
ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯದ ಹೋರಾಟಗಾರ ಡಾ. ಗುಣವಂತರಾಯ್ ಗಣಪತ್ ಲಾಲ್ ಪಾರಿಖ್ ಅವರಿಂದು ನಿಧನರಾಗಿದ್ದಾರೆ. ಗಾಂಧಿ ತತ್ವ ಸಿದ್ದಾಂತಕ್ಕೆ ಬದ್ದರಾಗಿದ್ದವರು, ಇವರ ಅಸ್ತಂಗತದಿಂದ ಗಾಂಧಿಯವರ ಕೊನೆಯಕೊಂಡಿಯೊಂದು ಕಳಚಿದಂತಾಗಿದೆ.
ಗುಣವಂತರಾಯ್ ಗಣಪತ್ ಲಾಲ್ ಅವರು ಜಿಜಿ ಪಾರಿಖ್ ಜಿಜಿ ಎಂದೇ ಖ್ಯಾತರಾಗಿದ್ದರು. ಪಾರಿಖ್ ಅವರಿಗೆ 101 ವರ್ಷಗಳಾಗಿತ್ತು. ಇತ್ತ ಪರಾಖ್ ಅವರ ಮೃತದೇಹವನ್ನು ಮುಂಬೈಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಷ್ಟ್ರದ ಸ್ವಾತಂತ್ರ್ಯ ಹೋರಾಟ, ಗೋವಾ ವಿಮೋಚನೆ ಚಳುವಳಿ, ಸಂಯುಕ್ತ ಮಹಾರಾಷ್ಟ್ರದ ಚಳುವಳಿಯಲ್ಲಿ ಭಾಗವಹಿಸಿದ್ದರು. ಹಾಗೂ ತುರ್ತು ಪರಿಸ್ಥಿತಿಯ ವಿರುದ್ಧವೂ ಕೂಡ ಇವರು ಪ್ರತಿಭಟಿಸಿದ್ದರು.

ಈ ಹಿರಿಯರು ವಿಶೇಷ ಗುಣವೊಂದನ್ನು ಹೊಂದಿದ್ದರು ಅದು ಏನಂದರೆ 1951-1952ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ನಡೆದ ಬಹುತೇಕ ಅಥವಾ ಎಲ್ಲಾ ಚುನಾವಣೆಗಳಲ್ಲೂ ಪಾರಿಖ್ ಮತ ಚಲಾಯಿಸುತ್ತುದ್ದರು.

ಇವರು 1961ರಲ್ಲಿ ಸ್ತಾಪನೆಗೊಂಡ ರಾಯಗಢ ಜಿಲ್ಲೆಯ ತಾರಾದಲ್ಲಿರುವ ಯೂಸುಫ್ ಮೆಹರಲ್ಲಿ ಕೇಂದದ್ರ ಅಧ್ಯಕ್ಷರಾಗಿದ್ದರು. ಈ ಸಂಸ್ಥೆ ಆರೋಗ್ಯ, ಶಿಕ್ಷಣ, ಮಹಿಳೆಯರ ಮತ್ತು ಆದಿ ವಾಸಿಗಳ ಸಬಲೀಕರಣ ಸೇರಿದಂತೆ ಕೃಷಿ, ಕೌಶಲ್ಯ, ಅಭಿವೃದ್ಧಿ ಕೃಷಿಯೇತರ ಉದ್ಯೋಗ ಸೃಷ್ಟಿ ಮತ್ತು ವಿಪತ್ತು ಪರಿಹಾರ ಪ್ರಯತ್ನಗಳನ್ನು ಒಳಗೊಂಡು ಅನೇಕ ಜನಪರ ಸೇವೆಗಾಗಿ ಮೀಸಲಿರುವ ಸಂಸ್ಥೆಯಿದಾಗಿದೆ.












