ಇತ್ತೀಚೆಗೆ ಡಿಕೆಶಿ (Dk shivakumar) ಟೆಂಪಲ್ ರನ್ ಜೋರಾಗಿದ್ದು ,ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ತಿರುಗೇಟು ಕೊಟ್ಟಿದ್ದಾರೆ.

ಎಲ್ಲರನ್ನು ದೇವರೇ ಕಾಪಾಡಬೇಕು, ಅಧಿಕಾರ ಬೇಕು ಅಂತ ಅಲ್ಲಿ ಎಲ್ಲೋ ಶತ್ರು ನಾಶಕ್ಕೆ ಹೋಗೋದು, ಅಲ್ಲೂ ಕೂಡಾ ದೇವರನ್ನ ಅಧಿಕಾರ ಕೊಡಪ್ಪ, ಶತ್ರು ನಾಶ ಮಾಡು ಅಂತಾನೆ ಕೆಲವರು ಕೇಳೋದು ಎಂದು ಟಾಂಗ್ ಕೊಟ್ಟಿದ್ದಾರೆ.
ಇವತ್ತು ವೈಕುಂಠ ಏಕಾದಶಿ, ಹೀಗಾಗಿ ವೈಕುಂಠ ಬಾಗಿಲು ತೆಗೆಯುತ್ತೆ ಅಂತ ಪ್ರತೀತಿ ಇದೆ. ದೇವರಲ್ಲಿ ಪ್ರಾರ್ಥನೆ ಮಾಡಿ ಒಳ್ಲೆದು ಮಾಡಲಿ ಅಂತ, ಮುಕ್ತಿ ಕೊಡಪ್ಪ ಅಂತ ಪ್ರಾರ್ಥನೆ ಮಾಡಿಕೊಳ್ಳೋದು ಒಳ್ಳೆದು ಅಂತ ಕಾಲೆಳೆದಿದ್ದಾರೆ.ಅ ವಿಷ್ಣು ದೇಶ ಆಳೋರಿಗೆ, ರಾಜ್ಯ ಆಳೋರಿಗೆ ಎಲ್ಲರಿಗೂ ಸದ್ಬುದ್ದಿ ಕೊಟ್ಟು ಜನತೆಯ ಸಮಸ್ಯೆಗೆ ಒಳ್ಳೆಯ ಕೆಲಸ ಮಾಡುವ ವಾತಾವರಣ ದೇವರು ನಿರ್ಮಾಣ ಮಾಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.