• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಗೃಹಲಕ್ಷ್ಮಿ ಯೋಜನೆ | ಇನ್ನೂ ನೋಂದಣಿ ಮಾಡಿಸಿಲ್ಲವೇ, ಆತಂಕ ಬೇಡ, ಇನ್ನೂ ಇದೆ ಸಮಯ

ಪ್ರತಿಧ್ವನಿ by ಪ್ರತಿಧ್ವನಿ
August 30, 2023
in ಕರ್ನಾಟಕ, ರಾಜಕೀಯ
0
ಗೃಹಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಯೋಜನೆ

Share on WhatsAppShare on FacebookShare on Telegram

ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ನೀವಿನ್ನೂ ನೋಂದಣಿ ಮಾಡಿಸಿಕೊಂಡಿಲ್ಲವೇ? ಹಾಗಾದರೆ ಚಿಂತೆ ಬೇಡ, ಇದಕ್ಕೆ ಸಮಯದ ಮಿತಿಯೇನೂ ಇಲ್ಲ. ಇನ್ನೂ ನೋಂದಣಿಗೆ ಈಗಲೂ ಇದೆ ಅವಕಾಶ.

ADVERTISEMENT

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಅಧಿಕೃತ ಚಾಲನೆಗೆ ಇನ್ನೇನು ಕ್ಷಣ ಗಣನೆ ಶುರುವಾಗಿದೆ. ಈಗಾಗಲೇ 1.10 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೊಂದಣಿ ಮಾಡಿಸಿದ್ದಾರೆ. ಇನ್ನೂ 60 ರಿಂದ 70 ಲಕ್ಷ ಮಹಿಳೆಯರು ನೋಂದಣಿ ಮಾಡಿಸಿಕೊಳ್ಳುವ ನಿರೀಕ್ಷೆಯಿದೆ.

ಸಾಕಷ್ಟು ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಶೇ. 60 ಮಹಿಳೆಯರು ನೋಂದಣಿ ಮಾಡಿಸಿಕೊಂಡ ಅಂದಾಜಿದೆ. ಇನ್ನೂ ಶೇ. 40 ರಷ್ಟು ಮಹಿಳೆಯರು ನೋಂದಣಿಗೆ ಒಳಗಾಗಬೇಕಾಗಿದೆ. ಇದಕ್ಕಾಗಿ ಸಮಯವನ್ನೂ ನೀಡಲಾಗಿದೆ.

ನೋಂದಣಿಗೆ ಅವಕಾಶ

ಕರ್ನಾಟಕದಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ನೋಂದಣಿಗೆ ಈಗಾಗಲೇ ಅವಕಾಶ ನೀಡಿ ಎರಡು ತಿಂಗಳೇ ಕಳೆದಿದೆ. ಕೆಲವರು ಪಡಿತರ ಕಾರ್ಡ್ ಇಲ್ಲದೇ ನೋಂದಣಿ ಮಾಡಿಸಿಕೊಂಡಿಲ್ಲ. ಬಹಳಷ್ಟು ಮಹಿಳೆಯರು ತಾಂತ್ರಿಕ ಸಮಸ್ಯೆಯಿಂದಲೂ ಮೂರ್ನಾಲ್ಕು ಬಾರಿ ಪ್ರಯತ್ನಿಸಿ ಸುಮ್ಮನಾಗಿರುವ ಸನ್ನಿವೇಶಗಳೂ ಇವೆ. ಇನ್ನು ಕೆಲವರು ಮಹಿಳೆಯರು ನೋಂದಣಿ ಮಾಡಿಸಿಕೊಳ್ಳುವ ಗೊಡವೆಗೆ ಹೋಗಿಲ್ಲ. ನಮಗೆ ಈ ಸೌಲಭ್ಯ ಬೇಡ ಎನ್ನುವವರೂ ಇದ್ದಾರೆ. ಆದರೆ ಈ ಎಲ್ಲರಿಗೂ ನೋಂದಣಿಗೆ ಮಾಡಿಸಿಕೊಳ್ಳಲು ಈಗಲೂ ಸಮಯವಿದೆ.

ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ ತೆರಳಬೇಕಿತ್ತು. ಇದೀಗ ಎಸ್ಎಂಎಸ್ ಅವಲಂಭಿಸದೇ ನೇರವಾಗಿ ನೋಂದಣಿ ಕೇಂದ್ರಗಳಿಗೆ ದಾಖಲಾತಿಗಳೊಂದಿಗೆ ತೆರಳಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ನೋಂದಣಿ ಮಾಡಿಸಿದವರಿಗೆ ಹಣ

ಈವರೆಗೂ ನೋಂದಣಿ ಮಾಡಿಸಿಕೊಂಡು ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಂಡಿರುವವರು ಗೃಹಲಕ್ಷ್ಮಿ ಯೋಜನೆಯ ಆರ್ಥಿಕ ನೆರವನ್ನು ಈ ತಿಂಗಳೇ ಪಡೆಯಲಿದ್ದಾರೆ.

ಈಗಾಗಲೇ ನೋಂದಣಿ ಮಾಡಿಸಿಕೊಂಡವರಿಗೆ ಆಗಸ್ಟ್ 30 ರಂದು ಗೃಹಲಕ್ಷ್ಮಿಗೆ ಚಾಲನೆ ನೀಡಿದ ಮರುದಿನವೇ ಅಂದರೆ ಗುರುವಾರವೇ ಖಾತೆಗೆ ತಲಾ 2000 ರೂ. ಗಳನ್ನು ಜಮೆ ಮಾಡಲಾಗುತ್ತದೆ. ಆದರೆ ಹೊಸದಾಗಿ ನೋಂದಣಿ ಮಾಡಿಸುವವರನ್ನು ಮುಂದಿನ ತಿಂಗಳಿಗೆ ಸೇರಿಸಲಾಗುತ್ತದೆ. ಅವರಿಗೆ ಈ ತಿಂಗಳ ನೆರವು ಸಿಗುವುದಿಲ್ಲ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಮುಂದಿನ ತಿಂಗಳಿನಿಂದ ಪಡೆಯಬಹುದು.

1902ಕ್ಕೆ ಕರೆ

ಇನ್ನೂ ನೋಂದಣಿಗೆ ಅವಕಾಶವಿದೆ. ಆಧಾರ್ ಕಾರ್ಡ್, ಪಡಿತರ ಚೀಟಿಯೊಂದಿಗ ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ 1902 ಸಹಾಯವಾಣಿಗೆ ಕರೆ ಮಾಡಿದರೆ ನೋಂದಣಿಗೆ ಬೇಕಾದ ಮಾಹಿತಿಯನ್ನು ನೀಡಲಾಗುತ್ತದೆ.

ಈಗಾಗಲೇ ಸಹಾಯವಾಣಿ ನೆರವು ಪಡೆದು ಹಲವರು ನೋಂದಣಿ ಮಾಡಿಸಿದ್ದಾರೆ. ಅವರಿಗೆ ಆಗುತ್ತಿರುವ ಗೊಂದಲ, ಅವರಲ್ಲಿರುವ ಅನುಮಾನಗಳ ಕುರಿತು ಮಾಹಿತಿಯನ್ನು ನೀಡಲಾಗುತ್ತಿದೆ. ಸಹಾಯವಾಣಿ ಕರೆ ಮಾಡಿ ಗೊಂದಲ ಬಗೆಹರಿಸಿಕೊಳ್ಳಬಹುದು. ಇದರ ಸೌಲಭ್ಯವನ್ನು ಪ್ರತಿಯೊಬ್ಬ ಅರ್ಹ ಮಹಿಳೆ ಕರ್ನಾಟಕದಲ್ಲಿ ಪಡೆಯಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.

Tags: Gruha Lakshmi SchemeGruhalkshmi YojaneKarnataka Governmentಕರ್ನಾಟಕ ಸರ್ಕಾರಕಾಂಗ್ರೆಸ್‌ಗೃಹಲಕ್ಷ್ಮಿ ಯೋಜನೆ
Previous Post

ಮಹಾರಾಷ್ಟ್ರ | ಎಲೆಕ್ಟ್ರಿಕ್‌ ಹಾರ್ಡ್‌ವೇರ್‌ ಮಳಿಗೆಯಲ್ಲಿ ಅಗ್ನಿ ದುರಂತ ; ನಾಲ್ಕು ಸಾವು

Next Post

ಗೃಹಲಕ್ಷ್ಮಿ | ಯೋಜನೆಗೆ ಚಾಲನೆ ಒಂದು ಐತಿಹಾಸಿಕ ದಿನ ಎಂದ ಸಿಎಂ ಸಿದ್ದರಾಮಯ್ಯ

Related Posts

ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ
Top Story

ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ

by ಪ್ರತಿಧ್ವನಿ
February 6, 2026
0

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ವಿರುದ್ಧ ಸಿಐಡಿ(CID )ಸೈಬರ್ ಕ್ರೈಂ( Cyber Crime) ವಿಭಾಗ ಭಾರೀ ಕಾರ್ಯಾಚರಣೆ ನಡೆಸಿದೆ. ಮ್ಯೂಲ್ ಅಕೌಂಟ್‌ಗಳ ಮೂಲಕ...

Read more
Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

February 6, 2026
Modi speech:  ಕಲಾಪದಲ್ಲಿ ಕೊನೆಗೂ ಮೋದಿ ಭಾಷಣ: ಹೇಳಿದ್ದೇನು ?

Modi speech: ಕಲಾಪದಲ್ಲಿ ಕೊನೆಗೂ ಮೋದಿ ಭಾಷಣ: ಹೇಳಿದ್ದೇನು ?

February 5, 2026
BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

February 5, 2026
Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌

Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌

February 5, 2026
Next Post
ಗೃಹಲಕ್ಷ್ಮಿ

ಗೃಹಲಕ್ಷ್ಮಿ | ಯೋಜನೆಗೆ ಚಾಲನೆ ಒಂದು ಐತಿಹಾಸಿಕ ದಿನ ಎಂದ ಸಿಎಂ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!