• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಗುಜರಾತ್‌ ಸಚಿವ ಸಂಪುಟ; ಹಳಬರಿಗೆ ಕೊಕ್‌ ಹೊಸಬರಿಗೆ ಮಣೆ

Any Mind by Any Mind
September 17, 2021
in ದೇಶ, ರಾಜಕೀಯ
0
ಗುಜರಾತ್‌ ಸಚಿವ ಸಂಪುಟ; ಹಳಬರಿಗೆ ಕೊಕ್‌ ಹೊಸಬರಿಗೆ ಮಣೆ
Share on WhatsAppShare on FacebookShare on Telegram

ಗುಜರಾತ್‌ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್‌ರವರು ಗುರುವಾರ 24 ಜನರನ್ನೊಳಗೊಂಡ ನೂತನ ಸಚಿವ ಸಂಪುಟವನ್ನು ರಚಿಸಿದ್ದಾರೆ.

ADVERTISEMENT

ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿಯವರ  ಮಂತ್ರಿ ಮಂಡಲದಲ್ಲಿದ್ದ 21 ಶಾಸಕರ ಸಚಿವ ಸ್ಥಾನಕ್ಕೆ ಕೊಕ್‌ ನೀಡಲಾಗಿದ್ದು ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಜೊತೆಗೆ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಮೂವರಿಗೆ ಮತ್ತೆ ಅಧಿಕಾರದ ಅದೃಷ್ಟ ಒಲಿದು ಬಂದಿದೆ.

ವಿಶೇಷ ಸಂಗತಿ ಎಂದರೆ ಸಿಎಂ ಪಟೇಲ್‌ರವರು ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಯಲ್ಲಿ ಒಮ್ಮೆಯು ಸಚಿವರಾಗಿ ಕೆಲಸ ಮಾಡಿದ ಯಾವುದೇ ಅನುಭವ ಇಲ್ಲದ 21 ಶಾಸಕರು ನೂತನ ಸಚಿವ ಸಂಪುಟವನ್ನು ಸೇರಿದ್ದಾರೆ.

ಈ ಹಿಂದೆ ವಿಧಾನಸಭೆ ಸ್ಪೀಕರ್‌ ಆಗಿದ್ದ ರಾಜೇಂದ್ರ ತ್ರಿವೇದಿ, ಗುಜರಾತ್‌ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಜಿತುಭಾಯ್‌ ವಘಾನಿ, ಪೂರ್ಣೇಶ್‌ ಮೋದಿ, ರಾಘವ್‌ಜಿ ಪಟೇಲ್‌, ಕನುಭಾಯ್‌ ದೇಸಾಯಿ, ಕೃತಿಸಿನ಼ ರಾಣಾ, ನರೇಶ ಪಟೇಲ್‌, ಪ್ರದೀಪ ಪರ್ಮಾರ್‌ ಮತ್ತು ಅರ್ಜುನ್‌ ಸಿನ಼  ಚೌಹಾಣ್‌ ಕ್ಯಾಬಿನೆಟ್‌ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತ್ರಿವೇದಿ, ರಾಣಾ ಮತ್ತು ರಾಘವ್‌ಜಿ ಈ ಹಿಂದೆ ಮಂತ್ರಿಗಳಾಗಿದ್ದ ಅನುಭವವನ್ನು ಹೊಂದಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವಿಜಯ್‌ ರೂಪಾನಿ ಅವರನ್ನು ಹಠಾತ್ತನೆ ಸಿಎಂ ಸ್ಥಾನದಿಂದ ಕೆಳಗಿಳಿಸಿ ಪಟೇಲ್‌ರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಮತ್ತು ರಾಜ್ಯ ಬಿಜೆಪಿ ನಾಯಕರಲ್ಲಿ ಈ ಬಗ್ಗೆ ಅಸಮಾಧಾನದ ಬೇಗುದಿ  ಹೊಗೆಯಾಡುತ್ತಿದ್ದೆ.

ನೂತನ ಸಚಿವ ಸಂಪುಟ ಪ್ರಮಾಣವಚನ  ಕಾರ್ಯಕ್ರಮದಲ್ಲಿ ತುಸು ಬದಲಾವಣೆ ಇತ್ತು. ಆದರೆ, ಬಹಿರಂಗ ಬಂಡಾಯವಿಲ್ಲದೆ ಕಾರ್ಯಕ್ರಮ ಸುಗಮವಾಗಿ ಮುಗಿದಿದೆ. 2022ರ ಅಂತ್ಯಕ್ಕೆ ನಡೆಯುವ ಗುಜರಾತ್‌ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆ ತರಲಾಗಿದೆ.

ನೂತನ ಮಂತ್ರಿ ಮಂಡಲದ ಮೂಲಕವೇ ಮತದಾರರನ್ನು ಸೆಳೆಯುವುದು ತನ್ನ ಉದ್ದೇಶ ಎಂದು ಬಿಜೆಪಿ ವರಿಷ್ಠರು ಈ ಮೂಲಕ ರಾಜ್ಯ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅಸಮಾಧಾನವನ್ನು ಹಿರಿಯ ನಾಯಕರು ಹೇಗೆ ತಣಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Tags: BJPcabinet expansionchief ministerGujaratGujarath GovernmentNarendra Modiಬಿಜೆಪಿ
Previous Post

ಮೋದಿ ಜನ್ಮದಿನ ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಣೆ: ಟ್ವಿಟರ್‌ನಲ್ಲಿ ಭರಪೂರ ಬೆಂಬಲ.!

Next Post

ಕೇಂದ್ರ ಸಚಿವ ಸಂಪುಟವನ್ನು ಮೀರಿಸಿದ ಟಿಟಿಡಿ ಆಡಳಿತ ಮಂಡಳಿ

Related Posts

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”
Top Story

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

by ಪ್ರತಿಧ್ವನಿ
March 4, 2026
0

ಮಾಗಡಿ :  ತಾಲೂಕಿನ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್ ಗಳನ್ನು ಈಗಾಗಲೇ ಕರೆಯಲಾಗಿದೆ” ಎಂದು ಜಲಸಂಪನ್ಮೂಲ...

Read moreDetails
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
Next Post
ಕೇಂದ್ರ ಸಚಿವ ಸಂಪುಟವನ್ನು ಮೀರಿಸಿದ ಟಿಟಿಡಿ ಆಡಳಿತ ಮಂಡಳಿ

ಕೇಂದ್ರ ಸಚಿವ ಸಂಪುಟವನ್ನು ಮೀರಿಸಿದ ಟಿಟಿಡಿ ಆಡಳಿತ ಮಂಡಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada