾಯಿಲೆ ಜಾಗೃತಿಯೂ ಅವಶ್ಯಕ – ಅಭಿಜಿತ್ ಬ್ಯಾನರ್ಜಿ

ಜೀವನಶೈಲಿ ಖಾಯಿಲೆಗಳಿಂದ ಬಳಲುವ ದೊಡ್ಡ ಜನಸಂಖ್ಯೆ ಭಾರತದಲ್ಲಿದೆ: ಸಾಂಕ್ರಾಮಿಕವಲ್ಲದ ಖಾಯಿಲೆ ಜಾಗೃತಿಯೂ ಅವಶ್ಯಕ - ಅಭಿಜಿತ್ ಬ್ಯಾನರ್ಜಿ

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada