
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಅಬ್ಬರದಲ್ಲಿ ನಡೀತಿದೆ. ಮತಗಟ್ಟೆ ಸಂಖ್ಯೆ 67ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಮತದಾನ ಮಾಡಿದ್ದಾರೆ. ಪತಿ ಇ. ತುಕರಾಂ, ಪುತ್ರಿ ಚೈತನ್ಯ, ಪುತ್ರ ರಘುನಂದನ್ ಜೊತೆ ಆಗಮಿಸಿದ ಅನ್ನಪೂರ್ಣ ಮತದಾನ ಮಾಡಿದ್ದು, ಮತದಾನದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಎಲ್ಲರೂ ಬಂದು ಮತದಾನ ಮಾಡಿ. ಸಂವಿಧಾನದ ಆಶಯದಂತೆ ಮತದಾನ ಮಾಡಿ ಅಂತ ಮನವಿ ಮಾಡಿದ್ರು. ಇನ್ನು ಸಂಸದ ತುಕಾರಾಂ ಮಾತನಾಡಿ, ಕುಟುಂಬ ಸಮೇತರಾಗಿ ಮತದಾನ ಮಾಡಿದ್ದು ಖುಷಿಯಾಗಿದೆ ಎಂದಿದ್ದಾರೆ.

ಸಂಡೂರಿನಲ್ಲಿ ಸಚಿವ ಸಂತೋಷ್ ಲಾಡ್ ತಾಯಿ ಶೈಲಜಾ ಲಾಡ್ ಮತಗಟ್ಟೆ ಸಂಖ್ಯೆ 67ರಲ್ಲಿ ಮತದಾನ ಮಾಡಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ, ಸಂಸದ ತುಕಾರಾಂ ಶೈಲಜಾ ಲಾಡ್ ಅವರ ಆಶೀರ್ವಾದ ಪಡೆದಿದ್ದಾರೆ.ಸಂತೋಷ ಲಾಡ್ ತಾಯಿ ಜೊತೆಗೆ ಲಾಡ್ ಸಹೋದರಿ ಸುಜಾತ ಲಾಡ್ ಆಗಮಿಸಿ ಮತದಾನ ಮಾಡಿದ್ದಾರೆ.

ಸಂಡೂರು ಬಿಜೆಪಿ ಅಭ್ಯರ್ಥಿ ಬಂಗಾರಿ ಹನುಮಂತು ಕ್ಷೇತ್ರದ ಮತಗಟ್ಟೆಗಳಿಗೆ ಭೇಟಿ ನೀಡಿದ್ರು. ಯಶವಂತನಗರ ಬೂತ್ ನಂ 45ಕ್ಕೆ ಭೇಟಿ ನೀಡಿದ ಬಂಗಾರಿ ಹನುಮಂತ್ ಮತದಾನದ ಬಗ್ಗೆ ಪರಿಶಿಲನೆ ನಡೆಸಿದ್ರು..ಬಳಿಕ ಹಿರಿಯ ಮತದಾರರ ಆರ್ಶಿವಾದ ಪಡೆದು ಮಾತನಾಡಿದ ಬಂಗಾರಿ ಹನುಮಂತು, ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ.ನಮ್ಮ ಪರ ವಾತಾವರಣ ಇದೆ. ಈ ಬಾರಿ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದಿದ್ದಾರೆ.
ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಮೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಬಗ್ಗೆ ಮಾತನಾಡಿದ್ದು, ಮೂರು ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ. ಜನರ ಒಲವು ಕಾಂಗ್ರೆಸ್ ಸರ್ಕಾರದ ಪರವಾಗಿದೆ. ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ನಮ್ಮ ಗೆಲುವು ಖಚಿತ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.