ಕರ್ನಾಟಕದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಲಾಗಿದ್ದನ್ನು ಖಂಡಿಸಿ ರೈತರು ಇಂದು ಪ್ರತಿಭಟನೆ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ ೨೦೯ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಭಾಗದ ರೈತರಿಗೆ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ರಸ್ತೆಯು ಸುಮಾರು ೪೫ ಕಿಲೋಮೀಟರ್ ಕಾಡಿನ ಮಧ್ಯ ಹಾದುಹೋಗಿದೆ. ಈ ರಸ್ತೆಯಲ್ಲಿ ರಾತ್ರಿ ಸಂಚಾರದ ವೇಳೆ ಸಾಕಷ್ಟು ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿದ್ದವು. ಹೀಗಾಗಿ ೨೦೧೯ ರಲ್ಲೇ ತಮಿಳುನಾಡು ಈ ರಸ್ತೆಯ ಕಲೆಕ್ಟರ್ ಇಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಆದ್ರೆ ಇದೂವರೆಗೂ ಆದೇಶ ಪಾಲನೆಯಾಗಿರಲಿಲ್ಲ.
ಹೀಗಾಗಿ ತಮಿಳುನಾಡಿನ ಪರಿಸರವಾದಿಯೊಬ್ಬರು ಚೆನೈ ನ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ರು. ಸದ್ಯ ಇದಕ್ಕೆ ತೀರ್ಪು ನೀಡಿರುವ ಚೆನ್ನೈ ಹೈಕೋರ್ಟ್ ಇಂದಿನಿಂದ ರಾತ್ರಿ ಸಂಚಾರ ನಿರ್ಬಂಧಿಸಿದೆ. ಇದಕ್ಕೆ ಕರ್ನಾಟಕದ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂದು ಕರ್ನಾಟಕದ ಗಡಿಭಾಗದ ಪುಣಜನೂರು ಚೆಕ್ ಪೋಸ್ಟ್ ಬಳಿ ಪ್ರತಿಭಟನೆ ನಡೆಯಿತು.

ರೈತ ಸಂಘಟನೆ ಜೊತೆ ಲಾರಿ ಮಾಲೀಕರ ಸಂಘದವರು ಪ್ರತಿಭಟನೆ ನಡೆಸಿದರು. ರಾತ್ರಿ ವೇಳೆ ಕೇವಲ ರೈತರು ಬೆಳೆದ ತರಕಾರಿ,ಹೂವು, ಹಣ್ಣು, ವಾಹನಗಳಿಗೆ ನಿರ್ಬಂಧ ಸಡಿಲಿಸಲಿ ಎಂದು ಒತ್ತಾಯ ಮಾಡಿದರು. ಇಲ್ಲದೇ ಹೋದ್ರೆ ರೈತರು ಬೆಳೆದ ಬೆಳೆ ಸೂಕ್ತ ಸಮಯಕ್ಕೆ ಮಾರುಕಟ್ಟೆ ತಲುಪಿವುದಿಲ್ಲ. ಇದರಿಂದ ಅವರು ಬೆಳೆದ ಬೆಳೆಗೆ ಲಾಭ ಸಿಗುವುದಿಲ್ಲ. ಹೀಗಾಗಿ ತಮಿಳುನಾಡು ಹೈಕೋರ್ಟ್ ನೀಡಿರುವ ತೀರ್ಪು ರೈತರಿಗೆ ಮಾರಕವಾಗಿದೆ. ಆದ್ದರಿಂದ ಇದನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಲಾಯಿತು.
ಕರ್ನಾಟಕದ ಭಾಗದಲ್ಲಿ ಪುಣಜನೂರು ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ವಾಹನ ತಡೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಕರ್ನಾಟಕದ ಕಡೆಯ ವಾಹನಗಳು ಅರಣ್ಯ ಪ್ರದೇಶದಲ್ಲಿ ನಿಲ್ಲುವಂತಾಗಿತ್ತದೆ. ಇದರಿಂದ ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಒತ್ತಡ ಬೀಳಲಿದೆ. ಹೀಗಾಗಿ ಕರ್ನಾಟಕ ಸರ್ಕಾರ ಯಾವ ರೀತಿಯ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.






