ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಸ್ವತಃ ನಿಗಮದ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
2020 ನವೆಂಬರ್ 26ರಂದು 2145 ರೂ. ಮೌಲ್ಯದ 3 ಶ್ರೀಗಂಧ ಮಣಿ ಪುಷ್ಪಹಾರ 7335 ರೂ, 94,747 ರೂ. ಮೌಲ್ಯದ ಒಂದು ಶ್ರೀಗಂಧದ ಕೃಷ್ಣ ವಿಗ್ರಹ, 1,40,400 ರೂ. ಮೌಲ್ಯದ ಶ್ರೀಗಂಧದ ರಾಮನ ವಿಗ್ರಹ, 2021, ನವೆಂಬರ್ 11ರಂದು 14.333 ರೂ ಮೌಲ್ಯದ 2 ಶಿವಾನಿ ವುಡ್ ರಾಮ ವಿಗ್ರಹದ 28,666 ರೂ. ಮತ್ತು 211 ರೂ. ಮೌಲ್ಯದ 190,40,090 ರೂ. ಸೇರಿದಂತೆ ಒಟ್ಟಾರೆ 3,10,166 ರೂ. ಹಣ ನೀಡದೇ ವಸ್ತುಗಳನ್ನು ಮನೆಗೆ ಹೊತ್ತೊಯ್ದಿದ್ದಾರೆ.
ಕರಕುಶಲ ವಸ್ತುಗಳನ್ನು ಹಣ ಪಾವತಿಸದೇ ಮನೆಗೆ ತೆಗೆದುಕೊಂಡು ಹೋಗಿದ್ದು, ಅದನ್ನು ಮರಳಿಸುವಂತೆ ನಿಗಮದ ಅಧ್ಯಕ್ಷರಾದ ರಾಘೇಂದ್ರ ಶೆಟ್ಟಿ ಅವರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನೋಟಿಸ್ ಜಾರಿ ಮಾಡಿದ್ದಾರೆ.
ಕರಕುಶಲ ಕರ್ಮಿಗಳು ಹಾಗೂ ನಿಗಮದ ನೋಂದಾಯಿತ ಮಾರಾಟಗಾರರಿಂದ ಕರಕುಶಲ ವಸ್ತುಗಳನ್ನು ಪಡೆದಿದ್ದು, ಅವರಿಗೆ ಹಣ ಪಾವಿತಸದೇ ಇರುವುದು ಗಮನಕ್ಕೆ ಬಂದಿದೆ. ಇದರಿಂದ ನಿಗಮದ ಹೆಸರಿಗೆ ಕಳಂಕ ಬರುವಂತಾಗಿದೆ. ಆದ್ದರಿಂದ ಕೂಡಲೇ ಹಣ ಪಾವತಿ ಮಾಡುವಂತೆ ರೂಪಾ ಮೌದ್ಗಿಲ್ ಸೂಚಿಸಿದ್ದಾರೆ.