• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಎಲಾನ್ ಮಸ್ಕ್ ಅವರ ‌ʼಸ್ಟಾರ್‌ಲಿಂಕ್ʼ ಇಂಟರ್ನೆಟ್ ಸಾಹಸಕ್ಕೆ ಭಾರತ ಸರ್ಕಾರದ ಕೆಂಪುಬಾವುಟ

ರೇಣುಕ ಪ್ರಸಾದ್‌ ಹಾಡ್ಯಾ by ರೇಣುಕ ಪ್ರಸಾದ್‌ ಹಾಡ್ಯಾ
November 28, 2021
in ದೇಶ, ವಿದೇಶ
0
ಎಲಾನ್ ಮಸ್ಕ್ ಅವರ ‌ʼಸ್ಟಾರ್‌ಲಿಂಕ್ʼ ಇಂಟರ್ನೆಟ್ ಸಾಹಸಕ್ಕೆ ಭಾರತ ಸರ್ಕಾರದ ಕೆಂಪುಬಾವುಟ
Share on WhatsAppShare on FacebookShare on Telegram

ಉಪಗ್ರಹ ಆಧಾರಿತ ಇಂಟರ್ ನೆಟ್ ಸೇವೆ ಒದಗಿಸುವ ಎಲಾನ್ ಮಸ್ಕ್ ಸಾಹಸಕ್ಕೆ ಭಾರತ ಸರ್ಕಾರ ಕೆಂಪುಬಾವುಟ ತೋರಿಸಿದೆ. ಎಲಾನ್ ಮಸ್ಕ್ ಅವರ ಸ್ಪೆಸ್ಎಕ್ಸ್ ಕಂಪನಿಯ ಭಾಗವಾಗಿರುವ ಸ್ಟಾರ್ಲಿಂಕ್ ಇಂಟರ್ನೆಟ್ ಸರ್ವೀಸಸ್ ಒದಗಿಸುತ್ತಿರುವ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಬಳಸಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರವು ಗ್ರಾಹಕರಿಗೆ ಸೂಚಿಸಿದೆ.

ADVERTISEMENT

ಇಂಟರ್ನೆಟ್ ಸೇವೆ ಒದಗಿಸುವ ಮುನ್ನ ಭಾರತ ಸರ್ಕಾರ ರೂಪಿಸಿರುವ ನೀತಿ ನಿಯಮಗಳ ಪಾಲನೆ ಮತ್ತು ಅನುಸರಣೆ ಸಂಬಂಧ ಎಲಾನ್ ಮಸ್ಕ್ ಅನುಮತಿಯನ್ನು ಪಡೆದಿಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸುವುದಕ್ಕೆ ಅನುಮತಿ ನೀಡಲಾಗಿಲ್ಲ. ಗ್ರಾಹಕರು ಸ್ಟಾರ್ಲಿಂಕ್ ಇಂಟರ್ನೆಟ್ ಸರ್ವೀಸಸ್ ಸೇವೆಯನ್ನು ಬಳಸಿಕೊಳ್ಳಬಾರದು ಎಂದು ಭಾರತ ಸರ್ಕಾರ ತಿಳಿಸಿದೆ.

ಭಾರತದಲ್ಲಿ ಇಂಟರ್ನೆಟ್ ಸೇವೆ ಒದಗಿಸಲು ಮೊದಲು ಸರ್ಕಾರ ರೂಪಿಸಿರುವ ನಿಯಮಾವಳಿಗಳನ್ನು ಪೂರ್ಣಪ್ರಮಾಣದಲ್ಲಿ ಪಾಲಿಸುವವರೆಗೂ ಇಂಟರ್ನೆಟ್ ಸೇವೆ ಒದಗಿಸಲು ಗ್ರಾಹಕರನ್ನು ನೊಂದಾಯಿಸಿಕೊಳ್ಳುವುದನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ದೂರಸಂಪರ್ಕ ಇಲಾಖೆ ಸೂಚಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಉಪಗ್ರಹ ಆಧಾರಿತ ಅತಿವೇಗದ ಇಂಟರ್ನೆಟ್ ಒದಗಿಸುವ ಭರವಸೆಯೊಂದಿಗೆ ಸ್ಪೆಸೆಕ್ಸ್ ಪೂರ್ಣಮರುಪಾವತಿ ಮಾಡುವ ಠೇವಣಿ 7,400 ರುಪಾಯಿಗಳಿಗೆ ಗ್ರಾಹಕರನ್ನು ನೊಂದಾಯಿಸಿಕೊಳ್ಳಲಾರಂಭಿಸಿದೆ.

ಸ್ಟಾರ್ಲಿಂಕ್ ಇಂಟರ್ನೆಟ್ ಸರ್ವೀಸಸ್ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಅನುಮತಿ ಪರವಾನಗಿ ಪಡೆದಿಲ್ಲವಾದ್ದರಿಂದ ತಕ್ಷಣವೇ ಗ್ರಾಹಕರನ್ನು ನೊಂದಾಯಿಸಿಕೊಳ್ಳುವುದನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಿರುವುದಾಗಿ ಭಾರತ ಸರ್ಕಾರದ ದೂರಸಂಪರ್ಕ ಮತ್ತು ಸಂವಹನ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಎಲಾನ್ ಮಸ್ಕ್ ಅವರು ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸುವುದಾಗಿ ಪ್ರಕಟಿಸಿದ್ದರು. ಸೆಪ್ಟೆಂಬರ್ನಲ್ಲಿ ಮಸ್ಕ್ ಕೊನೆಯ ಬಾರಿಗೆ ಸ್ಟಾರ್ಲಿಂಕ್ಗಾಗಿ ಭಾರತದ ಯೋಜನೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದರು. ಟ್ವಿಟರ್ನಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದ ಎಲಾನ್ ಮಸ್ಕ್ ಕೇವಲ ನಿಯಂತ್ರಕರ ಅನುಮೋದನೆ ಪಡೆದುಕೊಳ್ಳುವುದ ಪ್ರಕ್ರಿಯೆಯಲ್ಲಿರುವುದಾಗಿ ತಿಳಿಸಿದ್ದರು.

ಆದರೆ, ಎಲಾನ್ ಮಸ್ಕ್ ತಾವು ಹೇಳಿದಂತೆ ಇಂಟರ್ನೆಟ್ ಸೇವೆ ಒದಗಿಸಲು ಇದುವರೆಗೆ ದೇಶದ ದೂರಸಂಪರ್ಕ ನಿಯಮಗಳನುಸಾರ ಅನುಮತಿಯನ್ನು ಪಡೆದುಕೊಂಡಿಲ್ಲ. ಈ ಕಾರಣಕ್ಕಾಗಿ ಸರ್ಕಾರವು ಗ್ರಾಹಕರು ಎಲಾನ್ ಮಸ್ಕ್ ಕಂಪನಿಯು ನೀಡುವ ಸೇವೆಯನ್ನು ಪಡೆಯದಿರುವಂತೆ ಸೂಚಿಸಿದೆ.

ಕಂಪನಿಯು ತನ್ನ ಭಾರತದ ಅಂಗಸಂಸ್ಥೆಯಾದ ಸ್ಟಾರ್ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಯಶಸ್ವಿಯಾಗಿ ನೋಂದಾಯಿಸಿದೆ ಎಂದು ಕಳೆದ ತಿಂಗಳು ಲಿಂಕ್ಡ್ಇನ್ನಲ್ಲಿ ಪ್ರಕಟಿಸಿರುವುದಾಗಿ ಸ್ಟಾರ್ಲಿಂಕ್ ಇಂಡಿಯಾ ನಿರ್ದೇಶಕ ಸಂಜಯ್ ಭಾರ್ಗವ ಹೇಳಿದ್ದಾರೆ. “ಸ್ಪೇಸ್ಎಕ್ಸ್ ಈಗ ಭಾರತದಲ್ಲಿ ಶೇ100 ರಷ್ಟು ಒಡೆತನದ ಅಂಗಸಂಸ್ಥೆಯನ್ನು ಹೊಂದಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ.” ಎಂದು ಪ್ರಕಟಿಸಿದ್ದರು.

ಕಡಿಮೆ-ಸುಪ್ತ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಕಡಿಮೆ-ಭೂಮಿಯ ಕಕ್ಷೆಯ ನೆಟ್ವರ್ಕ್ನ ಭಾಗವಾಗಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಕಂಪನಿಗಳು ಸಣ್ಣ ಉಪಗ್ರಹಗಳನ್ನು ಉಡಾವಣೆಮಾಡುತ್ತಿವೆ. ಭೂಮಂಡಲದ ಮೇಲೆ ಇಂಟರ್ನೆಟ್ ಮೂಲಸೌಕರ್ಯವು ತಲುಪಲು ಕಷ್ಟವಾಗುವ ದೂರದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನಿರ್ದಿಷ್ಟ ಗುರಿ ಈ ಕಂಪನಿಗಳದ್ದಾಗಿದೆ.

Tags: BJPCongress Partyಇಂಟರ್ನೆಟ್ ಸಾಹಸಎಲಾನ್ ಮಸ್ಕ್ಕೆಂಪುಬಾವುಟನರೇಂದ್ರ ಮೋದಿಬಿಜೆಪಿಭಾರತ ಸರ್ಕಾರಸ್ಟಾರ್‌ಲಿಂಕ್
Previous Post

ಕಾಮೆಡಿಯನ್ ಫಾರೂಕಿಯ ಬೆಂಗಳೂರು ಕಾರ್ಯಕ್ರಮ ರದ್ದು: ದಾಂಧಲೆ ಮಾಡ್ತೀವಿ ಎಂದ ಹಿಂದೂತ್ವವಾದಿ ಗುಂಪುಗಳಿಗೆ ಮಣಿದ ಪೊಲೀಸರು!

Next Post

ನಾಳೆಯಿಂದ ಸಂಸತ್ ಅಧಿವೇಶನ, ಕೃಷಿ, ಕ್ರಿಪ್ಟೋ ಕರೆನ್ಸಿ ಸೇರಿ 26 ಮಸೂದೆ ಮಂಡನೆಗೆ ಕೇಂದ್ರ ಸಜ್ಜು

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

May 26, 2026
Next Post
ನಾಳೆಯಿಂದ ಸಂಸತ್ ಅಧಿವೇಶನ, ಕೃಷಿ, ಕ್ರಿಪ್ಟೋ ಕರೆನ್ಸಿ ಸೇರಿ 26 ಮಸೂದೆ ಮಂಡನೆಗೆ ಕೇಂದ್ರ ಸಜ್ಜು

ನಾಳೆಯಿಂದ ಸಂಸತ್ ಅಧಿವೇಶನ, ಕೃಷಿ, ಕ್ರಿಪ್ಟೋ ಕರೆನ್ಸಿ ಸೇರಿ 26 ಮಸೂದೆ ಮಂಡನೆಗೆ ಕೇಂದ್ರ ಸಜ್ಜು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada