ರಾಜ್ಯಕ್ಕೆ ಚುನಾವಣಾ ಹೊಸ್ತಿಲಿನಲ್ಲಿ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra modi) ಅವರ ಕೊಡುಗೆ ಏನು? ಎಂದು ಬೆಂಗಳೂರಿನಲ್ಲಿ (Bangalore) ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr parameshwar) ಪ್ರಶ್ನಿಸಿದ್ದಾರೆ.

ಬೆಂಗಳೂರಿಗೆ ನರೇಂದ್ರ ಮೋದಿ ಅವರ ಆಗಮನ ಆಗುತ್ತಿದೆ. ಕಾಂಗ್ರೆಸ್ (congress) ಈ ಸಂದರ್ಭದಲ್ಲಿ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದೆ. ಯಾವುದಕ್ಕೂ ಅವರಿಂದ ಸಮರ್ಪಕವಾದ ಉತ್ತರ ಬಂದಿಲ್ಲ. ಇದು ಸರಿಯಲ್ಲ. ರಾಜ್ಯಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲವೂ ಗೊತ್ತಿದೆ. ಭೀಕರ ಬರಗಾಲ (Drought) ನಮ್ಮಲ್ಲಿದ್ರೂ ಸಹ, ಈವರೆಗೂ ಬರಗಾಲದ ಪರಿಹಾರ ಬಿಡುಗಡೆ ಮಾಡಿಲ್ಲ ಎಂದರು.

ಇನ್ನು ಬಜೆಟ್ನಲ್ಲಿ (Budget) ಘೋಷಿಸಿರುವ ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಇದನ್ನು ನಮ್ಮ ರಾಜ್ಯದ ಸಂಸದರು ಪ್ರಶ್ನಿಸಬೇಕಲ್ಲವೇ? ಇದನ್ನು ಯಾರೂ ಕೂಡ ಪ್ರಶ್ನಿಸಿಲ್ಲ. ಹೀಗಾಗಿಯೇ, ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವು ಪ್ರಶ್ನಿಸುತ್ತಿದ್ದೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.