ರಾಜ್ಯ ರಾಜಕಾರಣದಲ್ಲಿನ ಕ್ಷಿಪ್ರ ಬೆಳವಣಿಗೆಗಳು ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕಾರಿಣಿಗಳ ಎದೆಯಲ್ಲಿ ನಡುಕ ಉಂಟಾಗುವಂತೆ ಮಾಡಿದೆ. ಆ ಸಾಲಿಗೆ ಕೇಂದ್ರ ಸಚಿವ ಕುನರಸ್ವಾಮಿ ಕೂಡ ಹೊರತಾಗಿಲ್ಲ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗುತ್ತಿದ್ದಂತೆ, ಇತ್ತ ಕುಮಾರಸ್ವಾಮಿ ಗೂ 12 ವರ್ಷದ ಹಿಂದಿನ ಹಳೇ ಪ್ರಕರಣದ ಕಂಟಕ ಎದುರಾಗಿದೆ. ಡೀನೋಟಿಫಿಕೇಷನ್ ಪ್ರಕರಣದಲ್ಲಿ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ಲೋಕಾಯುಕ್ತ ಅಧಿಕಾರಿಗಳು, ಕೇಂದ್ರ ಸಚಿವ ಕುಮಾರಸ್ವಾಮಿ ಎದೆಯಲ್ಲಿ ಬಂಧನದ ಭೀತಿ ಉಂಟಾಗುವಂತೆ ಮಾಡಿದೆ.
ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ, ಜಂತಕಲ್ ಮೈನಿಂಗ್ ಕಂಪನಿ ಗೆ ಕಾನೂನು ಬಾಹಿರವಾಗಿ ಭೂಮಿ ಮಂಜೂರು ಮಾಡಿದ ಪ್ರಕರಣಗಳಲ್ಲಿ ತಮ್ಮನ್ನು ಸಿಲುಕಿಸಿ ಕನಿಷ್ಠ ಒಂದು ದಿನಕ್ಕಾದ್ರೂ ತಮ್ಮನ್ನು ಅರೆಸ್ಟ್ ಮಾಡಿಸುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡಿದೆ. ಅದಕ್ಕಾಗಿ ಈ ADGP ಚಂದ್ರಶೇಖರ್ ರೀತಿಯ ಭ್ರಷ್ಟ ಅದಿಕಾರಿಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು IPS ಅಧಿಕಾರಿಯ ವಿರುದ್ಧ HDK ಮನಸೋಯಿಚ್ಛೆ ವಾಗ್ದಾಳಿ ನಡೆಸಿ, ಲೋಕಾಯುಕ್ತ,SIT ಐಜಿ ಚಂದ್ರಶೇಖರ್ ರ ವಿರುದ್ಧ ಆರೋಪಗಳನ್ನು ಮಾಡಿದ್ದರು.
ಬಹುಶಃ ರಾಜ್ಯಕ್ ರಾಜಕಾರಣದಲ್ಲಿ ಓರ್ವ ಕೇಂದ್ರ ಸಚಿವ V/S IPS ಅಧಿಕಾರಿ ನಡುವಿನ ತಿಕ್ಕಾಟ ಈ ಹಂತಕ್ಕೆ ತಲುಪಿದ್ದು ಇದೇ ಮೊದಲು ಎನ್ನಬಹುದು.IPS ಅಧಿಕಾರಿ ಚಂದ್ರಶೇಖರ್ ಅರುಣಾಚಲ ಪ್ರದೇಶದ ಕೇಡರ್ ನಲ್ಲಿ ಕೆಲಸ ಮಾಡಬೇಕಾದವರು, ಆರೋಗ್ಯದ ಸಮಸ್ಯೆಯ ನೆಪವೊಡ್ಡಿ, ಬೌರಿಂಗ್ ಆಸ್ಪತ್ರೆಯಲ್ಲಿ ಸುಳ್ಳು ಆರೋಗ್ಯ ಪ್ರಮಾಣ ಪತ್ರ ಸೃಷ್ಟಿಸಿ 2008 ರಿಂದ ಇಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಮೀಪ ರಾಜಕಾಲುವೆ ಮೇಲೆ 38 ಅಂತಸ್ತಿನ ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ಟಾಟಾ ಎಂಬ ಉದ್ಯಮಿಯ ಜೊತೆ ಸೇರಿ ಇನ್ನಿಲ್ಲದ ಭ್ರಷ್ಟಾಚಾರ ನಡೆಸಿದ್ದಾರೆ ಎಂದೆಲ್ಲಾ IPS ಅಧಿಕಾರಿಯ ವಿರುದ್ಧ ಕುಮಾರಸ್ವಾಮಿ ಆಕ್ರಮಣಕಾರಿ ಆರೋಪಗಳನ್ನು ಮಾಡಿದ್ರು.
ಆದ್ರೆ ಕುಮಾರಸ್ವಾಮಿಯವರ ಈ ಆರೋಪಗಳಿಗೆ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಅಷ್ಟೇ ಆಕ್ರಮಣಕಾರಿಯಾಗಿ IPS ಅಧಿಕಾರಿ ಚಂದ್ರಶೇಖರ್ ಪತ್ರದ ಮೂಲಕ ಕುರಾಮರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಅಕ್ರಮದ ಆರೋಪ ಹೊತ್ತಿರುವ ವ್ಯಕ್ತಿ ಎಷ್ಟೇ ದೊಡ್ಡ ಸ್ಥಾನದಲ್ಲಿದ್ರೂ ಆತ ಆರೋಪಿಯೇ. ಈ ಕುಮಾರಸ್ವಾಮಿ ಎಂಬ ಆರೋಪಿ ನನ್ನ ಮೇಲೆ ದಾಳಿ ಮಾಡುವ ಮೂಲಕ ನಮ್ಮ ತಂಡದ ಅಧಿಕಾರಿಗಳ ಮನೋಬಲ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ನಾನು ಸ್ಪಷ್ಟ ಪಡಿಸುವುದೇನೆಂದರೆ, ಈ ರೀತಿಯ ಆರೋಪಿಗಳ ಬೆದರಿಕೆಗೆ ಹೆದರದೆ ದಕ್ಷತೆಯಿಂದ ನಮ್ಮ ಕರ್ತವ್ಯ ನಿರ್ವಹಿಸೋಣ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಖಡಕ್ ಉತ್ತರ ನೀಡಿದ್ದಾರೆ.
ಇನ್ನು ಮುಂದುವರೆದಂತೆ ಕೇಂದ್ರ ಸಚಿವ ಕುಮಾರಸ್ವಾಮಿಯನ್ನ ಹಂದಿಗೆ ಹೋಲಿಸುವಂತೆ ಮಾತನಾಡಿರುವ ಚಂದ್ರಶೇಖರ್, ಎಂದಿಗೂ ಹಂದಿಗಳ ಜೊತೆ ಗುದ್ದಾಡಬಾರದು, ಆಗ ಇಬ್ಬರೂ ಕೊಳಕಾಗುತ್ತೇವೆ, ಆದ್ರೆ ಹಂದಿ ಆ ಕೊಳಕನ್ನು ಇಷ್ಟಪಡುತ್ತದೆ ಎಂದು ಮಾರ್ಮಿಕವಾಗಿ ಕುಮಾರಸ್ವಾಮಿಯವರನ್ನ ಕೆಣಕಿದ್ದಾರೆ. ಆ ಮೂಲಕ ಕೇಂದ್ರ ಸಚಿವರ ಆರೋಪಗಳ ವಿರುದ್ಧ IPS ಅಧಿಕಾರಿ ಚಂದ್ರಶೇಖರ್ ತೊಡೆ ತಟ್ಟಿ ನಿಂತಿದ್ದು, ಇಂದು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಾಗ ಸಭೆ ಕರೆದಿದ್ದು, ಕುಮಾರಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಅವರ ಈ ಆರೋಪಗಳಿಗೆ ಸಂಬಂಧಪಟ್ಟಂತೆ ಗಂಭೀರವಾದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಗಳಿದ್ದು, HDK ಗೆ ಆತಂಕ ಹೆಚ್ಚಾಗಿರುವುದಂತೂ ಸುಳ್ಳಲ್ಲ.