ಶಿವಮೊಗ್ಗ:ಮಾ.15: ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಷಣ ಮಾಡುತ್ತಿದ್ದ ಕೆ.ಎಸ್.ಈಶ್ವರಪ್ಪ ಆಝಾನ್ ಶಬ್ಧಕ್ಕೆ ಸಿಡಿಮಿಡಿಗೊಂಡು, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು, ಮೈಕ್ ನಲ್ಲಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ ಎಂದು ಬೇಸರ ವ್ಯಕ್ತಪಡಿಸಿದ್ದರು. ಹಾಗೂ ಈ ಕುರಿತು ಸಮರ್ಥನೆ ಕೂಡ ನೀಡಿದ್ದರು.
ಈಶ್ವರಪ್ಪ ಹೇಳಿಕೆಯನ್ನ ಖಂಡಿಸಿ ಮುಸ್ಲಿಂ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿವೆ. ಶಿವಮೊಗ್ಗ SDPI ಘಟಕ ನಗರದಲ್ಲಿಂದು ಪ್ರತಿಭಟನೆ ನಡೆಸಿ ಹರಕುಬಾಯಿ ಈಶ್ವರಪ್ಪ ರಾಜೀನಾಮೆ ಪಡೆದು ಚುನಾವಣೆಗೆ ನಿಲ್ಲದಂತೆ ಭಹಿಷ್ಕರಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ನೀಡಿದರು. ಪ್ರತಿಭಟನೆ ಬಳಿಕ ಮಾತನಾಡಿದ SDPI ಮುಖಂಡ ಸಲೀಂ ಖಾನ್, ಈಶ್ವರಪ್ಪ ಹಾಗೂ ಅವರ ಕುಟುಂಬಕ್ಕೆ ರಾಜಕೀಯದಲ್ಲಿ ಬೆಂಬಲ ನೀಡಬಾರದು ಎಂದು ಕರೆ ನೀಡಿದರು.
ಕಳೆದ ಮೂರು ದಿನಗಳ ಹಿಂದೆ, ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮಲ್ಲಿ ಮಾಜಿ ಸಚಿವ ಹಾಗೂ ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈಶ್ವರಪ್ಪ ತಮ್ಮ ಹರಕು ನಾಲಗೆಯಿಂದ ಮುಸ್ಲಿಂರ ಆರಾಧ್ಯ ದೈವ ಅಲ್ಲಾಹುವಿನ ನಿಂದನೆ ಮಾಡಿದ್ದಾರೆ. ಇವರ ಹತಾಶೆ ಎಷ್ಟರಮಟ್ಟಿಗೆ ಇದೆ ಎಂದರೆ ಕೇವಲ ಟಿಕೆಟ್ ಗಿಟ್ಟಿಸಿಕೊಳ್ಳಲು ಮುಸ್ಲಿಂ ಸಮುದಾಯದವರನ್ನ ಟಾರ್ಗೆಟ್ ಮಾಡಿದ್ದಾರೆ. ಈ ಹೇಳಿಕೆಯಿಂದ ಪ್ರಚೋದನೆಗೊಂಡ ಕೆಲವರು ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದು ನಾಚಿಗೆಗೇಡಿನ ಸಂಗತಿ. ಇವರ ಹೇಳಿಕೆಯಿಂದ ಕರ್ನಾಟಕ ಹೊತ್ತಿ ಉರಿವ ಹಂತಕ್ಕೆ ಬಂದಿದೆ. ಈ ಸರ್ಕಾರದ ಮೇಲೆ ನಮಗಷ್ಟೇ ಅಲ್ಲ ಯಾರಿಗೂ ನಂಬಿಕೆ ಇಲ್ಲ. ಬಿಜೆಪಿ ಕಾರ್ಯಕರ್ತ ಬೆಳಗಾವಿ ಕಾಂಟ್ರ್ಯಾಕ್ಟರ್ ಸಂತೋಷ್ ಎಂಬಾತ ಇವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ. ಆದರೂ ಆತನ ಮೇಲೆ ಯಾವುದೇ ಕ್ರಮವಾಗಲಿಲ್ಲ. ಹಾಗಾಗಿ ಈ ದೇಶದ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ತಕ್ಷಣ ಈಶ್ವರಪ್ಪ ಮೇಲೆ ಕ್ರಮವಾಗಬೇಕು ಹಾಗೂ ಯಾವುದೇ ಚುನಾವಣೆಯಲ್ಲಿ ನಿಲ್ಲದ ಹಾಗೆ ಶಿಕ್ಷೆ ನೀಡಬೇಕು ಎಂದು ನಾವು ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈಶ್ವರಪ್ಪನವರಿಗೂ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಈ ಶಿವಮೊಗ್ಗ ಜಿಲ್ಲೆ ಹಲವು ಹೆಮ್ಮೆಗೆ ಪ್ರತೀಕದಂತಿರುವ ಶಿವಮೊಗ್ಗದಲ್ಲಿ ಈಶ್ವರಪ್ಪ ಹೇಳಿಕೆ ಚಿಂತಿಗೀಡು ಮಾಡಿದೆ. ಕುವೆಂಪು ಅಂತ ಮಹಾನ್ ಲೇಖಕರ ನಾಡಿನಲ್ಲಿ ಹರಕಲು ಬಾಯಿಯಿಂದ ಈ ತರಹದ ಹೇಳಿಕೆ ನೀಡಬೇಡಿ. ಇಲ್ಲಿ ಸುಖ-ಶಾಂತಿಯಿಂದ ಬದುಕುತ್ತಿದ್ದೇವೆ. ಇದೇ ತರಹ ಮುಂದುವರಿದರೆ ಈಶ್ವರಪ್ಪ ಅಷ್ಟೇ ಅಲ್ಲ ಅವರ ಕುಟುಂಬಕ್ಕೂ ಸಹ ಜನ ಇಲ್ಲಿ ಬೆಂಬಲ ನೀಡೋದಿಲ್ಲ. ನಾವು ಈಶ್ವರಪ್ಪ ಅವರನ್ನ ಕ್ಷಮಿಸೋದಿಲ್ಲ. ಈ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಈಶ್ವರಪ್ಪ ಅವರನ್ನ ಸಂಪುಟದಿಂದ ತೆಗೆದುಹಾಕಬೇಕು ಎಂದು ಎಸ್.ಡಿ.ಪಿಐ ರಾಜ್ಯ ಸಂಚಾಲಕ ಸಲೀಂ ಖಾನ್ ಒತ್ತಾಯಿಸಿದ್ದಾರೆ..