• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಲಸಿಕೆಗೆ ಎಫ್ ಆರ್ ಟಿ ತಂತ್ರಜ್ಞಾನ ಬಳಕೆ: ಆತಂಕ ತಂದ ಸರ್ಕಾರದ ಹೊಣೆಗೇಡಿತನ

Shivakumar by Shivakumar
July 6, 2021
in ದೇಶ
0
ಲಸಿಕೆಗೆ ಎಫ್ ಆರ್ ಟಿ ತಂತ್ರಜ್ಞಾನ ಬಳಕೆ: ಆತಂಕ ತಂದ ಸರ್ಕಾರದ ಹೊಣೆಗೇಡಿತನ
Share on WhatsAppShare on FacebookShare on Telegram

ಕೋವಿಡ್ ನಿಯಂತ್ರಣದ ಹೆಸರಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಸಂವಿಧಾನಬದ್ಧ ನಾಗರಿಕ ಹಕ್ಕುಗಳನ್ನೇ ಮೊಟಕುಗೊಳಿಸಿದ, ಲಾಕ್ ಡೌನ್ ಹೇರಿ ಜನ ಪ್ರತಿಭಟಿಸಲಾಗದ ಅಸಹಾಯಕ ಸ್ಥಿತಿಯನ್ನೇ ಬಳಸಿಕೊಂಡು ಕರಾಳ ಕಾನೂನುಗಳನ್ನು ಜಾರಿಗೆ ತಂದ ಬೆನ್ನಲ್ಲೇ, ಲಸಿಕೆ ವಿಷಯದಲ್ಲಿ ಮತ್ತೊಂದು ಅಂತಹದ್ದೇ ಅನಾಹುತಕಾರಿ ಸಂಗತಿ ಬೆಳಕಿಗೆ ಬಂದಿದೆ.

ADVERTISEMENT

ಕೋವಿಡ್ ಲಸಿಕೆ ನೀಡುವಾಗ ಫಲಾನುಭವಿಗಳ ಗುರುತು ಖಚಿತಪಡಿಸಿಕೊಳ್ಳಲು ಆಧಾರ್ ಮತ್ತು ಅವರ ಮುಖಚರ್ಯೆ ಸ್ಕ್ಯಾನ್ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಹೀಗೆ ಕಣ್ಣಿನ ಪಾಪೆ ಸೇರಿದಂತೆ ವ್ಯಕ್ತಿಯೊಬ್ಬರ ಮುಖದ ಸೂಕ್ಷ್ಮ ಚಹರೆಗಳನ್ನು ದಾಖಲಿಸಿಕೊಂಡು, ಅದನ್ನು ಅವರ ಆಧಾರ್ ಡೇಟಾದೊಂದಿಗೆ ಹೋಲಿಸಿ, ಆಧಾರ್ ನೋಂದಾಯಿತ ವ್ಯಕ್ತಿ ಮತ್ತು ಲಸಿಕೆ ಪಡೆಯಲು ಬಂದಿರುವ ವ್ಯಕ್ತಿ ಒಬ್ಬರೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಆಧಾರ್ ಯುಐಡಿಎಐ ದತ್ತಾಂಶಕೋಶದಲ್ಲಿ ಸಂಗ್ರಹಿಸಿಡುವ ಮೂಲಕ ಲಸಿಕೆ ದುರುಪಯೋಗ ತಡೆಯುವುದು ಈ ಇಡೀ ವ್ಯವಸ್ಥೆಯ ಉದ್ದೇಶ.

ಆದರೆ, ಇದೀಗ ಹೀಗೆ ವ್ಯಕ್ತಿಯೊಬ್ಬರ ಮುಖಚರ್ಯೆಯಂತಹ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಬಳಸುವ ‘ಫೇಸಿಯಲ್ ರೆಕಗ್ನಿಷನ್ ಟೆಕ್ನಾಲಜಿ(ಎಫ್ ಆರ್ ಟಿ)’ಯ ಬಳಕೆಗಾಗಿ ಸರ್ಕಾರ ಯಾವುದೇ ರೀತಿಯ ಕಾನೂನು ಮಾನ್ಯತೆ ಪಡೆದಿಲ್ಲ! ಅಷ್ಟೇ ಅಲ್ಲ, ಆ ಸಂಬಂಧ ಯಾವುದೇ ಕಾಯ್ದೆ- ಕಾನೂನಿನ ಪ್ರಕ್ರಿಯೆಯನ್ನೂ ನಡೆಸಿಲ್ಲ ಎಂಬ ಆಘಾತಕಾರಿ ಸಂಗತಿ ಆರ್ ಟಿಐ ಅರ್ಜಿಯೊಂದಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಉತ್ತರದಿಂದ ಬಹಿರಂಗವಾಗಿದೆ.

ವ್ಯಕ್ತಿಯ ತೀರಾ ಖಾಸಗಿಯಾದ ಮತ್ತು ಸೂಕ್ಷ್ಮವಾದ ಈ ಡೇಟಾದ ವಿಷಯದಲ್ಲಿ ಕೇಂದ್ರ ಸರ್ಕಾರ ಎಷ್ಟು ನಿರ್ಲಕ್ಷ್ಯವಹಿಸಿದೆ ಎಂದರೆ; ಇಂತಹ ಎಫ್ ಆರ್ ಟಿ ತಂತ್ರಜ್ಞಾನವನ್ನು ಬಳಸಿಕೊಂಡು ಲಸಿಕೆ ಕಾರ್ಯಕ್ರಮದಂತಹ ಸಾರ್ವಜನಿಕ ಯೋಜನೆಯ ಜಾರಿಗೊಳಿಸುವುದರಿಂದಾಗಿ, ಸೂಕ್ಷ್ಮ ಡೇಟಾ ಸೋರಿಕೆ ಮತ್ತು ಅದು ತರಬಹುದಾದ ಅಪಾಯಗಳ ಬಗ್ಗೆಯಾಗಲೀ, ಅದರ ಅನಾನುಕೂಲಗಳ ಬಗ್ಗೆಯಾಗಲೀ ಬಳಕೆಗೆ ಮುಂಚೆ ಕೂಡ ಯಾವುದೇ ಅಧ್ಯಯನಗಳು ನಡೆದಿಲ್ಲ ಎಂಬುದನ್ನೂ ಆರೋಗ್ಯ ಸಚಿವಾಲಯವೇ ಖಚಿತಪಡಿಸಿದೆ!

‘ಇಂಟರ್ ನೆಟ್ ಫ್ರೀಡಂ ಫೌಂಡೇಷನ್(ಐ ಎಫ್ ಎಫ್)’ ಎಂಬ ನೆಟ್ಟಿಗರ ಹಕ್ಕುಗಳ ಕುರಿತ ಸ್ವಯಂಸೇವಾ ಸಂಸ್ಥೆಗೆ ನೀಡಿರುವ ಆರ್ ಟಿಐ ಮಾಹಿತಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.

ಡಿಜಿಟಲ್ ತಂತ್ರಜ್ಞಾನದ ಈ ಹೊತ್ತಿನಲ್ಲಿ ವ್ಯಕ್ತಿಗಳ ಬೆರಳಚ್ಚು, ಕಣ್ಣಿನ ಪಾಪೆಯ ಮಾದರಿ, ಮುಖಚರ್ಯೆ ಮತ್ತಿತರ ಸೂಕ್ಷ್ಮ ಡೇಟಾ ಕದಿಯುವ, ಸಂಗ್ರಹಿಸುವ ಮತ್ತು ಖರೀದಿಸಿ ಹಲವು ಅಕ್ರಮ ಚಟುವಟಿಕೆಗಳಿಗೆ, ದೇಶ-ವಿದೇಶದ ಬೇಹುಗಾರಿಕೆಯಂತಹ ಕೃತ್ಯಗಳಲ್ಲಿ ಬಳಸಲಾಗುತ್ತಿದೆ. ಆ ಕಾರಣಕ್ಕೆ ಇಂದು ಡೇಟಾ ಮೈನಿಂಗ್ ಮತ್ತು ಪ್ರೊಸೆಸಿಂಗ್ ಎಂಬುದು ಬಹುಕೋಟಿ ಅಕ್ರಮ ವಹಿವಾಟು ಉದ್ಯಮವಾಗಿ ಹೊರಹೊಮ್ಮಿದೆ. ಆ ಹಿನ್ನೆಲೆಯಲ್ಲೇ ಆಧಾರ್ ನಂತಹ ವ್ಯವಸ್ಥೆಯ ಬಗ್ಗೆಯೇ ಅದು ಸಂಗ್ರಹಿಸುವ ಡೇಟಾ ಸುರಕ್ಷತೆ, ಅದರಿಂದಾಗುವ ವ್ಯಕ್ತಿಯ ಖಾಸಗೀತನದ ಹಕ್ಕಿನ ಉಲ್ಲಂಘನೆಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟಿನಲ್ಲಿ ವರ್ಷಗಟ್ಟಲೆ ವಾದ- ವಿವಾದ ನಡೆದಿತ್ತು.

ಪರಿಸ್ಥಿತಿ ಇಷ್ಟು ಸೂಕ್ಷ್ಮವಿರುವಾಗ ಕೇವಲ ಲಸಿಕೆ ನೀಡಿಕೆಯಂತಹ ಒಂದು ಕಾರ್ಯಕ್ರಮಕ್ಕೆ ಎಫ್ ಆರ್ ಟಿ ತಂತ್ರಜ್ಞಾನ ಬಳಸಿ ವ್ಯಕ್ತಿಗಳ ಮುಖಚರ್ಯೆಗೆ ಸಂಬಂಧಿಸಿದ ಸೂಕ್ಷ್ಮ ಡೇಟಾ ಸಂಗ್ರಹಿಸಿರುವುದು, ಹಾಗೆ ಮಾಡುವ ಮುಂಚೆ ಅದಕ್ಕೆ ಕಾನೂನು ಬಲವಾಗಲೀ, ಆ ಡೇಟಾ ಸುರಕ್ಷಿತವಾಗಿರಲಿದೆ ಎಂಬ ಯಾವುದೇ ಖಾತರಿಯನ್ನಾಗಲೀ ನೀಡದೆ ಮತ್ತು ದೇಶದ ನಾಗರಿಕರಿಗೆ ಅಂತಹ ವ್ಯವಸ್ಥೆಯ ಬಗ್ಗೆ ಯಾವುದೇ ಮಾಹಿತಿ ನೀಡದೆ, ಜನರನ್ನು ಕತ್ತಲಲ್ಲಿಟ್ಟು ಅವರ ಸೂಕ್ಷ್ಮ ಮಾಹಿತಿಯನ್ನು ದೋಚಿರುವುದು ಇದೀಗ ಚರ್ಚೆಗೆ ಒಳಗಾಗಿದೆ. ಈ ಹಿಂದೆ ಇದೇ ಸರ್ಕಾರದ ಕೆಲವು ಇಲಾಖೆಗಳು ವಿವಿಧ ಉದ್ದೇಶಗಳಿಗಾಗಿ ಸಂಗ್ರಹಿಸಿದ್ದ ದೇಶದ ನಾಗರಿಕರ ಸೂಕ್ಷ್ಮ ಮಾಹಿತಿ-ಡೇಟಾವನ್ನು ಖಾಸಗೀ ಕಂಪನಿಗಳಿಗೆ ಮತ್ತು ಸಾರ್ವಜನಿಕ ವೇದಿಕೆಗಳೊಂದಿಗೆ ಹಂಚಿಕೊಳ್ಳುವ ಮೂಲಕ ಡೇಟಾ ಮೈನಿಂಗ್ ನಲ್ಲಿ ಭಾಗಿಯಾದ ಗಂಭೀರ ಆರೋಪಗಳು ಕೇಳಿಬಂದಿದ್ದವು. ಕೋವಿಡ್ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಕಡ್ಡಾಯಗೊಳಿಸಿದ ‘ಆರೋಗ್ಯ ಸೇತು’ ಆ್ಯಪ್ ವಿಷಯದಲ್ಲಿ ಕೂಡ ಇಂತಹ ದೂರುಗಳು ಕೇಳಿಬಂದಿದ್ದವು.

ಇದೀಗ ಲಸಿಕೆ ಕಾರ್ಯಕ್ರಮದಲ್ಲಿ ಕೂಡ ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಅಧ್ಯಯನ ಮಾಡದೆ, ಕನಿಷ್ಟ ಕಾನೂನು ರಕ್ಷಣೆಯನ್ನೂ ನೀಡದೆ ಏಕಾಏಕಿ ಮುಗುಮ್ಮಾಗಿ ಜನರ ವ್ಯಕ್ತಿಗತ ಸೂಕ್ಷ್ಮ ಡೇಟಾವನ್ನು ಸರ್ಕಾರ ಸಂಗ್ರಹಿಸಿದೆ. ಹಾಗೆ ಸಂಗ್ರಹಿಸಿದ ಟೇಟಾದ ಸುರಕ್ಷತೆ ಬಗ್ಗೆಯಾಗಲೀ, ದುರ್ಬಳಕೆಯಾಗದು ಎಂಬ ಬಗ್ಗೆಯಾಗಲೀ ಯಾವುದೇ ಖಾತ್ರಿಯನ್ನೂ ನೀಡದೆ ಸರ್ಕಾರ ಮಾಡಿರುವ ಈ ಡೇಟಾ ಮೈನಿಂಗ್ ಪರಿಣಾಮಗಳು ಇದೀಗ ಡಿಜಿಟಲ್ ಜಗತ್ತಿನ ಅಪಾಯಗಳ ಅರಿವಿರುವವರಲ್ಲಿ ಆತಂಕ ಹುಟ್ಟಿಸಿವೆ.

Tags: ಆಧಾರ್ಆರೋಗ್ಯ ಸಚಿವಾಲಯಇಂಟರ್ ನೆಟ್ ಫ್ರೀಡಂ ಫೌಂಡೇಷನ್(ಐ ಎಫ್ ಎಫ್)ಎಫ್ ಆರ್ ಟಿಕೋವಿಡ್-19ಫೇಸಿಯಲ್ ರೆಕಗ್ನಿಷನ್ ಟೆಕ್ನಾಲಜಿಯುಐಡಿಎಐಲಸಿಕೆ ಕಾರ್ಯಕ್ರಮ
Previous Post

ಫೀನಿಕ್ಸ್ ನಂತೆ ಮತ್ತೆ ಎದ್ದು ಕೂತಿದೆ ರಾಫೇಲ್ ಭೂತ!

Next Post

ಸಂಪುಟ ವಿಸ್ತರಣೆಯ ವದಂತಿ; ಸಚಿವರೊಂದಿಗೆ ನಡೆಯಬೇಕಿದ್ದ ಪ್ರಧಾನಿ ಸಭೆ ರದ್ದು

Related Posts

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
0

ಶಾಸಕರ ಅಭಿಪ್ರಾಯ ಪಕ್ಷದ ವರಿಷ್ಠರ ತೀರ್ಮಾನವಲ್ಲ, ನಾವಿಬ್ಬರೂ ವರಿಷ್ಠರ ತೀರ್ಮಾನಕ್ಕೆ ಬದ್ಧ ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮಗಳ ಸೃಷ್ಠಿ - ಊಹಾಪೋಹಗಳಿಗೆ ಆಸ್ಪದವಿಲ್ಲ-ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ,ಜುಲೈ 10 :...

Read moreDetails

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025

CM, DCM: ಸಿಎಂ, ಡಿಸಿಎಂ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ: ಜನರಿಗೆ ಯಾಮಾರಿಸಿದ್ದ ಮಹಿಳೆ ಅರೆಸ್ಟ್‌

July 9, 2025
Next Post
ಸಂಪುಟ ವಿಸ್ತರಣೆಯ ವದಂತಿ; ಸಚಿವರೊಂದಿಗೆ ನಡೆಯಬೇಕಿದ್ದ ಪ್ರಧಾನಿ ಸಭೆ ರದ್ದು

ಸಂಪುಟ ವಿಸ್ತರಣೆಯ ವದಂತಿ; ಸಚಿವರೊಂದಿಗೆ ನಡೆಯಬೇಕಿದ್ದ ಪ್ರಧಾನಿ ಸಭೆ ರದ್ದು

Please login to join discussion

Recent News

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
Top Story

ಗೃಹ ಸಚಿವರು ಏನೇ ಕೇಳಿದ್ರೂ I Dont No ಅಂತಾರೇ..!

by ಪ್ರತಿಧ್ವನಿ
July 10, 2025
5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 
Top Story

5 ವರ್ಷವೂ ನಾನೇ ಮುಖ್ಯಮಂತ್ರಿ..!! ದೆಹಲಿಯಲ್ಲೇ ಕುಳಿತು ಸಿಎಂ ಸಿದ್ದು ಮಾಸ್ಟರ್ ಸ್ಟ್ರೋಕ್ ! 

by Chetan
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

July 10, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada