ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಅಡಿ ಮೊದಲ ಪ್ರಕರಣ ದಾಖಲಾಗಿದೆ. ಹೊಸ ಕಾನೂನು BNS 281,106 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ವೈದ್ಯ ಶಂಕರೇಗೌಡ ನೀಡಿದ ದೂರಿನ ಮೇಲೆ ರಾಜ್ಯದ ಮೊದಲ ಬಿಎನ್ಎಸ್ ಪ್ರಕರಣ ದಾಖಲಾಗಿದೆ.

ಕಾರು ಚಾಲಕ ಸಾಗರ್ ಎಂಬಾತನ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು, ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದ ಆರೋಪದಲ್ಲಿ ಚಾಲಕ ಸಾಗರ್ ವಿರುದ್ಧ ಕೇಸ್ ದಾಖಲಾಗಿದೆ.

ಹಾಸನದ ಹಳೆಬೀಡು ರಸ್ತೆ ಸೀಗೆಗೇಟ್ ಸಮೀಪದ ಸೇತುವೆಯಿಂದ ಕೆಳಗೆ ಕಾರು ಪಲ್ಟಿಯಾಗಿತ್ತು. ಈ ಹಿನ್ನೆಲೆ ವೈದ್ಯರ ಅತ್ತೆ ಇಂದು ಮೃತಪಟ್ಟಿದ್ದಾರೆ. ಕಾಶಿ ಯಾತ್ರೆ ಮುಗಿಸಿ ವಾಪಾಸ್ ಆಗಿದ್ದ ಕುಟುಂಬವನ್ನ ಬೆಂಗಳೂರು ಕೆಐಎಎಲ್ ಏರ್ಪೋರ್ಟ್ ನಿಂದ ಶಂಕರೇಗೌಡರ ಅತ್ತೆ ಇಂದು, ಮಾವ ಯೋಗೇಶ್ ರನ್ನ ಪಿಕಪ್ ಮಾಡಿದ್ದ ಚಾಲಕ ಸಾಗರ್.
ಈ ಅಪಘಾತದಲ್ಲಿ ಸದ್ಯ ಯೋಗೇಶ್ ಬಚಾವ್ ಆದಿದ್ದು ‘ಇಂದು’ ಸಾವನ್ನಪ್ಪಿದ್ದಾರೆ. ಹೀಗಾಗಿ ಅತಿ ವೇಗ ಹಾಗೂ ನಿರ್ಲಕ್ಷ್ಯದಡಿ ಮೊದಲ ಬಿಎನ್ಎಸ್ ಪ್ರಕರಣ ದಾಖಲಾಗಿದೆ. ಬೆಳಗ್ಗೆ 6-30ಕ್ಕೆ BNS (ಭಾರತೀಯ ನ್ಯಾಯ ಸಂಹಿತೆ)ದಾಖಲಾದ ಮೊದಲ ಪ್ರಕರಣ ಇದಾಗಿದೆ.