ಪೇ ಸಿಎಂ ಬಳಿಕ ಸೇ ಸಿಎಂ ಅಭಿಯಾನಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಬರುವ ವಿಧಾನಸಭಾ ಚುನಾವಣೆಯಲ್ಲಿ ನೆಲಕಚ್ಚುವ ವರೆಗೂ ಕಾಂಗ್ರೆಸ್ ನಾಯಕರು ಹೇಳಿಕೆ ಕೊಡ್ತಾನೆ ಇರ್ತಾರೆ. ಅವರಿಗೆ ಜೀವನದಲ್ಲಿ ಹೋರಾಟ ಮಾಡೋದು ಗೊತ್ತಿಲ್ಲ. ಕದ್ದುಮುಚ್ಚಿ ಮಾಡೋರು. ಎನೋ ಒಂದು ಹೇಳಿಕೆ ಕೊಡೋ ಕೆಲಸ ಮಾಡ್ತಾರೆ. ಮಾಧ್ಯಮಗಳಲ್ಲಿ ಅವರ ಹೇಳಿಕೆ ಬಂದ್ರೇ ಕಾಂಗ್ರೆಸ್ ನವರ ಆತ್ಮಕ್ಕೆ ಶಾಂತಿ ಸಿಗುತ್ತೆ ಅದಕ್ಕಾಗಿ ಹೀಗೆಲ್ಲಾ ಮಾಡ್ತಾರೆ ಎಂದು ಟೀಕಿಸಿದ್ದಾರೆ.
ಆಪಾದನೆ ಮಾಡೋದಕ್ಕೆ ಅಲ್ವಾ ಕಾಂಗ್ರೆಸ್ ಇರೋದು, ಹೋರಾಟ ಮಾಡೋಕಲ್ಲ. ರಾಹುಲ್ ಗಾಂಧಿ ಬರದೇ ಇದ್ದಿದ್ದರೇ ಇವರು ಪಾದಯಾತ್ರೆ ಮಾಡ್ತಾ ಇರಲಿಲ್ಲ. ಚುನಾವಣೆ ಬಂದ ಸಂದರ್ಭದಲ್ಲಿ ನಮ್ ಕಡೆಯವರಿಗೆ ಸೀಟ್ ಕೊಡಬೇಕು. ಮಂತ್ರಿ ಮಾಡ್ಬೇಕು ಎಂಬ ಕಲ್ಪನೆಯಲ್ಲಿ ಇದ್ದಾರೆ. ಅವರೆಲ್ಲರೂ ಗೆಲ್ಲುವ ಪ್ರಶ್ನೆಯಿಲ್ಲ. ಯಾವ ಕಾರಣಕ್ಕೂ ಅವರ ಸರ್ಕಾರ ಬರಲ್ಲ. ಅವರ ಯಾವುದೇ ಹೇಳಿಕೆಗೆ ಬೆಲೆ ಇಲ್ಲ, ನಾನು ಅದಕ್ಕೆಲ್ಲ ಉತ್ತರ ಕೊಡಲ್ಲ. ಅವರ ಅಧಿಕಾರ ಅವಧಿಯಲ್ಲಿ ಎಷ್ಟು ಭರವಸೆ ಈಡೇರಿಸಿದ್ದಾರೆ…? ಎಂದು ಪ್ರಶ್ನಿಸಿದ್ದಾರೆ.
ಎಸ್ಸಿ-ಎಸ್ಟಿ ಮೀಸಲಾತಿ ಯಾಕೇ ಮಾಡಲಿಲ್ಲ.. ಅವರು ಹೇಳಿದ್ದರಲ್ಲವೇ..? ಹಿಂದುಳಿದ ವರ್ಗದ ಕಾಂತರಾಜ್ ವರದಿ ಯಾಕೆ ಮಂಡನೆ ಮಾಡಲಿಲ್ಲ. ಇವರೆಡಕ್ಕೆ ಮೊದಲು ಅವರು ಉತ್ತರ ಕೊಡಲಿ, ಆಮೇಲೆ ನಾನು ಹೇಳ್ತಿನಿ, ಬಿಜೆಪಿ ಮೇಲೆ ಆಪಾದನೆ ಮಾಡ್ತಾರೆ. ಚುನಾವಣೆ ಬರಲಿ ಕಾಯ್ತಾ ಇದ್ದೇನೆ ನೋಡೋಣ ನೀವು ಗೇಲ್ತಿರೋ.. ನಾವು ಗೇಲ್ತಿವೋ ನೋಡೋಣ ಎಂದು ಎಂದು ಸವಾಲ್ ಎಸೆದಿದ್ದಾರೆ.

ರಾಜ್ಯದಲ್ಲಿ ಹಲಾಲ್ ಕಟ್ ವಿರೋಧಿ ಆಂದೋಲನ ವಿಚಾರವಾಗಿ ಪ್ರತಿಕ್ರಿಯಿಸಿ ಹಲಾಲ್ ಕಟ್ಟೋ… ಹಲ್ಕಟ್ಟೋ.. ನನಗಂತೂ ಒಂದು ಅರ್ಥ ಅಗುತ್ತಿಲ್ಲ. ಅವರು ಅವರ ದೇವರಿಗೆ ಎಡೆ ಇಡ್ತಾರೆ.. ಹಲಾಲ್ ಕಟ್ ಮಾಡಿ ಎಡೆ ಇಡ್ತಾರಂತೆ..! ನಾವು ನಮ್ಮ ದೇವರಿಗೆ ಇಡುತ್ತೇವೆ. ಅವರು ಎಡೆ ಇಟ್ಟಿದನ್ನ ತಗೊಂಡು ನಮ್ಮ ದೇವರಿಗೆ ಇಡಬೇಕಂತೆ.
ನಮಗೇನು ಗ್ರಹಚಾರನಾ…? ಸ್ಪಷ್ಟವಾಗಿ ಹೇಳ್ತೇನೆ.. ನಾನು ಹಲಾಲ್ ಕಟ್ ಮಾಂಸ ತಿಂದಿಲ್ಲ, ತಿನ್ನೋದೂ ಇಲ್ಲ. ಕೊಲೆ, ರಾಷ್ಟ್ರದ್ರೋಹಿ ಚಟುವಟಿಕೆಗಳು ಹೆಚ್ಚಾದ ನಂತರ ಇದೆಲ್ಲಾ ಆರಂಭವಾಗಿದೆ. ಯಾವಾಗ ವಾಪಸ್ ಒದೆ ಬೀಳಲು ಆರಂಭವಾಯ್ತೋ ಬಾಯಿ ಮುಚ್ಚಿಕೊಂಡು ಸುಮ್ಮನಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಯುಗಾದಿ ಸಂದರ್ಭದಲ್ಲಿ ಹಲಾಲ್ ಕಟ್ ಬಗ್ಗೆ ಮಾತನಾಡಿದ್ರು. ಆದ್ರೇ, ಈ ಬಾರಿ ಒಬ್ಬರೂ ಸಹ ಮಾತಾಡ್ತಿಲ್ಲ. ಸ್ವಾಭಾವಿಕವಾಗಿ ಹಿಂದೂ ಸಮಾಜ ಎದ್ದು, ಜಾಗೃತವಾಗಿದೆ. ಅವರಿಗೆ ಸಿಗುವ ಲಾಭ, ಹಣವನ್ನು ದೇಶದ್ರೋಹಿ ಚಟುವಟಿಕೆಗೆ ಬಳಸ್ತಾರೆ. ಬಾಂಬ್ ತಯಾರಿಸಲು, ಭಯೋತ್ಪಾದನಾ ಕೃತ್ಯಕ್ಕೆ ಹಣ ಬಳಸ್ತಾರೆ. ನಮ್ ದುಡ್ಡಲ್ಲಿ ಲಾಭ ಮಾಡ್ಸಿ, ನಾವೇ ಬಾಂಬ್ ಹಾಕ್ಸೋಬೇಕಾ..? ಎಂದು ಹೇಳಿದ್ದಾರೆ.
ಯಾವ ಕಾರಣಕ್ಕೂ ಹಿಂದೂ ಸಮಾಜ ಸಹಿಸಲ್ಲ. ದಿನೇ ದಿನೇ ಜಾಗೃತಿಯಾಗುತ್ತಲೇ ಇದೆ. ನಾನಂತೂ ಜೀವನದಲ್ಲಿ ಹಲಾಲ್ ಮಾಂಸ ತಿಂದಿಲ್ಲ, ತಿನ್ನೋದೂ ಇಲ್ಲ. ನಾನು ಯಾವುದೇ ಮುಸಲ್ಮಾನರ ಮನೆಯಲ್ಲಿ ತಿಂದಿಲ್ಲ. ಯಾವುದೇ ಮುಸಲ್ಮಾನರ ಮನೆಗೆ ಹೋಗಿ ಅವರು ಸ್ಪಷ್ಟವಾಗಿ ಹೇಳ್ತಾರೆ. ಹಲಾಲ್ ಕಟ್ ಅಗಿರೋದಕ್ಕೆ ತಿನ್ನುತ್ತಿದ್ದೇವೆ ಎಂದು. ಯಾವುದೇ ಮುಸಲ್ಮಾನರ ಮನೆಗೆ ಹೋಗೋಕೆ ನಾನಂತೂ ಇಷ್ಟಪಡಲ್ಲ ಎಂದು ಹೇಳಿದ್ದಾರೆ.