• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

BMTCಗೆ ಭಾರವಾದ ಎಲೆಕ್ಟ್ರಿಕ್ ಬಸ್? : ಕಮಿಷನ್ ಆಸೆಗೆ ಬಲಿಯಾದ್ರಾ BMTC ಅಧಿಕಾರಿಗಳು?

ಪ್ರತಿಧ್ವನಿ by ಪ್ರತಿಧ್ವನಿ
May 2, 2022
in ಕರ್ನಾಟಕ
0
BMTCಗೆ ಭಾರವಾದ ಎಲೆಕ್ಟ್ರಿಕ್ ಬಸ್? : ಕಮಿಷನ್ ಆಸೆಗೆ ಬಲಿಯಾದ್ರಾ BMTC ಅಧಿಕಾರಿಗಳು?
Share on WhatsAppShare on FacebookShare on Telegram

ಬಿಎಂಟಿಸಿ ನಷ್ಟದ ಸುಳಿಯಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಎಂಟಿಸಿಯ ಇವತ್ತಿನ ಸ್ಥಿತಿಗೆ ವೋಲ್ವೋ, ಮಾರ್ಕೋಪೋಲೋ ಬಸ್‌ಗಳ ಕೊಡುಗೆ ಬಹಳ ದೊಡ್ಡದಿದೆ. ಇದರ ಲೀಸ್ಟ್ ಗೆ ಈಗ ಎಲೆಕ್ಟ್ರಿಕ್ ಬಸ್ ಸೇರಿಕೊಂಡಿದೆ. ಎಲೆಕ್ಟ್ರಿಕ್ ಬಸ್ ಇದೇರೀತಿ ಇನ್ನೊಂದು ಸ್ವಲ್ಪ ದಿನ ಓಡಿದರೆ ಬಿಎಂಟಿಸಿ ಬೀದಿ ಬಸವ ಆಗೋದರಲ್ಲಿ ಅನುಮಾನವೇ ಇಲ್ಲ.

ADVERTISEMENT

ಇಕೋ ಫ್ರೆಂಡ್ಲಿ ಬಸ್ ರಸ್ತೆಗಿಳಿಸ್ತಿವಿ. ಮಾಲಿನ್ಯವನ್ನ ಝೀರೋ ಮಾಡ್ತಿವಿ ಅಂತ ಬಿಎಂಟಿಸಿ ಕೋಟಿ ಕೋಟಿ ಸುರಿದು ಎಲೆಕ್ಟ್ರಿಬಸ್ ರಸ್ತೆಗಿಳಿಸಿತು. ಖಾಸಗಿ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಬಸ್ ನಿರ್ವಹಣೆಯನ್ನ ಆ ಕಂಪನಿಗೆ ವಹಿಸಿಕೊಟ್ಟಿತು. ಹೇಳೋಕೆ ಎಲೆಕ್ಟ್ರಿಕ್ ಬಸ್, ಮೆಂಟೇನೆನ್ಸ್ ಖಾಸಗಿ ಕಂಪನಿಯದ್ದು ಅವ್ರಿಗೆ ಕಿಲೋಮೀಟರ್ ಲೆಕ್ಕದಲ್ಲಿ ಕಾಸು ಕೊಟ್ರಾಯ್ತು ಬಂದ ಕಲೆಕ್ಷನ್ ಎಣಿಸಿ ಖಾಜಾನೆ ತುಂಬಿಸಿಕೊಂಡ್ರಾಯ್ತು ಅಂತ ನಿಗಮದ ಅಧಿಕಾರಿಗಳು ಲೆಕ್ಕಾಚಾರ ಹಾಕಿಕೊಂಡಿದ್ದರು. ಅಲ್ಲದೇ ಈ ಖಾಸಗಿ ಕಂಪನಿಗಳ ಜೊತೆಗಿನ ಗುತ್ತಿಗೆ ಬಗ್ಗೆ ಕಲರ್ ಕಲರ್ ಕತೆಯ್ನೂ ಹೇಳ್ತಿದ್ರು. ಆದ್ರೆ ಈ ಗುತ್ತಿಗೆ ಬಸ್ಗಳ ನಿಜ ಬಣ್ಣ ಅದಾಗ್ಲೇ ಬಯಲಾಗಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಇನ್ನಷ್ಟು ದಿನ ಓಡಿದ್ರೆ ಇಡೀ ನಿಗಮ ಏರ್ ಇಂಡಿಯಾ ರೀತಿ ಹರಾಜಾಗೋದು ಗ್ಯಾರೆಂಟಿ.

ಎಲೆಕ್ಟ್ರಿಕ್ ಬಸ್ ನಿಂದ ಆಗ್ತಿರೋ ನಷ್ಟ ಎಷ್ಟು.!?

  • ಒಟ್ಟು ಎಲೆಕ್ಟ್ರಿಕ್ ಬಸ್ : 90
  • ಪ್ರತೀ kmಗೆ ಬಿಎಂಟಿಸಿ ಪಾವತಿಸೋ ಹಣ 51.ರೂ 60 ಪೈಸೆ
  • ಒಂದು ಬಸ್‌ನ ಕನಿಷ್ಟ km ಒಪ್ಪಂದ- 180 km
  • ಒಂದು ದಿನಕ್ಕೆ ಒಂದು ಎಲೆಕ್ಟ್ರಿಕ್ ಬಸ್ ಗೆ ಪಾವತಿಸಬೇಕಾದ ಹಣ 9,288 ರೂ.
  • ಒಂದು ಎಲೆಕ್ಟ್ರಿಕ್ ಬಸ್ ನಿಂದ ಬರ್ತಿರೋ ಆದಾಯ 5,868 ರೂ
  • ಒಂದು ಎಲೆಕ್ಟ್ರಿಕ್ ಬಸ್ ನಿಂದ ಒಂದು ದಿನಕ್ಕಾಗೋ ನಷ್ಟ – 3,420 ರೂ.
  • ಪ್ರತೀ kmಗೆ ಆಗ್ತಿರೋ ನಷ್ಟ 19 ರೂ.

ನಷ್ಟದ ಅರಿವಿದ್ರೂ ಹೊಸ ಒಡಂಬಡಿಕೆಗೆ ಮುಂದಾದ ಬಿಎಂಟಿಸಿ !

ಸದ್ಯ ಬಿಎಂಟಿಸಿ NTPC ಕಂಪನಿ ಜೊತೆಗೆ ಸೇರ್ಕೊಂಡು 90ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದೆ. ಆದ್ರೆ NTPC ಕಂಪನಿ ಜೊತೆಗೆ ಬಿಎಂಟಿಸಿ ಮಾಡಿಕೊಂಡಿರೋ ಕರಾರು ಈಗ ನಿಗಮಕ್ಕೆ ಮುಳುವಾಗೋ ಎಲ್ಲಾ ಲಕ್ಷಣ ಕಾಣಿಸ್ತಿದೆ. ಕಾರಣ ಏನಂದ್ರೆ ಬಸ್ ಗೆ ಜನ ಬರ್ಲಿ ಬಾರದಿರ್ಲಿ ಪ್ರತೀ ಕಿಲೋಮೀಟರ್ಗೆ 51 ರೂ 60 ಪೈಸೆ ಯಂತೆ 180 ಕಿಲೋಮೀಟರ್ಗೆ 9.288ರೂಗಳನ್ನ ನಿತ್ಯ ಎನ್ಟಿಪಿಸಿ ಕಂಪನಿಗೆ ಪಾವತಿ ಮಾಡ್ಬೇಕು. ಆದ್ರೆ ಒಂದು ಎಲೆಕ್ಟ್ರಿಕ್ ಬಸ್ನಿಂದ ಪ್ರತಿನಿತ್ಯ ಟಿಕೆಟ್ ಪೇರ್ ಕಲೆಕ್ಷನ್ ಆಗ್ತಿರೋದು 5,868 ರೂ ಮಾತ್ರ. ಹೀಗಾಗಿ ಪ್ರತಿನಿತ್ಯ ಒಂದು ಎಲೆಕ್ಟ್ರಿಕ್ ಬಸ್ ರಸ್ತೆಗಿಳಿದ್ರೆ ನಿಗಮಕ್ಕೆ 3420ರೂ ನಷ್ಟವಾಗ್ತಿದೆ.

ಅಶೋಕ್ ಲೈಲೆಂಡ್ ಕಂಪನಿ ಜೊತೆಗೆ 300 ಬಸ್ ಒಪ್ಪಂದ !

NTPC ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡ ಕಾರಣದಿಂದಾಗಿ ನಷ್ಟವಾಗ್ತಿದೆ. ನಿಗಮಕ್ಕೆ ಆರ್ಥಿಕ ಹೊರೆಯಾಗ್ತಿದೆ ಅನ್ನೋದು ಗೊತ್ತಿದ್ರೂ ನಿಗಮ ಮತ್ತೆ 300 ಹೊಸ ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗಿದೆ. ಈ ಬಾರಿ ಅಶೋಕ್ ಲೈಲೆಂಡ್ ಕಂಪನಿ ಜೊತೆಗೆ ಒಪ್ಪಂದ ಏರ್ಪಡುತ್ತಿದ್ದು ಒಂದು ಕಿಮೀಗೆ 48 ರೂ.ನಂತೆ ನಿತ್ಯ ಒಂದು ಬಸ್ಗೆ ಮಿನಿಮಮ್ 210 ಕಿಲೋಮೀಟರ್ ನಂತೆ ಒಡಂಬಡಿಕೆ ಮಾಡಿಕೊಳ್ಳಲಾಗ್ತಿದೆ. ಈ ಒಪ್ಪಂದದ ಪ್ರಕಾರ ಸದ್ಯದ ನಷ್ಟವೇ ಮುಂದುವೆರೆದ್ರೆ ಪ್ರತೀ ಕಿಲೋಮೀಟರ್ಗಾಗೋ ನಷ್ಟ 21ರೂಗೆ ಏರಿಕೆಯಾಗೋ ಸಾದ್ಯತೆ ಇದೆ. ಇನ್ನು ಈಗಿರೋ 90 ಹಾಗೂ ಹೊಸದಾಗಿ ಬರೋ 300 ಎಲೆಕ್ಟ್ರಿಕ್ ಬಸ್ಗಳಿಂದ ನಿಗಮಕ್ಕೆ ಪ್ರತಿತಿಂಗಳು ಕನಿಷ್ಟ 4 ಕೋಟಿ 89 ಲಕ್ಷದ 24 ಸಾವಿರ ರೂ ನಷ್ಟ ಸಂಭವಿಸಲಿದೆ. ಆದ್ರೆ ನಿಗಮ ಮಾತ್ರ ಬೇರೆಯದ್ದೇ ಕತೆ ಹೇಳ್ತಿದೆ.

ಸದ್ಯ ಈ ಎರಡೂ ಕಂಪನಿಗಳ ಜೊತೆಗೆ 10 ವರ್ಷಕ್ಕೆ ಕರಾರು ಮಾಡಿಕೊಳ್ಳಲಾಗಿದೆ. ನಷ್ಟ ಎಷ್ಟೇ ಹೆಚ್ಚಾದ್ರೂ ನಿಗಮ ಮಾತ್ರ ಪ್ರತಿನಿತ್ಯ ಹಣ ಎಣಿಸ್ಲೇ ಬೇಕು. ಮಾರ್ಕೋಪೋಲೋ, ವೋಲ್ವೋ ಬಸ್ಗಳಿಂದ ಹೊಡೆತ ತಿಂದಿದ್ದ ನಿಗಮ ಎಚ್ಚೆತ್ತುಕೊಳ್ಳುತ್ತೆ, ಇನ್ಮುಂದೆ ಈ ತಪ್ಪು ಮಾಡೋದಿಲ್ಲ ಎಂದೇ ಎಲ್ಲರೂ ನಿರೀಕ್ಷೆ ಮಾಡಿದ್ರು. ಆದ್ರೆ ಎಲೆಕ್ಟ್ರಿಕ್ ಬಸ್ ವಿಚಾರದಲ್ಲಿ ಅವಿವೇಕತನದಿಂದಲೋ ಅಥವಾ ಕಮಿಷನ್ ಆಸೆಯಿಂದಲೋ ಈ ಒಪ್ಪಂದ ಮಾಡಿಕೊಂಡಿದ್ದು ಈಗ ಈ ಒಪ್ಪಂದ ನಿಗಮಕ್ಕೆ ಮರಣ ಶಾಸನವಾಗಿ ಮಾರ್ಪಟ್ಟಿದೆ.

Tags: BJPBMTCCongress PartyCovid 19ಎಚ್ ಡಿ ಕುಮಾರಸ್ವಾಮಿಕಮಿಷನ್ ಆಸೆನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಪ್ರತಿಜ್ಞೆ ಮಾಡಿದ ಬಿಜೆಪಿ ಶಾಸಕ

Next Post

ರಾಜ್ಯದಲ್ಲಿಂದು 111 ಕೊರೊನಾ ಸೋಂಕು ಪತ್ತೆ

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಮುಂಬೈ ನಂತರ ಗುಜರಾತ್‌ ನಲ್ಲಿ ಎಕ್ಸ್‌ ವಿ ವೈರಸ್‌ ಪತ್ತೆ!

ರಾಜ್ಯದಲ್ಲಿಂದು 111 ಕೊರೊನಾ ಸೋಂಕು ಪತ್ತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada