
ಸೋಮವಾರಪೇಟೆ ತಾಲೋಕಿನ ಬಾಣವಾರ ಮೀಸಲು ಅರಣ್ಯ ವ್ಯಾಪ್ತಿಯ ಭುವಂಗಾಲ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಮರಿಯಾನೆ, 2 ಗಂಡಾನೆ ಸೇರಿದಂತೆ ಒಟ್ಟು 11 ಕಾಡಾನೆ ಹಿಂಡು ಗ್ರಾಮದಲ್ಲಿ ಸಂಚರಿಸುತ್ತಿದ್ದು ಇದರಿಂದ ಗ್ರಾಮಸ್ಥರು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಗೂ ವಾಹನ ಸವಾರರು ಭಯಬೀತರಾಗಿದ್ದಾರೆ.

ಗ್ರಾಮಕ್ಕೆ ಹೋಗುವ ರಸ್ತೆಯ ಎರಡು ಬದಿಯಲ್ಲಿ ಬಾಣವಾರ ಮೀಸಲು ಅರಣ್ಯ ಇದ್ದು ಕಾಡಿನಿಂದ ಬಂದ ಕಾಡಾನೆಗಳ ಹಿಂಡು ಹಗಲು ರಾತ್ರಿ ಎನ್ನದೆ ರಸ್ತೆ ಮಧ್ಯದಲ್ಲಿ ಹಿಂಡು ಹಿಂಡಾಗಿ ಸಂಚರಿಸುತ್ತರಿರುವುದನ್ನು ಕಂಡು ಗ್ರಾಮಸ್ಥರು ಭಯಗೊಂಡಿದ್ದಾರೆ ಇಲ್ಲಿ ಒಂದೆರೆಡು ಕಾಡಾನೆಗಳು ಸಂಚರಿಸುವುದು ಗ್ರಾಮಸ್ಥರಿಗೆ ಮಾಮೂಲಿಯಾಗಿದೆ ಆದರೆ ಸುಮಾರು 11 ಕಾಡಾನೆ ಹಿಂಡು ಹಗಲು ರಾತ್ರಿ ಎನ್ನದೆ ಗ್ರಾಮದ ರಸ್ತೆ ಮಧ್ಯೆ ಓಡಾಡುತ್ತಿರುವುದು ಇದೆ ಪ್ರಥಮ ಬಾರಿಯಾಗಿರುವುದ್ದರಿಂದ ಗ್ರಾಮಸ್ಥರು ಭಯಬೀತರಾಗಿದ್ದಾರೆ.
ಸೋಮವಾರ ಸಂಜೆ ಸುಮಾರು ಮರಿಯಾನೆ ಸೇರಿದಂತೆ 9 ಕಾಡಾನೆ ಹಿಂಡು ಗ್ರಾಮದ ರಸ್ತೆಯಲ್ಲಿ ಗ್ರಾಮ ಸಂಚಾರ ಮಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಮತ್ತು ವಾಹನ ಸವಾರರು ಗಾಬರಿಗೊಂಡಿದ್ದಾರೆ ಗ್ರಾಮಸ್ಥರು ಕೂಗಿ, ಶಬ್ಧ ಮಾಡಿ ಕಾಡಾನೆಯನ್ನು ಕಾಡಿಗೆ ಓಡಿಸಲು ಪ್ರಯತ್ನ ಪಟ್ಟರೂ ಕ್ಯಾರೆ ಮಾಡದ ಕಾಡಾನೆ ಹಿಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದವು ಈ ವೇಳೆ 2 ಗಂಡಾನೆಗಳು ರಸ್ತೆ ಮಧ್ಯೆ ಕಾದಾಟಕ್ಕೆ ಇಳಿದಿರುವುದನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದಾರೆ.
ಗ್ರಾಮಸ್ಥರು ಸೋಮವಾರಪೇಟೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಡಾನೆಗಳನ್ನು ಕಾಡಿಗೆ ಅಟ್ಟುವುದು ಈ ಭಾಗದಲ್ಲಿ ಕಾಡಾನೆ ಸಮಸ್ಯೆಗೆ ಶ್ವಾಸ್ವಿತ ಪರಿಹಾರ ನೀಡುವಂತೆ ಆಗ್ರಹಿಸಿದರು ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದರು.










