• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳು ಅಪರಾಧದ ಪಾಲುದಾರರು : ಪ್ರಧಾನಿ ಮೋದಿ ಕಿಡಿ

ಪ್ರತಿಧ್ವನಿ by ಪ್ರತಿಧ್ವನಿ
February 16, 2022
in ದೇಶ
0
ಕಾಂಗ್ರೆಸ್, ಆಮ್ ಆದ್ಮಿ ಪಕ್ಷಗಳು ಅಪರಾಧದ ಪಾಲುದಾರರು : ಪ್ರಧಾನಿ ಮೋದಿ ಕಿಡಿ

FILE PHOTO: India's Prime Minister Narendra Modi addresses a gathering before flagging off the "Dandi March", or Salt March, to celebrate the 75th anniversary of India's Independence, in Ahmedabad, India, March 12, 2021. REUTERS/Amit Dave/File Photo

Share on WhatsAppShare on FacebookShare on Telegram

ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ “ಅಪರಾಧದ ಪಾಲುದಾರರು” ಎಂದು ಆರೋಪಿಸಿದ್ದಾರೆ.

ADVERTISEMENT

ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ನಡೆದ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಎಎಪಿಯನ್ನು ಕಾಂಗ್ರೆಸ್‌ನ “ಫೋಟೋಕಾಪಿ” ಎಂದು ಜರಿದರು.

ಅಯೋಧ್ಯೆ ದೇವಸ್ಥಾನ ಅಥವಾ ಸೇನೆಯು ಏನನ್ನಾದರೂ ಮಾಡಿದಾಗ ಅವರಿಬ್ಬರಿಗೂ ಸಂತೋಷವಿಲ್ಲ. ಈ ಪಕ್ಷದವರನ್ನು ಸಹಿಸಬೇಡಿ. ಒಂದು ಪಕ್ಷವು ಪಂಜಾಬ್ ಅನ್ನು ಲೂಟಿ ಮಾಡಿದೆ. ಮತ್ತು ಇನ್ನೊಂದು ಪಕ್ಷ ದೆಹಲಿಯಲ್ಲಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಕುಟುಕಿದರು.

ದೆಹಲಿಯಲ್ಲೂ ಸರ್ಕಾರ ರಚಿಸಲು ಎಎಪಿ ಕಾಂಗ್ರೆಸ್‌ನ ಬೆಂಬಲವನ್ನು ಪಡೆದುಕೊಂಡಿದೆ. ಬಿಜೆಪಿ ಪಂಜಾಬ್ ಅನ್ನು ಪಂಜಾಬಿಯತ್‌ ದೃಷ್ಟಿಕೋನದಿಂದ ನೋಡುತ್ತದೆ. ಆದರೆ ಅವರ ಪ್ರತಿಸ್ಪರ್ಧಿಗಳು ರಾಜಕೀಯ ಶಕ್ತಿಯ ನೋಟದ ಮೂಲಕ ರಾಜ್ಯವನ್ನು ನೋಡುತ್ತಾರೆ ಎಂದು ತಿಳಿಸಿದರು.

ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್ – ಪಾಕಿಸ್ತಾನದ ದರ್ಬಾರ್ ಸಾಹಿಬ್ ಕರ್ತಾರ್‌ಪುರಕ್ಕೆ (ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಅವರ ಅಂತಿಮ ವಿಶ್ರಾಂತಿ ಸ್ಥಳ) ರಸ್ತೆಯ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿ, “ಅವರು (ಕಾಂಗ್ರೆಸ್) ಪಾಕಿಸ್ತಾನದ ಕರ್ತಾರ್‌ಪುರ ಗುರುದ್ವಾರವನ್ನು ಕೈಬಿಟ್ಟರು. ಅದನ್ನು ಭಾರತದಲ್ಲಿ ಉಳಿಸಿಕೊಳ್ಳಲು ಅವರು ಪ್ರಯತ್ನಗಳನ್ನು ಮಾಡಲಿಲ್ಲವೇಕೆ? 1965 ರಲ್ಲಿ ಅವರು ಪ್ರಯತ್ನಿಸಿದೇ ಈಗ ಮಾತನಾಡುತ್ತಾರೆ ಎಂದರು.

2016ರ ಪಠಾಣ್‌ಕೋಟ್‌ ದಾಳಿಯಲ್ಲಿ ಮಡಿದ ಯೋಧರ ತ್ಯಾಗವನ್ನು ಕಾಂಗ್ರೆಸ್ ಅವಮಾನಿಸಿದೆ. ಆ ದಾಳಿಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ದೇಶವೇ ಒಟ್ಟಾಗಿದೆ. ಸೈನಿಕರ ತ್ಯಾಗವನ್ನು ಅವರು ಅವಮಾನಿಸಿದ್ದಾರೆ. 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿಯೂ ಕಾಂಗ್ರೆಸ್ ಅದನ್ನೇ ಮಾಡುತ್ತಿದೆ. “ಪುಲ್ವಾಮಾ ವಾರ್ಷಿಕೋತ್ಸವದಂದು ಸಹ ಅವರು ತಮ್ಮ ‘ಪಾಪ್ ಲೀಲಾ’ವನ್ನು ಮುಂದುವರೆಸಿದ್ದಾರೆ ಎಂದು ಲೇವಡಿ ಮಾಡಿದರು.

ಫೆಬ್ರವರಿ 14, 2019 ರಂದು, ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಗುಂಪು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ನ ಬೆಂಗಾವಲು ಪಡೆ ಮೇಲೆ ದಾಳಿ ಮಾಡಿ 40 ಪಡೆಯ ಸಿಬ್ಬಂದಿಯನ್ನು ಕೊಂದಿತ್ತು.

ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು ನಡೆಸಿದ “ಸರ್ಜಿಕಲ್ ಸ್ಟ್ರೈಕ್” ಕುರಿತು ಪ್ರಶ್ನೆಗಳನ್ನು ಎತ್ತಿದ್ದಕ್ಕಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಜೆಪಿಯಿಂದ ಟೀಕೆಗೆ ಗುರಿಯಾಗುತ್ತಲೇ ಬಂದಿದ್ದಾರೆ.

Tags: AAPNarendra ModiPrime MinisterPulwamaRahul GandhiSUrgical Strikeunjabಎಎಪಿಕಾಂಗ್ರೆಸ್‌ನರೇಂದ್ರ ಮೋದಿಪಂಜಾಬ್‌ಪಠಾಣ್‌ಕೋಟ್‌ಪ್ರಧಾನಿರಾಹುಲ್‌ ಗಾಂಧಿಸರ್ಜಿಕಲ್ ಸ್ಟ್ರೈಕ್
Previous Post

ನಾಡೋಜ ಚೆನ್ನವೀರ ಕಣವಿ ನಿಧನ | ಕನ್ನಡ ಸಾರಸ್ವತ ಲೋಕದ ಹಿರಿಮೆ ಹೆಚ್ಚಿಸಿದ್ದ ‘ಚೆಂಬೆಳಕಿನ ಕವಿ’

Next Post

ನಟ ದೀಪ್‌ ಸಿಧು ಸಾವು | ಅಪರಿಚಿತ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು

Related Posts

ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..
Top Story

ಇಂಗ್ಲೆಂಡ್‌ ಬಗ್ಗು ಬಡೆದ “ಮರಿಹುಲಿಗಳು” : U19 ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ..

by ಪ್ರತಿಧ್ವನಿ
February 6, 2026
0

ಬೆಂಗಳೂರು : ಜಿಂಬಾಬ್ವೆಯ ಪರಾರೆಯಲ್ಲಿ ನಡೆದ ಅಂಡರ್‌-19 ಕ್ರಿಕೆಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ತಂಡ ಇಂದು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಯುವ ಭಾರತ...

Read moreDetails

ನಾವು ರಕ್ಷಣೆಗೆ ಬರಲ್ಲ, ನೀವಾಗಿಯೇ ಇರಾನ್‌ ಬಿಟ್ಟು ಬನ್ನಿ, : ಮುಸ್ಲಿಂ ರಾಷ್ಟ್ರದಲ್ಲಿನ ಅಮೆರಿಕನ್ನರಿಗೆ ಟ್ರಂಪ್‌ ಶಾಕ್..!

February 6, 2026
ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ : 30 ಜನರ ಬ**ಲಿ, ನೂರಾರು ಜನರಿಗೆ ಗಾಯ..!

ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ಸ್ಫೋಟ : 30 ಜನರ ಬ**ಲಿ, ನೂರಾರು ಜನರಿಗೆ ಗಾಯ..!

February 6, 2026
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

February 6, 2026
WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

February 6, 2026
Next Post
ನಟ ದೀಪ್‌ ಸಿಧು ಸಾವು | ಅಪರಿಚಿತ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು

ನಟ ದೀಪ್‌ ಸಿಧು ಸಾವು | ಅಪರಿಚಿತ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada