
ಸಿಎಂ ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷಗಳು ಮುಡಾ ಹಗರಣದ ಬಗ್ಗೆ ವಾಕ್ಸಮರ ನಡೆಸುತ್ತಿದ್ದ ಹಾಗೆ, ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಅವರಿಗೆ ಸಂಬಂಧಿಸಿದ ಅರ್ಜಿಗಳು ರಾಜ್ಯಪಾಲರ ಬಳಿ ಇವೆ. ಆದರೂ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ದೂರಿನ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ ಕೆಲವೇ ದಿನಗಳಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ರಾಜಭವನ ರಾಜಕೀಯ ಕೇಂದ್ರವಾಗಿದೆ. ಕೇಂದ್ರದ ಬಿಜೆಪಿ ನಾತಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕಿಡಿನುಡಿಗಳನ್ನು ಆಡಿದ್ರು. ಆದರೆ ರಾಜ್ಯಪಾಲರು ಮಾತ್ರ ನನ್ನ ಬಳಿ ಯಾವುದೇ ಅರ್ಜಿಗಳು ಬಾಕಿ ಇಲ್ಲ ಎಂದಿದ್ದರು. ಈ ವಿಚಾರವಾಗಿ ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯ ನಾಯಕರ ಪ್ರಾಸಿಕ್ಯೂಷನ್ ಮನವಿಗಳು ಇಲ್ಲದಿರುವ ವಿಚಾರದ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನಮಗೂ ಅದು ದೊಡ್ಡ ಪ್ರಶ್ನೆಯಾಗಿದೆ. ನಮಗೆ ತಿಳಿದಿರುವ ಮಾಹಿತಿ ಪ್ರಕಾರ ನಾವು ಆ ಪ್ರಸ್ತಾವ ಮಾಡಿದ್ದೇವೆ. ಇನ್ನೂ ಕೆಲವು ಲೀಡರ್ಗಳು ನಮ್ಮ ವಿರುದ್ಧವೂ ಏನೋ ರೆಡಿ ಮಾಡ್ತಿದ್ದಾರೆ. ಮಾಡಲಿ ಎಂದಿರುವ ಡಿ.ಕೆ ಶಿವಕುಮಾರ್, ಪೈಲ್ ಎಲ್ಲಿ ಹೋದವು ಅನ್ನೋದು ನಮಗೂ ಯಕ್ಷ ಪ್ರಶ್ನೆಯಾಗಿದೆ ಎಂದಿದ್ದಾರೆ. ಜೊತೆಗೆ ನಾವು ಕೂಡ ಫೈಲ್ ಎಲ್ಲಿಗೆ ಹೋದ್ವು ಅಂತ ಹುಡುಕುತ್ತಿದ್ದೇವೆ ಎಂದಿದ್ದಾರೆ.
