• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕಾರವಾರದ 12 ದ್ವೀಪ ಕಬಳಿಸಲು ಗೋವಾ ಸಂಚು: ಕರ್ನಾಟಕ ಸರ್ಕಾರದ ಅಸಡ್ಡೆ, ರೈತ-ಕನ್ನಡಪರ ಹೋರಾಟಗಾರರ ಆಕ್ರೋಶ

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
October 23, 2021
in ಕರ್ನಾಟಕ, ದೇಶ
0
ಕಾರವಾರದ 12 ದ್ವೀಪ ಕಬಳಿಸಲು ಗೋವಾ ಸಂಚು: ಕರ್ನಾಟಕ ಸರ್ಕಾರದ ಅಸಡ್ಡೆ, ರೈತ-ಕನ್ನಡಪರ ಹೋರಾಟಗಾರರ ಆಕ್ರೋಶ
Share on WhatsAppShare on FacebookShare on Telegram

ಗೋವಾ ಕಾರವಾರದ ಬಳಿಯ 12 ದ್ವೀಪಗಳಿಗೆ ಹಕ್ಕು ಚಲಾಯಿಸಿದ ನಂತರ, ಕರ್ನಾಟಕವು ಉತ್ತರ ಕನ್ನಡದ ಮಿತಿಯಲ್ಲಿ 57  ದ್ವೀಪಗಳನ್ನು ಗುರುತಿಸಿಕೊಂಡಿದೆ. ಕರ್ನಾಟಕ ಕರಾವಳಿಯಿಂದ 12-15 ನಾಟಿಕಲ್ ಮೈಲಿ ದೂರದಲ್ಲಿರುವ 12 ದ್ವೀಪಗಳನ್ನು ಸ್ವಾಧೀನಪಡಿಸಿಕೊಳ್ಳಲು ಗೋವಾ ಸರ್ಕಾರ ಇತ್ತೀಚೆಗೆ ಕೇಂದ್ರಕ್ಕೆ ಪತ್ರ ಬರೆದಿತ್ತು.

ADVERTISEMENT

ಮಹದಾಯಿ ವಿಷಯದಲ್ಲಿ ತಲೆನೋವಾಗಿದ್ದ ಗೋವಾ ಸರ್ಕಾರ ಇದೀಗ ದ್ವೀಪಗಳ ವಿಷಯದಲ್ಲಿ ವಿವಾದ ಸೃಷ್ಟಿಸಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಗೋವಾದ ಪತ್ರಕ್ಕೆ ಉತ್ತರಿಸದೇ ಜಾಣಮೌನ ತಾಳಿದೆ.

ಗೋವಾ ಸರ್ಕಾರವು ಅಂಜಿದಿವ, ಕೂರ್ಮಗಡ, ದೇವಗಡ, ಶಿಮ್ಸಿಗಡ, ಸೆಸೆ ಗುಂಜಿ, ಜಾನಿಗಡ, ಮದಲಿ ಗಡ ಮತ್ತು ಇತರ ದ್ವೀಪಗಳ ಮೇಲೆ ಹಕ್ಕು ಚಲಾಯಿಸಿದೆ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಹತ್ತಿರವಾಗಿರುವ ಮತ್ತು ರಾಜ್ಯದ ವ್ಯಾಪ್ತಿಯಲ್ಲಿ ಬರುವ 12 ದ್ವೀಪಗಳನ್ನು ಸ್ವಾಧೀನಪಡಿಸಿಕೊಳ್ಳಲು ಗೋವಾ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದ ನಂತರ, ಆಡಳಿತವು ಈಗ ಜಿಲ್ಲೆಯ ವ್ಯಾಪ್ತಿಯಲ್ಲಿ 57 ದ್ವೀಪಗಳನ್ನು ಗುರುತಿಸಿದೆ.

ಈ ವಿಷಯದ ಬಗ್ಗೆ ಗೋವಾ ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ ಮತ್ತು ಪತ್ರವನ್ನು ಕರ್ನಾಟಕ ಸರ್ಕಾರಕ್ಕೆ ರವಾನಿಸಿದೆ, ಅದರ ನಂತರ ಬೆಂಗಳೂರಿನ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಆಂತರಿಕ ಭದ್ರತೆ) ವಿಚಾರಣೆಗಳನ್ನು ನಡೆಸಿ 12 ದ್ವೀಪಗಳು ಜಿಲ್ಲಾ ಆಡಳಿತದ ವ್ಯಾಪ್ತಿಗೆ ಬರುವುದನ್ನು ಖಚಿತಪಡಿಸಿದೆ.

ಇಷ್ಟರ ನಂತರ ಕರ್ನಾಟಕ ಸರ್ಕಾರ ಯಾವುದೇ ತ್ವರಿತ ಕಾರ್ಯಕ್ಕೆ ಮುಂದಾಗಿಲ್ಲ. ಬಂದರು ಸಚಿವರಿಗೂ ಈ ಮಾಹಿತಿ ಇದ್ದಂತಿಲ್ಲ. ಮಹದಾಯಿ ಹೋರಾಟದಲ್ಲಿದ್ದ ಬಹುಪಾಲು ಕನ್ನಡ-ರೈತ ಸಂಘಟನೆಗಳಿಗೂ ಈ ವಿಷಯ ಗೊತ್ತಿಲ್ಲ!

ಉತ್ತರ ಕನ್ನಡ ಉಪ ಆಯುಕ್ತ ಮುಲ್ಲೈ ಮುಹಿಲನ್ ಅಕ್ಷಾಂಶ ಮತ್ತು ರೇಖಾಂಶವನ್ನು ಗುರುತಿಸುವ ಮೂಲಕ ಇನ್ಸ್ಪೆಕ್ಟರ್ ಜನರಲ್ಗೆ ವಿವರ ಕಳುಹಿಸಿದ್ದಾರೆ.

ಗೋವಾ ಸರ್ಕಾರವು ಅಂಜಿದಿವ, ಕೂರ್ಮಗಡ, ದೇವಗಡ, ಶಿಮ್ಸಿಗಡ, ಸೆಸೆ ಗುಂಜಿ, ಜಾನಿಗಡ, ಮದಲಿ ಗಡ ಮತ್ತು ಇತರ ದ್ವೀಪಗಳ ಮೇಲೆ ಹಕ್ಕು ಚಲಾಯಿಸಿದೆ. ಉಪ ಆಯುಕ್ತರ ಪ್ರಕಾರ, ಈ ದ್ವೀಪಗಳು ಕರ್ನಾಟಕ ಕರಾವಳಿಯಿಂದ 12-15 ನಾಟಿಕಲ್ ಮೈಲುಗಳ ಒಳಗೆ ಇವೆ.

ಉತ್ತರ ಕನ್ನಡ  ಜಿಲ್ಲಾಧಿಕಾರಿ, “ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ (ಆಂತರಿಕ ಭದ್ರತೆ)ಅವರಿಂದ  ನಮಗೆ ಪತ್ರ ಬಂದ ನಂತರ ನಾವು ದ್ವೀಪಗಳ ನ್ಯಾಯವ್ಯಾಪ್ತಿಯನ್ನು ಕಂಡುಹಿಡಿಯುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ ಮತ್ತು ಎಷ್ಟು ದ್ವೀಪಗಳು ಕಾರವಾರದ ವ್ಯಾಪ್ತಿಗೆ ಒಳಪಟ್ಟಿವೆ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಈಗ, 57 ದ್ವೀಪಗಳು ರಾಜ್ಯದ ವ್ಯಾಪ್ತಿಗೆ ಬರುತ್ತವೆ ಎಂದು ಗೊತ್ತಾಗಿದೆ ಈ ದ್ವೀಪಗಳಲ್ಲಿ ಹೆಚ್ಚಿನವು ವಾಸಕ್ಕೆ ಸೂಕ್ತವಲ್ಲ ಮತ್ತು ಅನೇಕವು ದುಂಡಾದ ಬಂಡೆಗಳಾಗಿವೆ ಎಂದಿದ್ದಾರೆ.

ದಾಖಲೆಗಳ ಪ್ರಕಾರ, ಕೂರ್ಮಗಡವು ಕಾರವಾರ ತಾಲ್ಲೂಕಿನ ಚಿತ್ತಾಕುಲ ಹಳ್ಳಿಯ ಖಾಸಗಿ ದ್ವೀಪವಾಗಿದ್ದು,  ಈಗ ಜಿಲ್ಲಾಡಳಿತದ ಅಧೀನಕ್ಕೆ ಬಂದಿದೆ. ಇತರ ಕೆಲವು ದ್ವೀಪಗಳು ಮೀನು ಕತ್ತರಿಸುವ ಜಾಗಗಳಾಗಿದ್ದು, ಇನ್ನೂ ಕೆಲವು ಸಿಂಪಿ ಬಂಡೆಗಳು, ನದಿ ದ್ವೀಪಗಳು ಆಗಿವೆ

ಟೂರಿಸಂಗಾಗಿ ಗೋವಾ  ಆಟ

ಗೋವಾದ ಆರ್ಥಿಕತೆಯ ತಳಪಾಯವೇ ಟೂರಿಸಂ. ಈ 12 ದ್ವೀಪಗಳಲ್ಲಿ ಅದು ರೆಸಾರ್ಟ್, ಸ್ಕೂಬಾ ಡೈವಿಂಗ್, ಜೂಜು ಮುಂತಾದ ಯೋಜನೆಗಳನ್ನು ಆರಂಭಿಸುವ ಸಂಚು ಹೊಂದಿದೆ. ಪದೇ ಪದೇ ಮಹದಾಯಿ ವಿಷಯದಲ್ಲಿ ಕರ್ನಾಟಕಕ್ಕೆ ಅಡ್ಡಿ ಮಾಡುತ್ತ ಬಂದ ಗೋವಾ ಮಹದಾಯಿ ನೀರು ಸಮುದ್ರ ಸೇರುತ್ತಿದ್ದರೂ ತಾಂತ್ರಿಕ ಮತ್ತು ಪರಿಸರದ ವಿಷಯ ಎತ್ತಿ ದಾರಿ ತಪ್ಪಿಸುತ್ತ ಬಂದಿತ್ತು.

ಈ ಕುರಿತು ‘ಪ್ರತಿಧ್ವನಿ’ ಜೊತೆ ಮಾತನಾಡಿದ ಕಾರವಾರದ ಕನ್ನಡ ಹೋರಾಟಗಾರ ಮತ್ತು ಕಾರವಾರ ತಾಲೂಕು ಕಸಾಪದ ಹಂಗಾಮಿ ಅಧ್ಯಕ್ಷ ನಾಗರಾಜ ಹರಪನಹಳ್ಳಿ, ‘ ಮೂಲತಃ ಈ ದ್ವೀಪಗಳು  ಪೋರ್ಚುಗೀಸರ ವಶದಲ್ಲಿದ್ದವು. ಸ್ವಾತಂತ್ರ್ಯಾ ನಂತರ ಇವು ಕರ್ಬಾಟಕಕ್ಕೆ ಸೇರಿವೆ. ಟೂರಿಸಂ ಉದ್ದೇಶದಿಂದ ಗೋವಾ ಈ ಕುತಂತ್ರ ಮಾಡುತ್ತಿದೆ. ಈ ದ್ವೀಪಗಳಲ್ಲಿ ಹೆಚ್ಚಿನವು ಯಾವುದೇ ಜನವಸತಿ ಹೊಂದಿಲ್ಲ. ಜಿಲ್ಲಾಡಳಿತ ದಅಧೀನದಲ್ಲಿರುವ ಕೂರ್ಮಗಡವನ್ನು ಕೇಳುವ ಮೂಲಕ ಗೋವಾ ಸರ್ಕಾರ ಉದ್ಧಟತನ ಮೆರೆದಿದೆ. ಕರ್ನಾಟಕ ಸರ್ಕಾರ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿ ವಿಷಯವನ್ನು ಸಮಾಪ್ತಿಗೊಳಿಸಬೇಕು’ ಎಂದರು.

ಮಹದಾಯಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ರೈತಸೇನೆಯ ಅಧ್ಯಕ್ಷ ವಿರೇಶ್ ಸೊಬರದಮಠ ‘ಪ್ರತಿಧ್ವನಿ’ಗೆ ಪ್ರತಿಕ್ರಿಯಿಸಿ, ‘ಕರ್ನಾಟಕ ಸರ್ಕಾರದ ಬೇಜವಾಬ್ದಾರಿಯಿಂದ ಗೋವಾ ಹುಚ್ಚಾಟ ನಡೆಸುತ್ತಿದೆ. ಅಥವಾ ನಮ್ಮವರೇ ಗೋವಾಕ್ಕೆ ಪತ್ರ ಬರೆಯಲು ತಿಳಿಸಿ, ನಂತರ ಪ್ರತಿಭಟನೆಗಳಾದಾಗ ಸರ್ಕಾರ ತನ್ನ ವೈಫಲ್ಯಗಳನ್ನು ಬಳಸಿಕೊಳ್ಳಲು ಮುಂದಾಗಬಹುದು. ಮಹದಾಯಿ ವಿಷಯದಲ್ಲಿ ಅರಣ್ಯ ಮತ್ತು ಪರಿಸರ ಕುರಿತ ನಿರಾಪೇಕ್ಷಣಾ ಪತ್ರಗಳನ್ನು ಪಡೆಯಲು ರಾಜ್ಯ ಸರ್ಕಾರ ಯಾವ ಗಂಭಿರತೆಯನ್ನೂ ತೋರುತ್ತಿಲ್ಲ. ಆದರೆ ಗೋವಾ ದ್ವೀಪಗಳಿಗಾಗಿ ಮುಂದುವರೆದರೆ ಮಹದಾಯಿ ಹೋರಾಟದ ಸಂಘಟನೆಗಳು ಬೀದಿಗೆ ಇಳಿಯಲಿವೆ’ ಎಂದರು.

ಸದ್ದಿಲ್ಲದೇ ನಡೆದಿರುವ ಈ ಬೆಳವಣಿಗೆ ಬಗ್ಗೆ ರಾಜ್ಯ ಸರ್ಕಾರ  ಸಾರ್ವಜನಿಕವಾಗಿ ಏನನ್ನೂ ಹೇಳದಿರುವುದು ಅದರ ಸೋಂಭೇರಿತನಕ್ಕೆ ಸಾಕ್ಷಿಯಾಗಿದೆ. ಮಹದಾಯಿ ವಿಷಯದಲ್ಲಿ ತೋರಿದ್ದ ನಿರ್ಲಕ್ಷ್ಯ ಇಲ್ಲೂ ಕಂಡು ಬರುತ್ತಿದೆ.

Tags: Amit ShahAraga JnanendraBasavaraj BommaiBJPCongress PartyCovid 19GoaMahadayi DisputeMahadayi riverಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ವಿವಾದಕ್ಕೊಳಗಾದ ತುಳುನಾಡ ಬಾಳ್ತಿಲ ಬೀಡು!! Tulunad

Next Post

‘ಪ್ರತಿಕ್ರಿಯೆ ನೀಡಲು ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರೊದಿಲ್ಲ’ : ವಿಶ್ವ ಹಿಂದೂ ಪರಿಷತ್!

Related Posts

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ
Serial

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

by ಪ್ರತಿಧ್ವನಿ
October 13, 2025
0

ಸಾಮಾಜಿಕ  ಅನ್ಯಾಯ ದೌರ್ಜನ್ಯ ತಾರತಮ್ಯಗಳಿಗೆ ಸ್ಪಂದಿಸುವುದು ನಾಗರಿಕತೆಯ ಲಕ್ಷಣ ನಾ ದಿವಾಕರ  ಜಗತ್ತಿನ ಇತಿಹಾಸದಲ್ಲಿ ಸಂಭವಿಸಿರುವ ಬಹುತೇಕ ವಿಪ್ಲವಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಆಯಾ ಸಮಾಜಗಳಲ್ಲಿ ಕ್ರಿಯಾಶೀಲವಾಗಿ,...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post
‘ಪ್ರತಿಕ್ರಿಯೆ ನೀಡಲು ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರೊದಿಲ್ಲ’ : ವಿಶ್ವ ಹಿಂದೂ ಪರಿಷತ್!

'ಪ್ರತಿಕ್ರಿಯೆ ನೀಡಲು ನಾವು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರೊದಿಲ್ಲ' : ವಿಶ್ವ ಹಿಂದೂ ಪರಿಷತ್!

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada