ಅಸ್ಸಾಂ ಯುವ ಕಾಂಗ್ರೆಸ್ ಘಟಕದ ಉಚ್ಚಾಟಿತ ಅಧ್ಯಕ್ಷೆ ಅಂಕಿತ ದತ್ತಾ ಅವರು ತಮ್ಮ ಮೇಲೆ ಭಾರತೀಯ ಯುವ ಕಾಂಗ್ರೆಸ್ನ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರು ಲೈಂಗಿಕ ಹಾಗೂ ಮಾನಸಿಕ ಕಿರುಕುಳವನ್ನ ನೀಡಿದ್ರು ಎಂಬ ಆರೋಪವನ್ನು ಮಾಡಿದ್ದರು. ಈ ಆರೋಪಕ್ಕೆ ಸಂಬಂಧಪಟ್ಟಂತೆ ಬಿವಿ ಶ್ರೀನಿವಾಸ್ ಅವರ ಮೇಲೆ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಹೀಗಾಗಿ ಬಂಧನದ ಭೀತಿಯನ್ನು ಎದುರಿಸುತ್ತಿದ್ದ ಬಿವಿ ಶ್ರೀನಿವಾಸ್ ಅವರು ಗೌಹಾಟಿ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮಿನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಗೌಹಾಟಿ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನ ತಿರಸ್ಕರಿಸಿತ್ತು.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಹಲವು ದಿನಗಳ ವಿಚಾರಣೆ ನಂತರ ಇದೀಗ ಸುಪ್ರೀಂ ಕೋರ್ಟ್ ಭಾರತೀಯ ಯುವ ಕಾಂಗ್ರೆಸ್ ನ ಅಧ್ಯಕ್ಷ ಬಿವಿ ಶ್ರೀನಿವಾಸ್ ಅವರಿಗೆ ಶರತುಬದ್ಧ ನಿರೀಕ್ಷಣ ಜಾಮೀನನ್ನ ನೀಡಿದೆ.

ಇದರ ಜೊತೆಗೆ ಬಿವಿ ಶ್ರೀನಿವಾಸ್ ಅವರಿಗೆ ತನಿಖೆಗೆ ಅಧಿಕಾರಿಗಳಿಗೆ ಸಹಕರಿಸುವಂತೆ ಸೂಚನೆಯನ್ನು ಕೂಡ ನೀಡಿದೆ. ಸದ್ಯದ ಮಟ್ಟಿಗೆ ನಿರೀಕ್ಷಣಾ ಜಾಮೀನನ್ನ ಪಡೆದಿರುವ ಬಿ.ವಿ ಶ್ರೀನಿವಾಸ್ ಅವರಿಗೆ ಕೊಂಚಮಟ್ಟಿಗೆ ರಿಲೀಫ್ ಸಿಕ್ಕಿದ್ರು ಮುಂದಿನ ದಿನಗಳಲ್ಲಿ ಹಲವು ಸಂಕಷ್ಟಗಳನ್ನು ಕೂಡ ಎದುರಿಸಬೇಕಾದ ಪರಿಸ್ಥಿತಿ ಇದೆ ಹೀಗಾಗಿ ಮುಂದಿನ ದಿನಗಳಲ್ಲಿ ಯಾವ ರೀತಿಯಾದ ನಡೆಯನ್ನು ಅವರು ಅನುಸರಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.
