
ಬೆಂಗಳೂರು: ಸಿಎಂ ವಿರುದ್ಧದ ಮುಡಾ (Muda against CM)ಪ್ರಕರಣದಲ್ಲಿ ನಾಳೆ ಹೈಕೋರ್ಟ್ ತನ್ನ ಮಹತ್ವದ ತೀರ್ಪು (tomorrow High Court judgment) ಪ್ರಕಟಿಸಲಿದ್ದು, ರಾಜ್ಯ ರಾಜಕಾರಣದ (politics)ಚಿತ್ತ ಹೈಕೋರ್ಟ್ನತ್ತ ಎನ್ನುವಂತಾಗಿದೆ.ಮುಡಾದಲ್ಲಿ ಅಕ್ರಮ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ದೂರು (Complaint by TJ Abraham)ನೀಡಿದ್ದರು.

ಆ ಬೆನ್ನಲ್ಲೇ ಗವರ್ನರ್, ಸಿಎಂಗೆ ಶೋಕಾಸ್ ನೋಟಿಸ್ ನೀಡಿ ಬಳಿಕ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿಕೊಟ್ಟಿದ್ದರು. ಇದನ್ನ ವಿರೋಧಿಸಿ ರಾಜ್ಯ ಸಚಿವ ಸಂಪುಟವೂ ಮಹತ್ವದ ನಿರ್ಣಯಗಳನ್ನು ಕೈಗೊಂಡಿತ್ತು.ನಂತರ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ, ಗವರ್ನರ್ ಆದೇಶವನ್ನು ರದ್ದುಪಡಿಸಬೇಕು ಎಂದು ಸಿಎಂ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ನಲ್ಲಿ ಈ ಅರ್ಜಿ ಹಾಗೂ ಪ್ರಕರಣದ ಸಂಬಂಧದ ವಿಚಾರಣೆಯನ್ನು ಸುದೀರ್ಘವಾಗಿ ವಾದ ಪ್ರತಿವಾದ ಆಲಿಸಿರುವ ಹೈಕೋರ್ಟ್ ನ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠವು ತೀರ್ಪು ಕಾಯ್ದಿರಿಸಿತ್ತು.ನಾಳೆ ಮಧ್ಯಾಹ್ನ 12ಕ್ಕೆ ತನ್ನ ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಮುಡಾ ಪ್ರಕರಣದಲ್ಲಿ ಸಿಎಂ ಅವರ ಭವಿಷ್ಯ ನಾಳೆ ನಿರ್ಧಾರವಾಗಲಿದೆ.
ಸಿಎಂ ಪರ ಹೈಕೋರ್ಟ್ನ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಾಡಿದ್ದರು. ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದಿಸಿದ್ದರು.ಸಿಎಂ ವಿರುದ್ಧ ನೀಡಿದ್ದ ಇತರ ದೂರುದಾರರ ಪರ ಹಿರಿಯ ವಕೀಲರಾದ ಕೆ.ಜಿ.ರಾಘವನ್, ಪ್ರಭುಲಿಂಗ ಕೆ.ನಾವದಗಿ ಅವರು ಮುಡಾದಲ್ಲಿ ಸಿಎಂ ಪಾತ್ರವೇನು ಎಂದು ಪ್ರಬಲವಾಗಿ ವಾದಿಸಿದ್ದರು.
ಅತ್ತ ರಾಜ್ಯಪಾಲರು ವಿವೇಚನೆ ಬಳಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಮುಡಾದಲ್ಲಿ ಸಿಎಂ ಪಾತ್ರವಿಲ್ಲ, ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಲ್ಲಿ ಕೆಲ ಕಾನೂನು ಕ್ರಮಗಳನ್ನು ಅನುಸರಿಸಿಲ್ಲ. ಮುಡಾ ನಿವೇಶನ ಹಂಚಿಕೆ ಪ್ರಕ್ರಿಯೆ ವೇಳೆ ಸಿಎಂ ಯಾವ ಅಧಿಕಾರದಲ್ಲಿ ಇರಲಿಲ್ಲ. ಸಂಪುಟದ ನಿರ್ಣಯಗಳನ್ನು ಅವರು ಪರಿಗಣಿಸಿಲ್ಲ. ಅಲ್ಲದೇ ಕೆಲ ಹಗರಣಗಳ ದೂರುಗಳು ಪ್ರತಿಪ್ರಕ್ಷಗಳ ನಾಯಕರು ವಿರುದ್ಧದ ಫೈಲ್ ಗವರ್ನರ್ ಮುಂದೆ ಇದ್ದರೂ, ಅದನ್ನು ಲೆಕ್ಕಿಸದೇ, ಸಿದ್ದರಾಮಯ್ಯ ಅವರ ವಿರುದ್ಧದ ದೂರನ್ನು ಮಾತ್ರ ತರಾತುರಿಯಲ್ಲಿ ಪರಿಗಣಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಮುಡಾ ಮೇಲೆ ಸಿಎಂ ಯಾವ ಪ್ರಭಾವವೂ ಬೀರಿಲ್ಲ. ಗವರ್ನರ್ ಅವರ ಆದೇಶವನ್ನು ರದ್ದುಪಡಿಸಬೇಕು ಎಂಬುವುದು ಸಿಎಂ ಪರ ವಕೀಲರ ವಾದವಾಗಿತ್ತು.